Sunday, November 30, 2008

ಆಟೋ ಅಣಿಮುತ್ತುಗಳು - ೪೯ - ಮತ್ತೊಂದು ಪಾಪ ಪುಣ್ಯ

ಲಕ್ಷ್ಮಕ್ಕ ಒಟ್ಟು ಮೂರು ಫೋಟೋ ಕಳ್ಸಿದ್ರು. ಅದ್ರಲ್ಲಿ ೨ ಮುಂಚೆ ಹಾಕಿದ್ದೆ. ಇದು ಕೊನೆಯದು.
ಕುಣಿಗಲ್ ಅಣ್ಣ ಅನ್ಸುತ್ತೆ. ಬಹಳಾ ಫೀಲಿಂಗಲ್ಲಿ ಬರೆಸಿದಾನೆ ಅನ್ಸುತ್ತೆ.
ಇದೇ ಥರಾ ಇನ್ನೊಂದು ಫೋಟೋ ಹಾಕಿದ್ದೆ ಕಟ್ಟೆಯಲ್ಲಿ. "ಪಾಪ ಪುಣ್ಯ ಹಳ್ಳೀಲಿ, ಹುಡ್ಡಿದ್ರೆ ಬೆಂಗಳೂರಲ್ಲಿ" ಅಂತಾ.
ಇದೂ ಕೂಡಾ ಅದೇ ಟೈಪು.

-----------------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

ಆಟೋ ಅಣಿಮುತ್ತುಗಳು - ೪೮ - ಮುಸ್ಸಂಜೆ ಮಲ್ಲಿಗೆ

ಇದು ಕೂಡಾ ಚಿತ್ರ-ವಿಚಿತ್ರದ ಲಕ್ಷ್ಮಕ್ಕ ಕಳ್ಸಿದ್ದು.
ಬಹಳ ದಿನಗಳಾದವು ಕಳಿಸಿ, ನಾನೇ ಯಾಕೋ ಸ್ವಲ್ಪ ತಡ ಮಾಡಿ ಹಾಕ್ತಾ ಇದೀನಿ.
ತಿಮ್ಮೇಗೌಡ್ರು ಸಾರಥ್ಯದಲ್ಲಿ "ಮುಸ್ಸಂಜೆ ಮಲ್ಲಿಗೆ" ಓದಿ. ಹಂಗೆ ಈ ಕನ್ನಡದ ತೇರನ್ನು ಏರಿ.

ಈ ಆಟೋ ಪ್ರಪಂಚಕ್ಕೆ ನಾನು ಸುಮಾರು, ಅಂದ್ರೆ ಆಲ್ಮೋಸ್ಟ್ ಒಂದೂವರೆ ವರ್ಷಗಳಿಂದ ಬೆನ್ನು ಬಿದ್ದಿದೀನಿ.
ಒಬ್ಬ ಒಂದು ಒಳ್ಳೇ ಸ್ಲೋಗನ್ ಬರೆದ್ರೆ, ಅದು ಇನ್ನು ಮಿನಿಮಂ ಹತ್ತು ಆಟೋಗಳ ಮೇಲೆ ಜೆರಾಕ್ಸ್ ಕಾಪಿ ಆಗಿರುತ್ತೆ.
ಇಲ್ಲೂ ಕಾಪಿರೈಟ್ ಆಕ್ಟ್ ತರಬೇಕು..ಅಲ್ವೆ ?


-----------------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Wednesday, November 26, 2008

ಫಾರಿನ್ ಟೂರು

ಓರ್ವ ಮಂತ್ರಿ, ಬಹಳ ಶೋಕೀಲಾಲ, ಓದು ಬರಹ ಅಷ್ಟೊಂದಿಲ್ಲಾ.
ಮಂತ್ರಿಮಂಡಲದಲ್ಲಿ ಇದ್ದಾಗ, ಮಾತು ಮಾತಿಗೂ ಫಾರಿನ್ ಟ್ರಿಪ್ಪು, ಫಾರಿನ್ ಟೂರು ಅಂತ ಎಸ್ಕೇಪು.
ಅದನ್ನ ಕಲಿಯೋಕ್ಕೆ, ಇದರ ಬಗ್ಗೆ ಮಾಹಿತಿ ಪಡೆಯೋಕ್ಕೆ ಅಂತಾ ಸಬೂಬು.
ಹೀಗೆ ಒಮ್ಮೆ ಒಂದು ದೊಡ್ಡ ಫಾರಿನ್ ಟೂರು ಮುಗುಸ್ಕೊಂಡು ವಾಪಸ್ ಬಂದ್ರು, ಮಾರನೇ ದಿನ ಪ್ರೆಸ್ ನವರು ಅಟಕಾಯ್ಸಿಕೊಂಡ್ರು.

ಪತ್ರಕರ್ತ : ಈ ಸಲ ಯಾತಕ್ಕೆ ಹೋಗಿದ್ರಿ ಫಾರಿನ್ ಟೂರ್ ಗೆ ?

ಮಂತ್ರಿ : ಆ ದೇಶದ ಒಳಚರಂಡಿ ವ್ಯವಸ್ಥೆ ಹೆಂಗಿದೆ ಅಂತಾ ಅಧ್ಯಯನ ಮಾಡಕ್ಕೆ ಹೋಗಿದ್ವಿ.

