Thursday, December 25, 2008

ಆಟೋ ಅಣಿಮುತ್ತುಗಳು - ೫೨ - ಹೃದಯದಿ ನಾನೇ ಕೊರೆದಿರುವೆ

ಈ ಫೋಟೋ ನಾನು ಬಹಳ ದಿನಗಳ ಹಿಂದೆ ತೆಗೆದಿದ್ದು. ನನ್ನ ಕಂಪ್ಯೂಟರಿನ ಯಾವುದೋ ಫೋಲ್ಡರ್ ನಲ್ಲಿ ಸೇರಿಕೊಂಡಿತ್ತು. ಇವತ್ತು ಸುಮ್ನೆ ಹುಡುಕಾಡಬೇಕಾದ್ರೆ ಕಂಡಿದ್ದು.
ಮುಂಗಾರು ಮಳೆಯು ಇವನನ್ನೂ ತೋಯಿಸಿದೆ, ಅದಕ್ಕೆ ಈತ
"ಹಣೆಯಲಿ ಬರೆಯದ ನಿನ್ನ ಹೆಸರ, ಹೃದಯದಿ ನಾನೇ ಕೊರೆದಿರುವೇ" ಅಂತಾ ಹಾಡ್ತಾ ಇದಾನೆ.

--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Tuesday, December 23, 2008

ಆಟೋ ಅಣಿಮುತ್ತುಗಳು - ೫೧ - ಕೂತು ಮಾತಾಡೋಣ ಬನ್ನಿ

ಈ ಅಣ್ಣ ಯಾಕೋ ಚರ್ಚೆಗೆ ಕರೀತಾ ಇದಾನೆ..
ನೀವೇನಾದ್ರೂ ಹೋಗ್ತೀರಾ ?

"ಸ್ನೇಹಾನೋ ಪ್ರೀತೀನೋ" ಅನ್ನೋದನ್ನ ತೀರ್ಮಾನ ಮಾಡಕ್ಕೆ, ಕೂತು ಮಾತಾಡೋಕೆ.


ಇದನ್ನು ಕೂಡಾ ಮಿತ್ರ ಅರುಣ್ ಕಳ್ಸಿದ್ದು.

--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Monday, December 22, 2008

ಆಟೋ ಅಣಿಮುತ್ತುಗಳು ಅರ್ಧ ಶತಕ ಬಾರಿಸಿದೆ

ಹೀಗೆ ಸುಮ್ನೆ ಮನೆಯಿಂದಾ ಆಫೀಸಿಗೆ ಹೋಗೋವಾಗ, ಸುಮ್ನೆ ಬೈಕ್ ಓಡುಸ್ತಾ ಹೋದ್ರೆ ತಲೆ ಕೆಟ್ಟೋಗುತ್ತೆ ಅಂತಾ ದಾರಿಯಲ್ಲಿ ಹೋಗೋ ಆಟೋಗಳನ್ನ ನೋಡಕ್ಕೆ ಶುರು ಮಾಡಿದೆ. ಅದರ ಹಿಂದೆ ಬರೆದಿರುವ ಚಿತ್ರ ವಿಚಿತ್ರ ಅಣಿಮುತ್ತುಗಳನ್ನ ನೋಡಿ ಫ್ಯಾಸಿನೇಟ್ ಆಗಿ, ಅದರ ಫೋಟೋ ತೆಗೆಯಲು ಶುರು ಮಾಡಿದೆ. ಸುಮ್ನೆ ಫೋಟೋ ತೆಗೆದರೆ ಏನೂ ಉಪಯೋಗ ಇಲ್ಲಾ, ಇದನ್ನ ಬ್ಲಾಗಿನಲ್ಲಿ ಹಾಕಿದರೆ, ನಮ್ಮ ಸ್ನೇಹಿತರೂ ಕೂಡ ಇಷ್ಟ ಪಡ್ತಾರೆ ಅನ್ನುಸ್ತು.. ಹಾಗೆ ಮಾಡ್ದೆ, ನಾನು ಅನ್ಕೊಂಡಕ್ಕಿಂತಾ ಜಾಸ್ತಿ ಇಷ್ಟ ಪಟ್ರು.

ನೋಡ್ತಾ ನೋಡ್ತಾ ಒಂದು, ಎರಡು,ಮೂರು ಅಂತಾ ಶುರು ಆಗಿದ್ದು, ಇವತ್ತು ಹಾಕಿದ ಪೋಟೋ (ಬಂತು ಬಂತು?) ಸೇರಿಸಿ ಬರೋಬ್ಬರಿ ಐವತ್ತು ಮುಟ್ಟಿದೆ. ಆಟೋ ಅಣಿಮುತ್ತುಗಳು ಸರಿಯಾಗಿ ಅರ್ಧ ಶತಕ ಬಾರಿಸಿದೆ.
ನಾನು ಭರತದಿಂದ ಜರ್ಮನಿಗೆ ಬಂದು ಎರಡುವರೆ ತಿಂಗಳಾಯಿತು. ನಾನು ಬಂದಾಗ ಸುಮಾರು 42 ಫೋತೋಗಳನ್ನು ಹಾಕಿದ್ದೆ. ಇನ್ನು ಮಿಕ್ಕಿದವು ನಿಮ್ಮಂಥಾ ಮಿತ್ರರು, ಅಭಿಮಾನಿ ದೇವ್ರುಗಳು, ಶಂಕ್ರನಿಂದ ಆಟೋ ಫೋಟೋ ತೆಗೆಯೋ ಗೀಳು ಹತ್ತಿಸಿಕೊಂಡಿರುವವರು ಕಳಿಸಿದ್ದು. ನಿಮ್ಮೆಲ್ಲರಿಗೂ ಬಹಳ ಬಹಳ ಫೀಲಿಂಗು ಇರೋ ಥ್ಯಾಂಕ್ಸು. ನಾನು ಜರ್ಮನಿಯಲ್ಲಿ ಇನ್ನೂ ಎಷ್ಟು ದಿನ ಇರ್ತೀನಿ ಅಂತಾ ಗೊತ್ತಿಲ್ಲಾ, ಅದಕ್ಕೆ ಹೀಗೇ ಕಳುಸ್ತಾ ಇರಿ, ಆದಷ್ಟು ಬೇಗ ಶತಕ ಬಾರಿಸೋಣ.
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

