Thursday, November 15, 2007

ಪ್ರತಿಭೆ V/S ಎಸ್ಎಂಎಸ್

"ವಾಹ್ ಬೇಟಾ ವಾಹ್.. ತುಮ್ನೆ ಆಜ್ ಬಹುತ್ ಅಛ್ಚಾ ಗಾಯಾ ಹೈ. ದುಖ್ ಈಸ್ ಬಾತ್ ಕಾ ಹೈ ಕಿ ಮೈ ಸಿರ್ಫ್ 10 ಅಂಕ್ ದೆಸಕ್ತಾ ಹೂಂ...
ಅಗರ್ (ಮಧ್ಯೆ ಒಂದು PAUSE).... ಅಗರ್ ಮೇರೆ ಬಸ್ ಮೈ ಹೋತಾ ತೋ 15 ದೇದೇತಾ..ಜಾವೋ ಬೇಟಾ XYZ ಕಾ ಆಶಿರ್ವಾದ್ ಲೇಲೋ..."

ಯಾವುದೇ ಚಾನೆಲ್ ಹಾಕಿದ್ರೂ ಕೂಡಾ ಈ ಥರಾ ಡೈಲಾಗ್ ಇರೋ ಸಾಕಷ್ಟು ಸಂಗೀತ ಸ್ಪರ್ಧೆಗಳು ಕಾಣಸಿಗುತ್ತವೆ.
ಇಲ್ಲಿ ಪ್ರತಿಭೆಗೆ ಯಾವುದೇ ಅವಕಾಶ ಇರೋದಿಲ್ಲ..
ಜನರು ತಮ್ಮ ಮೊಬೈಲ್ನಿಂದ ಕಳಿಸೋ SMS ಗಳ ಸಂಖ್ಯೆಯಿಂದ ವಿಜೇತರನ್ನು ಆರಿಸಲಾಗುತ್ತದೆ.

ಈ ಥರ SMSನಿಂದ ಗಾಯನದಂಥಾ ಒಂದು ಸ್ಪರ್ಧೆಯ ವಿಜೇತರನ್ನು ಆರಿಸುವ ಈ ಪ್ರೋಗ್ರಾಂನ ಕಾನ್ಸೆಪ್ಟ್ ಯಾವ ಭೂಪನದ್ದು ಅಂಥ ಕೇಳ್ಬೇಕು ತಾನೆ ?

ಅದೇ ನೋಡಿ.. "INDIAN IDOL" ನಂಥಾ ಭರ್ಜರಿ ಬಹುಮಾನಗಳನ್ನು ಕೊಡುವ ಪ್ರೋಗ್ರಾಂನ ವಿಜೇತರ ಇಂದಿನ ಪಾಡು ಏನೆಂದು ?? ಮೊದಲನೆ ವಿಜೇತ ಅಭಿಜಿತ್ ಸಾವಂತ್, ಎರಡನೆಯ ವಿಜೇತರಾದ ಸಂದೀಪ್ ಆಚಾರ್ಯ, ಹಾಗು ಮೊನ್ನೆ ಮೊನ್ನೆ ಮೂರನೆಯ INDIAN IDOL ಪ್ರಶಾಂತ್ ತಮಾಂಗ್...

ಚಾನೆಲ್ ನವರು ಹೇಳುವ ರೀತಿ, ಪಬ್ಲಿಸಿಟಿ ನೋಡಿದ್ರೆ, ಈ ವಿಜೆತರೆಲ್ಲ ಇವತ್ತಿನ ದಿನ ಚಲನಚಿತ್ರ ರಂಗದಲ್ಲಿ ಒಳ್ಳೆ ಹಿನ್ನಲೆ ಗಾಯಕರಾಗಬೇಕಿತ್ತು. ಇಲ್ಲಿನ ರಿಯಾಲಿಟಿ ನೋಡಿ..
ಅಭಿಜಿತ್ ಸಾವಂತ್, ಇವತ್ತಿಗೂ ಒಂದು ಒಳ್ಳೆಯ ಅವಕಾಶವಿಲ್ಲದೆ, ತನ್ನ ಮ್ಯೂಸಿಕ್ ಆಲ್ಬಂ ತಾನೆ ಹೊರತಂದು ಆಲ್ಮೋಸ್ಟ್ ಬರ್ಬಾದ್ ಆಗೋ ಥರ ಇದಾನೆ. ಇನ್ನು ಸಂದೀಪ್ ಆಚಾರ್ಯ, ಈತನನ್ನು "INDIAN IDOL" ಶೋನಲ್ಲಿ ನೋಡಿದ ಜ್ಞಾಪಕವೇ ಯಾರಿಗೂ ಇದ್ದಂತಿಲ್ಲ.
ಇನ್ನು ಕರೆದು ಅವಕಾಶ ಕೊಟ್ಟು, ಅವನ ಧ್ವನಿಯನ್ನು ದೇಶಕ್ಕೆ ಕೇಳಿಸುವ ಕೈಂಕರ್ಯ ಯಾರು ಮಾಡುತ್ತಾರೋ, ಆ ದೇವರಿಗೆ ಗೊತ್ತು.
ಇನ್ನು ಪ್ರಶಾಂತ್ ತಮಾಂಗ್, ಅವನ ಭವಿಷ್ಯವೆಲ್ಲಿ ಇದೆಯೋ...ಕಾಲವೇ ತಿಳಿಸಬೇಕು.