ಪತ್ರಕರ್ತ : ಅಲ್ಲಾ ಸಾರ್, ನೀವೇ ಪದೇ ಪದೇ ಬ್ರಿಟನ್, ಅಮೇರಿಕಾ, ಜರ್ಮನಿ, ಸಿಂಗಾಪುರ್ ಅಂತಾ ದೇಶಗಳಿಗೆ ಅಧ್ಯಯನ ಅದೂ ಇದೂ ಎಂದು ಫಾರಿನ್ ಟೂರಿಗೆ ಹೋಗ್ತಾ ಇರ್ತೀರ, ಆ ದೇಶದ ಮಂತ್ರಿಗಳು ಈ ಥರ ಫಾರಿನ್ ಟೂರು ಅಂತಾ ಬರ್ತಾರಾ ?

ಮಂತ್ರಿ : ಏನೂ ?? ಆ ದೇಶಗಳ ಮಂತ್ರಿಗಳು ಫಾರಿನ್ ಟ್ರಿಪ್ಪಿಗೆ ಹೋಗೋದಾ ? ಅದ್ಯಾಕ್ರೀ ಹೋಗ್ಬೇಕು ? ಅವ್ರುಗಳು ಇರೋದೇ ಫಾರಿನ್ ದೇಶದಲ್ಲಿ ತಾನೆ ?
-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Monday, November 24, 2008

ತುತ್ತಾ ಮುತ್ತಾ ?

ಮಿತ್ರ ಸುಸಂಕೃತ - Susheel ಕಳ್ಸಿದ್ದು


ಫೋಟೋದಲ್ಲಿ ಸರಿಯಾಗಿ ಕಾಣ್ಸಲ್ಲ, ನೋಡಿ.
MOTHER MAKES OR SON INTELIGANT IN 20 YEARS
BUT A GIRL MAKES HIM MENTAL IN 20 MINUTES
ಇಲ್ಲಿ HER ಅನ್ನೋ ಬದಲು, OR ಎಂದು ಬರೆದಿದ್ದಾನೆ ಭೂಪ.
-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Tuesday, November 18, 2008

ಗೌಡರ ಗದ್ದಲ

ನೆನ್ನೆ ತಾನೆ ಗಡ್ಡದ ಜ್ಞಾನಪೀಠ ಅನಂತಮೂರ್ತಿ ಜೊತೆ ಸೇರ್ಕೊಂಡು ಪುಸ್ಕ ಬರೀತೀನಿ, ಪ್ರಧಾನಿ ಆಗಿದ್ದಿದ್ರೆ ಆರೆಸ್ಸೆಸ್ ನಾ ನಿಷೇಧ ಮಾಡ್ತಿದ್ದೆ ಅಂತೆಲ್ಲಾ ಹೇಳ್ತಾ ಇದ್ದ ಮಾಜಿ ಪ್ರಧಾನಿ ದ್ಯಾವೇಗೌಡ್ರು, ನಿನ್ನೆ (ಸೋಮವಾರ) ಮಾಡಿದ ಗದ್ದಲಕ್ಕೆ ಇಡೀ ಬೆಂಗಳೂರೇ ಬೆಚ್ಚಿ ಬಿದ್ದಿದೆ.
ಜೆಡಿಎಸ್ ಒಂದು ಪ್ರಬಲ ಪ್ರಾದೇಶಿಕ ಪಕ್ಷವಾಗಿ ಹೊರಹೊಮ್ಮಲಿದೆ ಅಂತೆಲ್ಲಾ ಹೇಳಿ, ಇಷ್ಟು ಜನರಿಗೆ ಅನಾನುಕೂಲ ಉಂಟು ಮಾಡಿದಾರಲ್ಲ ? ಜೊತೆಗೆ ಚೆನ್ನಿಗಪ್ಪನವರಿಗೆ ಜೆಡಿಎಸ್ ಕಾರ್ಯಕರ್ತರು ಕೊಟ್ಟ ಧರ್ಮದೇಟು, ಟ್ರಾಫಿಕ್ ಜಾಮು..
ಜನರ ಹಿತವೇ ನಮ್ಮ ಪಕ್ಷದ ಗುರಿ, ಹಂಗೆ ಹಿಂಗೆ ಅಂತ ಹೇಳಿ, ಸೋಮವಾರದಂದೇ ಈ ಸಮಾರಂಭ ಇಟ್ಟಿದ್ರಲ್ಲ, ಇದ್ರಲ್ಲಿ ಏನೋ ಕಿರಿಕ್ಕು ಇದೆ ಅಂತ ಅನ್ಸಲ್ವಾ ? ಆಡಳಿತಾರೂಢ ಬಿಜೆಪಿ ಸರ್ಕಾರಕ್ಕೆ ಜೆಡಿಎಸ್ ನ ಬಲ ಎಷ್ಟು ಅಂತ ತೋರಿಸೋಕ್ಕೆ, ಈ ರೀತ್ಯಾಗಿ ಸೋಮವಾರದಂದೇ ನಡೆಸಿದ್ದಾರೆ ಅನ್ನುಸ್ತಾ ಇದೆ. ಇಲ್ದಿದ್ರೆ, ಜಸ್ಟ್ ಒಂದು ದಿನ ಮುಂಚೆ, ಭಾನುವಾರವೇ ಮಾಡಬೋದಿತ್ತು ತಾನೆ ? ಭಾನುವಾರ ನಡೆದಿದ್ದರೆ, ಯಾರಿಗೂ ತೊಂದ್ರೆ ಆಗ್ತಾನೆ ಇರ್ಲಿಲ್ಲ ಅಲ್ವೇ ?
ಬಿಡಿ ಸಾರ್, ಅವ್ರು ಮಾಜಿ ಪ್ರಧಾನಿ, ಏನ್ ಮಾಡುದ್ರೂ ಯೋಚನೆ ಮಾಡ್ಕೊಂಡೆ ಮಾಡೋದು. ಅಲ್ವೇ ?