ಆಟೋ ಅಣಿಮುತ್ತುಗಳು - ೫೦ - ಬಂತು ಬಂತು ?

ನನ್ನ ಸ್ನೇಹಿತ ಅರುಣ್ ಕಳ್ಸಿದ್ದು.

ಅದೇನೋ ಬಂತಂತೆ.. ಹಿಡೀರಿ
ಅಥವ ಈ ಅಣ್ಣಂಗೆ ಕೂಡಾ ಗೊತ್ತಿಲ್ವಾ ಏನು ಬಂತು ಅಂತಾ ?


--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Friday, December 5, 2008

ಕರುಣಾನಿಧಿಯ ಮತ್ತೊಂದು ಕಿರಿಕ್ಕು

ಕಿರಿಕ್ಕು ಕರುಣಾನಿಧಿ, ಮತ್ತೊಂದು ಕ್ಯಾತೆ ತೆಗೆಯಲು ಸಜ್ಜಾಗಿದ್ದಾರೆ. ಬೆಂಗಳೂರಲ್ಲಿ ಕಳೆದ 20 ವರ್ಷಗಳಿಂದ ಬಟ್ಟೆಯಲ್ಲಿ ಮುಚ್ಚಲ್ಪಟ್ಟಿರುವ ತಮಿಳು ಕವಿ ತಿರುವಳ್ಳುವರ್ ಪ್ರತಿಮೆ ಸ್ಥಾಪಿಸಲು ಕೇಂದ್ರ ಸರ್ಕಾರಕ್ಕೆ ಮೊರೆ ಹೋಗಿದ್ದಾರೆ.

ಬೆಂಗಳೂರಲ್ಲಿ ತಮಿಳು ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಅನ್ನೋ ಕಾರಣಕ್ಕೆ, ತಿರುವಳ್ಳುವರ್ ಪ್ರತಿಮೆ ಸ್ಥಾಪನೆ ಮಾಡಬೇಕು ಅನ್ನೋ ಈ ಕೆಲಸ ಸುತರಾಂ ಆಗೋದಿಲ್ಲ ಅಂತಾ ನಮ್ಮ ಸರ್ಕಾರ ಹೇಳಬೇಕು, ಜೊತೆಗೆ ನಮ್ಮ ಜನರೂ ಕೂಡಾ ಇದರ ಬಗ್ಗೆ ತೀವ್ರವಾಗಿ ಪ್ರತಿಭಟಿಸಬೇಕು.

ತಮಿಳುನಾಡಿನಲ್ಲೂ ನಮ್ಮ ಕನ್ನಡಿಗರು ಸುಮಾರು ಮಂದಿ ಇದಾರೆ. ಆದ್ರೆ ಅವರಿಗೆ ಏನಾದರೂ ಸವಲತ್ತು, ಸೌಕರ್ಯ ಕೊಡ್ತಾರಾ ಈ ಕೊಂಗರು ?

ಇದೇ ವಿಷಯ ಇವತ್ತಿನ (4 Dec 2008) ನ ಪ್ರಜಾವಾಣಿಯಲ್ಲಿ ಪ್ರಕಟವಾಗಿದೆ.


ಕೊನೆಯದಾಗಿ :
ಈ ಪ್ರತಿಮೆ ವಿಚಾರದಲ್ಲಿ ಇಷ್ಟೆಲ್ಲಾ ಕ್ಯಾತೆ ಯೇಗೆಯೋ ಕರುಣಾನಿಧಿ, ತನ್ನ ರಾಜ್ಯದ ರಾಜಧಾನಿಯಾದ ಚೆನ್ನೈನಲ್ಲಿ ನಡೆದ ಅಂಬೇಡ್ಕರ್ ಲಾ ಕಾಲೇಜಿನ ಗಲಾಟೆಯನ್ನು ಈ ಲೆವಲ್ಲಿಗೆ ಹೋಗಲು ಬಿಟ್ಟಿದಾರಲ್ಲ ?? ನೋಡಿ, ಯಾವ ಪರಿ ಹೊಡೆದಿದ್ದಾರೆ ? ಅದೂ ಪೊಲೀಸರ ಮುಂದೆ.

http://www.youtube.com/watch?v=Y03ieYlFp-8

-----------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