ಇವರಲ್ಲಿ ಯಾರೂ ಒಳ್ಳೆಯ ಗಾಯಕರಲ್ಲ ಅಂತ ನಾನು ಹೇಳ್ತಾ ಇಲ್ಲ..ಆದ್ರೆ, ಗಾಯನ ಸ್ಪರ್ಧೆ ಅನ್ನೋದು ಅನುಭವಿ ಹಾಗು ಸಂಗೀತದ ಬಗ್ಗೆ ಒಳ್ಳೆ ಜ್ಞಾನ, ಅನುಭವ, ಇರುವ ತಿರ್ಪುಗಾರರಿಂದ ನಿರ್ಧರಿಸಲ್ಪಡಬೇಕೇ ಹೊರತು ಜನ ಮರಳೋ, ಜಾತ್ರೆ ಮರುಳೋ ಅನ್ನುವ ಹಾಗೆ ಬರುವ SMS ಮುಖೇನ ಅಲ್ಲಾ.

ಸುಮ್ನೆ ನಾಯಿ ಮರಿ ಹಾಕುವ ರೀತಿ ಜನರು ಕಳಿಸುವ SMS ಮುಖಾಂತರ ಗೆದ್ದ ವಿಜೇತರ ಪಾಡು ಇಂದು ಏನಾಗಿದೆ ??
ಇದರಲ್ಲಿ ಮೊಬೈಲ್ ಫೋನ್ ಆಪರೇಟರ್ ಹಾಗು ಚಾನೆಲ್ ನವರಿಗೆ ಲಾಭವೇ ಹೊರತು, ಅದರಲ್ಲಿ ಗೆದ್ದ ವಿಜೇತರಿಗೆ ಆಗಲೀ, ಆ ಸ್ಪರ್ಧಿಗಳ ಮೇಲೆ ಅನುಕಂಪ ಇಟ್ಟು ಪ್ರವಾಹೊಪಾದಿಯಲ್ಲಿ SMS ಕಳಿಸುವ ನಮಗೆ ಯಾವುದೇ ಉಪಯೋಗವಿಲ್ಲ..

Atleast, ವಿಜೇತರಿಗೆ ಸಾಕಷ್ಟು ಬಹುಮಾನಗಳು ಬರುತ್ತವೆ... SMS ಕಳಿಸೋ ನಮಗೆ ????
ಏನು ಇಲ್ಲ.. SMS ಮುಖಾಂತರ ಗೆದ್ದ ಸ್ಪರ್ಧಿಗಳು, ಈ ಗೆಲುವನ್ನೇ ತೀರಾ ದೊಡ್ಡದೆಂದು ಭಾವಿಸಿ, ತಮ್ಮ ಭವಿಷ್ಯವನ್ನೇ ತಿರುಗಿಸುತ್ತಾ ಇದಾರೆ...
ಹಾಗದಲ್ಲಿ, ಮುಂದಿನ ಸಾರಿ SMS ಕಳಿಸುವ ಮುನ್ನ, ಯೋಚನೆ ಮಾಡಿ. ಅದೂ ಆಗಲ್ಲ ಅಂದ್ರೆ ಸುಮ್ನೆ 3ರೂ ಚೌರ ವೆಂದಾದರೂ ಸುಮ್ಮನಿರಿ...

--------------------------------------------------------------------------------

ನಿಮ್ಮವನು,

ಕಟ್ಟೆ ಶಂಕ್ರ

1 comment:

Harisha - ಹರೀಶ said...

ಸರಿಯಾದ ಮಾತು. ಇಂಥ ಕಾರ್ಯಕ್ರಮಗಳಿಂದ ಯಾರಿಗೂ ಉಪಯೋಗವಿಲ್ಲ.