ರಾಮ ರಾಮಾ..ಮಾತು ಸಾಕು, ಫೋಟೋ ನೋಡಿ.

ಫೋಟೋಗಳನ್ನು ಎತ್ತಿರೋದು ಕನ್ನಡಪ್ರಭ ಪತ್ರಿಕೆಯಿಂದ.

ಕುಮಾರನ ಕಹಳೆ


ಗೌಡರ ಗದ್ದಲ
ಅಲ್ಲಾ ಕಣ್ರೀ, ಇವ್ರು ಮಾತಾಡೋದೇ ಗುಸು ಗುಸು ಪಿಸು ಪಿಸು ಅಂತ. ಅದೂ ಮೈಕಲ್ಲಿ ಮಾತಾಡಿದಾಗ ಕೇಳೋದು, ಇವ್ರು ಕಹಳೆ ಹೆಂಗೆ ಊದುದ್ರೋ ?? ಬೇರೆಯವರು ಓದಿದ್ದನ್ನ ರೆಕಾರ್ಡ್ ಮಾಡಿ ಪ್ಲೇ ಮಾಡುದ್ರಾ ?


ಈ ಕಡೆಯಿಂದ ಆ ಕಡೆ ಓಡಾಡುತ್ತಿದ್ದ ಜೆಡಿಎಸ್ ನ ಹೊರೆ ಹೊತ್ತ ಮಹಿಳೆ. ಈ ಅಪ್ಪ ಮಕ್ಕಳು ಕೊಟ್ಟ ಕಾಟವನ್ನು ಸಹಿಸುತ್ತಿರುವ ಕನ್ನಡಿಗರ ಸಂಕೇತ.


ಜನರು ಪಟ್ಟ ಪಾಡು ನೋಡಿ
ಮೇಖ್ರಿ ಅಂಡರ್ ಪಾಸ್ ನಲ್ಲಿ



ಬೈಕಿನ ಮೇಲೆ ಲ್ಯಾಪ್ ಟಾಪ್ ಓಪನ್ ಮಾಡಿ ಕೆಲಸ ಮಾಡ್ತಾ ಇದಾರೆ ಅಂದ್ರೆ, ಜ್ಯಾಮ್ ಇನ್ಯಾವ್ ಮಟ್ಟಿಗೆ ಇತ್ತು ಅಂತ ನೀವೇ ಊಹಿಸಿ


ಊಟದ ಜೊತೆ ಉಪ್ಪಿನಕಾಯಿ ಅನ್ನೋ ರೀತಿ, ಚೆನ್ನಿಗಪ್ಪನಿಗೆ ಧರ್ಮದೇಟು ಬಿದ್ದಿದೆ.

ಚೆನ್ನಿಗಪ್ಪನವರ ವರ್ಣನೆ ನೋಡಿದರೆ, ಧರ್ಮದೇಟು ಬಿದ್ದಿಲ್ಲ, ರೇಪ್ ಆದ ಹಾಗೆ ಅನ್ಸುತ್ತೆ. ನೋಡಿ..

"ಮೂಗು, ತುಟಿಗೆ ಗಾಯ, ತೊಟ್ಟಿದ ಬಟ್ಟೆ ಚಿಂದಿ.."


ಕೊನೆಯ ಚುಟುಕು : ರಗ್ಬಿ ಆಟದಲ್ಲಿ ನಡೆದಿರುವ ಘಟನೆ. ನೀವೇ ನೋಡಿ. ಪಾಪ, ಅಭಿಷೇಕ ಮಾಡಿಸಿಕೊಂಡ ಮಹಾನುಭಾವನ ಪಾಡು ಹೇಗಿರಬೇಡ ? ಯಪ್ಪಾ...
ನಗು ಬಂದಿದ್ದು ಅಂದ್ರೆ, ಕೊನೆಯಲ್ಲಿ ಕೊಟ್ಟಿದಾರಲ್ಲ ಆ ವಾಕ್ಯ.
"ಅಬ್ಬಬ್ಬಾ, ಇಷ್ಟೊಂದು ರಭಸ .....!!"


-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Monday, November 17, 2008

ಹೊಸಾ ಬೆಸ್ಟ್ ಸೆಲ್ಲರ್ ಪುಸ್ತಕ ಬರೆಯಲು ತಯಾರಿ ನಡೆದಿದೆ !!!

ಸಖತ್ ಸುದ್ಧಿ ಅಂದ್ರೆ, ಮುಂದಿನ ಪೀಳಿಗೆಗಾಗಿ ದ್ಯಾವೇಗೌಡ್ರು ಅವರ ಅನುಭವಗಳ ಪುಸ್ತಕ ಬರೀತಾರಂತೆ.
ಈ ವಿಚಾರವನ್ನು ಸನ್ಮಾನ್ಯ ದ್ಯಾವೇಗೌಡ್ರೇ ಹೇಳ್ಕೊಂಡಿದಾರೆ. ಇವತ್ತಿನ (17 ನವೆಂಬರ್ 2008 ರ ಕನ್ನಡಪ್ರಭ ಪತ್ರಿಕೆಯಲ್ಲಿ) ನೋಡಿ...

ಏನಂತಾ ಬರೀತಾರೋ? ಯಾವ ಯಾವ ದೋಷಕ್ಕೆ ಯಾವ್ ಯಾವ ಜ್ಯೋತಿಷಿಗಳ ಹತ್ರ ಹೋಗಬೇಕು, ಯಾವ ಯಾವ್ ಕಷ್ಟಕ್ಕೆ ಯಾವ ಯಾವ ಹೋಮ, ಯಾವ್ ಯಾವ್ ಪ್ರಾಣಿನ ಬಲಿ ಕೊಡಬೇಕು ಅನ್ನೋ ಚಾರ್ಟ್ ಇರತ್ತೆ ಅನ್ಸುತ್ತೆ.
ಜೊತೆಗೆ ಈ ಪುಸ್ತಕದ ಒಂದು ಸೆಕ್ಷನ್ ನಲ್ಲಿ ಅದೇ, ರಾಜಪುರೋಹಿತರ contact details ಕೊಡ್ತಾರೆ ಅನ್ಸುತ್ತೆ.
ಪುಸ್ತಕದ ಹೆಸರು ಎನಿಡ್ತಾರೋ?

ಕಾದು ನೋಡಿ, ಮತ್ತೊಬ್ಬ ಕನ್ನಡಿಗನಿಗೆ ಬೂಕರ್ ಪ್ರಶಸ್ತಿ ಬರಬಹುದೋ ಏನೋ ?

ಇವರೆಲ್ಲರಿಗೂ ಅದ್ಯಾಕೆ ಸೆಕ್ಯುಲರಿಸಂ ಅಂದ್ರೆ ಬರೀ ಹಿಂದುಗಳನ್ನು ಟಾರ್ಗೆಟ್ ಮಾಡಿ ಬಯ್ಯೋದು ಅಂತ ತೀರ್ಮಾನಿಸಿದಾರ ? ಆರ್ಎಸ್ಸ್ಎಸ್ಸ್ ಅನ್ನು ನಿಷೇಧ ಮಾಡಿ ಅಂತ ಕೂಗಾಡೋ ಜನ, ಸಿಮಿ ಬಗ್ಗೆ ಸೋಲ್ಲೆತ್ತೋದಿಲ್ಲ, ಯಾಕೆ ? ಸನ್ಮಾನ್ಯ ದ್ಯಾವೇಗೌಡ್ರು ಪ್ರಧಾನಿ ಆಗಿದ್ದಿದ್ರೆ ಆರೆಸ್ಸೆಸ್ಸ್ ನಾ ನಿಷೆಧಿಸ್ತಾ ಇದರಂತೆ. ಇವ್ರು ಪ್ರಧಾನಿ ಆಗಿದ್ದಾಗ ಏನು ಮಾಡಿದ್ರು ? ಬಿಟ್ಟಾಕಿ ಸ್ವಾಮಿ.

ಇನ್ನು ನಮ್ಮ ಗಡ್ಡದ ಜ್ಞಾನಪೀಠ ಅನಂತಮೂರ್ತಿ ಬಗ್ಗೆ ಹೇಳೋದು ಏನೂ ಇಲ್ಲ ಅನ್ಸುತ್ತೆ. ಈ ಪ್ರಶಸ್ತಿ ಪಡೆದು ಇನ್ನೂ ಜೀವಂತವಿರುವ ಕನ್ನಡದ ಬುದ್ಧಿಜೀವಿಗಳೆಲ್ರೂ ಸಿಕ್ಕಾಪಟ್ಟೆ ಸೆಕ್ಯುಲರ್ ಆಗಿದಾರೆ. ಒಬ್ರು ಆರೆಸ್ಸೆಸ್ಸ್ ಬಗ್ಗೆ ಗುಟುರು ಹಾಕ್ತಾರೆ, ಇನ್ನೊಬ್ರು ರಾತ್ರಿ ಹೊತ್ತು ಪಬ್ಬು ಬಾರನ್ನು ೧೧ಕ್ಕೆ ಕ್ಲೋಸ್ ಮಾಡೋದು ಬೇಡಾ ಅಂತಾ ಬೀದಿಗಿಳೀತಾರೆ.

ಅಯ್ಯಯ್ಯೋ, ಮ್ಯಾಟರ್ ಎಲ್ಲೆಲ್ಲೊ ಒಯ್ತಾ ಐತೆ. ಕ್ಸಮೆ ಇರ್ಲಿ.



ಕೊನೆ ಚುಟುಕು : ಎಂ.ಪಿ. ಪ್ರಕಾಶ್, ಸಿದ್ದರಾಮಯ್ಯ ಹಾಗು ಸಿಂಧ್ಯಾರನ್ನು ಮತ್ತೆ ಜೆ.ಡಿ.ಎಸ್ಸ್ ಗೆ ಕರೆತರಬೇಕು ಅಂತಾ ಗಡ್ಡದ ಅನಂತಣ್ಣ ಹೇಳಿದಾರೆ. ಇದರ ಬಗ್ಗೆ ನಿಮ್ಮ ಅಂಬೋಣ ?
-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Thursday, November 13, 2008

ಇದ್ಯಾವ್ ಸೀಮೆ ಪತ್ರಿಕೋದ್ಯಮ ?

ಪ್ರತಿದಿನ ಆಫೀಸಿಗೆ ಬಂದ ಕೂಡಲೆ ಅರ್ಧ ಘಂಟೆ ನಮ್ಮ ಪ್ರಮುಖ ಕನ್ನಡದ ಪತ್ರಿಕೆಗಳಾದ "ಪ್ರಜಾವಾಣಿ", "ಕನ್ನಡಪ್ರಭ" ಇವುಗಳನ್ನು ಓದುವ ಅಭ್ಯಾಸ. ಹಾಗೆಯೆ ಮಧ್ಯಾಹ್ನದ ನಂತರ ಸ್ವಲ ಬಿಡುವಿದ್ದಾಗ ನಮ್ಮ ಮೈಸೂರಿನ "Star of Mysore" ಓದುತ್ತೀನಿ, ಇನ್ನೂ ಸ್ವಲ್ಪ ಜಾಸ್ತಿ ಟೈಮ್ ಇದ್ದಲ್ಲಿ, "ಸಂಜೆವಾಣಿ" ಓದುತ್ತೀನಿ.

ಮೊದಲ ಬಾರಿಗೆ http://www.sanjevani.com/ ಗೆ ಭೇಟಿ ಕೊಟ್ಟಾಗ, "first Indian newspaper to Podcast" ಅಂತ ಹಾಕಿರೋದನ್ನ ನೋಡಿ ಖುಷಿ ಪಟ್ಟೆ. ಆಮೇಲೆ ಈ ಪತ್ರಿಕೆಯನ್ನು ಓದುತ್ತಿದಂತೆ, ಟುಸ್ಸ್ ಅಂದಿತು.

ಇದ್ರಲ್ಲಿ ವರ್ಗೀಕೃತ ಜಾಹಿರಾತುಗಳದ್ದೆ ಕಾರುಬಾರು.

ಜೊತೆಗೆ "XYZ ಪಾರ್ಟಿಯ ABC ಯಾ ಜನ್ಮದಿನಕ್ಕೆ 123 ಯಾ ಶುಭಾಶಯಗಳು" ಅಂತ ಹಾಕಿಸೋ ಪುಡಾರಿ ಹಾಗು ಮರಿ ಪುಡಾರಿಗಳ ಮುಖಾರವಿಂದಗಳು.

ಇವತ್ತಂತೂ ಸಂಜೆವಾಣಿ ಓದುತ್ತಿದಂತೆ ಫುಲ್ ಉರಿದೊಯ್ತು.

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವ್ಯವಸ್ಥೆ, ಅನುಕೂಲ, ಅನಾನುಕೂಲಗಳ ಬಗ್ಗೆ ಚರ್ಚಿಸಲು ಹಾಗು ವರದಿ ಸಲ್ಲಿಸಲು ಸರ್ಕಾರ ನೇಮಿಸಿರುವ ಡಾಹೇಮಚಂದ್ರ ಸಾಗರ್ ನೇತೃತ್ವದ ಕಮಿಟಿಯ ಜೊತೆ ಸಾರ್ವಜನಿಕರ ಚರ್ಚೆ ಇತ್ತಂತೆ. ಇದರ ಬಗ್ಗೆ ಸಂಜೆವಾಣಿಯ ರಿಪೋರ್ಟು, ಆಹ್ಹಹ್ಹ... ಸೂಪರ್ರು. ಪುಟ ತುಂಬಿಸಲು ಸರಿಯಾದ ಸುಧ್ಧಿಯೂ ಇಲ್ಲದೆ, ಹಾಕಲು ಜಾಹಿರಾತುಗಳೂ ಇಲ್ಲದೆ, ಬರೆದಿದ್ದನ್ನೇ 2-3 ಸಲ ಪ್ರಿಂಟ್ ಮಾಡಿದ್ದಾರೆ. ನೋಡಿ.
ಇಡೀ ಪತ್ರಿಕೆಯಲ್ಲಿ ಓದುವಂಥಾ ಒಂದೂ ಸುದ್ಧಿ ಇಲ್ಲ. ಬೆಳಗಿನ ಎಲ್ಲಾ ನ್ಯೂಸ್ ಪೇಪರಿನಿಂದ ಆಯ್ದ ಸುದ್ಧಿಗಳನ್ನು ಇಲ್ಲಿ ಹಾಕ್ತಾರೆ.

ನಾನು ಹೇಳಿದ ಸುದ್ಧಿಯನ್ನು ಹಾಕಿದ್ದೀನಿ. ನೋಡಿ. ಎಲ್ಲಿ ಪೇಪರಿನ ಹೆಸರು ಹಾಕದೆ ಇದ್ರೆ ಇದರ Authenticity ಬಗ್ಗೆ ನಮ್ಮ ಜಾಣ ಬ್ಲಾಗೊದುಗರು ಶಂಕೆ ಇಟ್ಕೋತಾರೆ ಅಂತಾ ಪೇಪರಿನ ಹೆಸರು ಹಾಗು ಇವತ್ತಿನ ದಿನಾಂಕ ಕಾಣೋ ರೀತಿ ಚಿತ್ರ ಹಾಕಿದೀನಿ.





ಇದ್ಯಾವ್ ಸೀಮೆ ಪತ್ರಿಕೋದ್ಯಮ ಅಂತೀರಾ ?
-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Monday, November 10, 2008

Deutschland ನಲ್ಲಿ ದೀಪಾವಳಿ

ಹೊರದೇಶದಲ್ಲಿ ನಮ್ಮ ಹಬ್ಬಗಳ ಆಚರಣೆ ನಡೆಯೋದು ಅನುಕೂಲದ ಮೇಲೆ. ಅಂದ್ರೆ, ವಾರದ ದಿನಗಳಲ್ಲಿ ಸಾಧ್ಯವಿಲ್ಲ. ಸಾಧ್ಯವಿದ್ದರ ಅದು ಬರೀ ಮನೆಯಲ್ಲಿ ದೇವರ ಪೂಜೆ, ಸ್ವಲ್ಪ ಸಿಹಿ ತಿಂಡಿ, ಅಷ್ಟೆ. ರಜೆ ಹಾಕಿ, ಬಂಧು ಮಿತ್ರರ ಮನೆಗೆ ಭೇಟಿ ಬಹಳ ಕಷ್ಟ. ಆದ್ದರಿಂದ ಇಲ್ಲಿ ವೀಕೆಂಡ್ ಹಬ್ಬಗಳದ್ದೇ ಭರಾಟೆ. ಹೀಗಾಗಿಯೇ ಅಕ್ಟೋಬರ್ ತಿಂಗಳ ಕೊನೆಯಲ್ಲಿ ಬಂದ ದೀಪಾವಳಿಯನ್ನು ಜೆರ್ಮನಿಯ ಹ್ಯಾಂಬರ್ಗ್ ನಗರದ ನಮ್ಮ "ಅನಿವಾಸಿ ಭಾರತಿ" ಮಿತ್ರರು ನವೆಂಬರ್ ಎಂಟರಂದು ಬಹಳ ಅದ್ಧೂರಿಯಾಗಿ ಆಚರಿಸಿದೆವು.

ದಿನಾಂಕ : ನವೆಂಬರ್ 8, 2008

ಸ್ಥಳ : ಆಫ್ಘಾನ್ ಹಿಂದೂ ಮಂದಿರ, ರೋಥೆನ್ಬರ್ಗ್ ಸಾರ್ಟ್, ಹ್ಯಾಂಬರ್ಗ್ (ಈ ಮಂದಿರವನ್ನು ಆಫ್ಘಾನಿಸ್ತಾನದಿಂದ ಇಲ್ಲಿ ವಲಸೆ ಬಂದ ಹಿಂದೂಗಳು 1998 ರಲ್ಲಿ ಕಟ್ಟಿಸಿದರು)

ಅನಿವಾಸಿ ಭಾರತಿ ಎಂಬುದು ಭಾರತೀಯ ಸಂಘವಾದರೂ, ಬಹಳ ಖುಷಿ ಕೊಟ್ಟ ಸಂಗತಿಎಂದರೆ, ಈ ಸಂಘದಲ್ಲಿ 70% ನಮ್ಮ ಕನ್ನಡಿಗರೇ ಇರೋದು, ಹಾಗು ಇದನ್ನು ಶುರು ಮಾಡಿದವರೂ ನಮ್ಮವರೇ.

ಇಲ್ಲಿ ಸೇರಿದ್ದ ಕನ್ನಡಿಗರನ್ನು ಕಂಡಾಗ ನನ್ನ ಫ್ರೆಂಡ್ ಗೆ ಹೇಳಿದೆ: "ಗುರೂ, ಬೆಂಗಳೂರಲ್ಲೂ ಇಷ್ಟೊಂದ್ ಕನ್ನಡದವರು ಕಾಣಲ್ವಲ್ಲಮ್ಮ" ಅಂತಾ. ಅದಕ್ಕೆ ಆ ಭೂಪ: "ಅದ್ಹೆಂಗೆ ಕಾಣ್ತಾರೆ ಮಗಾ ? ಎಲ್ಲಾ ಇಲ್ಲೀ ಬಂದು ಸೇರ್ಕೊಂಡಿಲ್ವಾ" ಅನ್ನೋದಾ?

ಈ ಬಾರಿಯ ವಿಶೇಷವೆಂದರೆ, ಎಲ್ಲ ಕೆಲಸಗಳನ್ನೂ "ಅನಿವಾಸಿ ಭಾರತಿ" ಮಿತ್ರರೇ ಮಾಡಿದ್ದು.
ಸರಿ ಸುಮಾರು 300 ಜನಕ್ಕೆ ಅಡುಗೆ ಮಾಡಿ ಉಣಿಬಡಿಸಿದ್ದು ನಮ್ಮವರೇ. ನಾನು ಕೂಡ ಅಡುಗೆ ಕಮಿಟಿಯಲ್ಲಿ ಇದ್ದೆ.

ಅಡುಗೆ ಮೆನು ಹಿಂಗಿತ್ತು. ವೆಜ್ ಪಲಾವ್, ಆಲೂಗೆಡ್ಡೆ ಮೊಸರುಬಜ್ಜಿ, ಆಲೂಗೆಡ್ಡೆ ಬಜ್ಜಿ, ಕೇಸರಿ ಭಾತ್, ಮೊಸರನ್ನ, ಬರ್ಫಿ. ಪಲಾವ್ ಹಾಗು ಕೇಸರಿ ಭಾತ್ ಗೆ ಒಂದು ತೊಟ್ಟು ಕೂಡಾ ಎಣ್ಣೆ ಹಾಕಿಲ್ಲ, ಬರೀ ತುಪ್ಪದಲ್ಲೇ ಮಾಡಿದ್ದು. ಅಡುಗೆ ಮಾತ್ರ ಸೂಪರ್ ಆಗಿತ್ತು ಕಣ್ರೀ. ಎಲ್ರೂ ಚಪ್ಪರಿಸಿ ಚಪ್ಪರಿಸಿ ಹೊಡೆದ್ರು.

ಬೆಳಗ್ಗಿಂದ ಸುಮಾರು ೪೦ ಜನ "ಅನಿವಾಸಿ ಭಾರತಿ" ಮಿತ್ರರು ಸೇರಿ, ಸಭಾಂಗಣ, ಸ್ಟೇಜ್, ಧ್ವನಿವರ್ಧಕಗಳು, ಲೈಟಿಂಗ್, ಆಸನಗಳು, ಅಲಂಕಾರಗಳು, ರಂಗೋಲಿ ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡಿ ಮುಗಿಸಿದರು.ಬಂದ ಸುಮಾರು 300 ಜನರಲ್ಲಿ 56-60 ಮಂದಿ ಇಲ್ಲಿಯ ನಮ್ಮ ಜೆರ್ಮನ್ ಸಹೋದ್ಯೋಗಿಗಳು, ಅವರ ಪರಿವಾರದವರು ಇದ್ದರು. ಅವರೂ ಕೂಡ ಪಲಾವನ್ನು ಎರಡೆರಡು ಬಾರಿ ಹಾಕಿಸಿಕೊಂಡು ಚಪ್ಪರಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳು ಬಹಳ ಇದ್ದವು. ಭರತನಾಟ್ಯ, ಹಚ್ಚೇವು ಕನ್ನಡದ ದೀಪ ಹಾಡು, ಬಂಡಲ್ ಬಾಯ್ಸ್ ಇಂದ MAD ADS, ಸೋಲೋ ಹಾಡುಗಳು, ಹಾಗು ಎಲ್ಲದಕ್ಕಿಂತ ಸೂಪರ್ ಆಗಿ ಇದ್ದದ್ದು ಅಂದ್ರೆ, ಮಕ್ಕಳ ಪ್ರದರ್ಶನ. ಫ್ಯಾನ್ಸಿ ಡ್ರೆಸ್, ನೃತ್ಯ, ಕೊನೆಯದಾಗಿ ಎಲ್ಲಾ ಭಾರತೀಯ ಮಿತ್ರರಿಂದ "ಮಿಲೇ ಸುರ್ ಮೇರಾ ತುಮ್ಹಾರ" ಹಾಡು. ಸೂಪರ್ ಆಗಿತ್ತು ಕಣ್ರೀ.
ಹೊರಗೆ ಸಹಸ್ರ ದೀಪೋತ್ಸವ, ಹಾಗು, ಊಟ ಮುಗಿದ ಮೇಲೆ ಪಟಾಕಿ ಹಚ್ಚುವ ಕಾರ್ಯಕ್ರಮ.

ಮಾತು ಜಾಸ್ತಿ ಆಯ್ತು, ಈ ಕಾರ್ಯಕ್ರಮದ ಕೆಲವು ಫೋಟೋಗಳನ್ನು ನೋಡಿ. ಇನ್ನೂ ಹಲವಾರು ಫೋಟೋಗಳಿಗೆ :
http://picasaweb.google.com/mandagere.shankar/DeepawaliInHamburg
ಹಾಗು
http://picasaweb.google.com/kinagi71/DEEPAVALIHamburgGirishKN ಇಲ್ಲಿ ನೋಡಿ.

ಜೈ ಚಾಮುಂಡಿ



ಜೈ ಹನುಮಂತ



ದುರ್ಗಿಯ ಮುಂದೆ ದೀಪ



ಆಫ್ಘಾನ್ ಹಿಂದೂ ಮಂದಿರದ ಬಗ್ಗೆ ಸ್ವಲ್ಪ ಮಾಹಿತಿ



ಅನಿವಾಸಿ ಭಾರತಿ



ಪಲಾವ್ ತಯಾರಿ



ಮೊಸರುಬಜ್ಜಿಗೆ ತಯಾರಿ



ಆಲೂಗೆಡ್ಡೆ ಬಜ್ಜಿ ಮಾಡುತ್ತಾ ಇರೋದು



ಮಸ್ತ್ ಮಕ್ಕಳು - ಫ್ಯಾನ್ಸಿ ಡ್ರೆಸ್



ಕೃಷ್ಣನ ಬಾಲ ಲೀಲೆಗಳನ್ನು ಬಿಂಬಿಸೋ ನೃತ್ಯರೂಪಕ - ಸಿಂಪ್ಲಿ ಸೂಪರ್ಬ್



ಭಾರತೀಯ ಉಡುಗೆಯನ್ನು ತೊಟ್ಟಿರೋ ಜರ್ಮನ್ ಮಕ್ಕಳು. ಇವರನ್ನ ನೋಡಾದ್ರೂ ನಮ್ಮ ಜನರು ಸ್ವಲ್ಪ ತಿಳ್ಕೊಬೋದು ಆಲ್ವಾ ?


ಬಂಡಲ್ ಬಾಯ್ಸ್ ಇಂದ ಮ್ಯಾಡ್ ಆಡ್ಸ್



ಕಾರ್ಯಕ್ರಮದ ಕೊನೆಯಲ್ಲಿ ಲೋಕಾಭಿರಾಮವಾಗಿ ಮಾತಾಡ್ತಾ ಊಟ ಮಾಡ್ತಾ ಇದಾರೆ ಮಿತ್ರರು


-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Thursday, November 6, 2008

ಕೂದಲು ಕಲೆಕ್ಟ್ ಮಾಡ್ತಾರಂತೆ

ನನ್ನ ಆಪ್ತಮಿತ್ರ ಅರುಣ (ಡಾಗಿ) ಕಂಪೆನಿಯ ಕೆಲಸದ ಮೇಲೆ ಜಪಾನಿಗೆ ಹೋಗಿದಾನೆ.
ಅಲ್ಲಿ ಇಲ್ಲಿ ಅಂತ ಬೀದಿ ಸುತ್ತಡೋವಾಗ ಇದು ಕಣ್ಣಿಗೆ ಬಿತ್ತು ಅಂತ ಕ್ಲಿಕ್ಕಿಸಿದಾನೆ.
ನಂಗೆ ಕಳ್ಸಿ, "ಇದು ಏನಿರಬಹುದು ಹೇಳು ನೋಡುವಾ" ಅಂತ ಕೇಳ್ದಾ.
ಗೊತ್ತಿಲ್ಲ ಅಂದಿದ್ದಕ್ಕೆ "ಹೇರ್ ಕಟಿಂಗ್ ಸಲೂನ್ ಕಣೋ ಇದು" ಅಂದಾ.
ಆದರೂ ಹೆಸರು ಮಸ್ತಾಗಿದೆ ಅಲ್ವಾ ? CHOCOLATE HAIR COLLECTION

ಬೈ ದಿ ವೇ, ಇದನ್ನ ತೆಗೆದಿದ್ದು ಜಪಾನಿನ ಒಕಯಾಮ ನಗರದಲ್ಲಿ.


-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Wednesday, November 5, 2008

ಆಟೋ ಅಣಿಮುತ್ತುಗಳು - ೪೭ - ಅವನಲ್ದೆ ಇನ್ಯಾರು ?

ಜರ್ಮನಿಗೆ ಹೋದಮೇಲೆ ಫೋಟೋ ತೆಗೆಯೋಕ್ಕೆ ಆಟೋಗಳು ಕಾಣದೆ ಕಂಗಾಲಾಗಿದ್ದೆ.
ಅವಾಗ, ದೇವರ ಕ್ಷಮಿಸಿ...ದೇವತೆ ಥರ ಬಂದಿದ್ದು ಲಕ್ಷ್ಮಕ್ಕ.
"ಶಂಕ್ರ, ಸುಮ್ನೆ ಕಂಗಾಲು ಆಗಬೇಡಾ, ನಿನಗೆ ಇನ್ಮೇಲೆ ನಾನೇ ಆಟೋ ಫೋಟೋ ಕಳುಸ್ತೀನಿ" ಅಂದ್ರು.
ಹೋದ ಪ್ರಾಣ ವಾಪಾಸ್ ಬಂದಂಗಾಯ್ತು.ಅಂದ್ಹಾಗೆ, ಇದನ್ನೂ ಇವರೇ ಕಳ್ಸಿದ್ದು. ಇದರ ಜೊತೆ ಇನ್ನೂ ೨ ಫೋಟೋ ಕಳ್ಸಿದಾರೆ. ಅದನ್ನು ಇನ್ನೊ ಕೆಲವು ದಿನ ಬಿಟ್ಟು ಹಾಕ್ತೀನಿ.ಈ ಅಣ್ಣಾ ಯಾಕೋ ತನ್ನ ಬಗ್ಗೆಯೇ ಸಿಕ್ಕಾಪಟ್ಟೆ ಕನ್ಫ್ಯೂಸ್ ಆಗಿದಾನೆ ಅನ್ಸುತ್ತೆ, ಅಥವ ಮುಂಚೆ ಈತನನ್ನು "ಅವನು" ಎಂದು ಭಾವಿಸಿ ಇಕ್ಕಿದಾರೆ ಅನ್ಸುತ್ತೆ. ಅದಕ್ಕೆ "ನಾನವನಲ್ಲ" ಅಂತ ಬರ್ಕೊಂಡಿದಾನೆ ಆಟೋ ಮೇಲೆ.


-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