Tuesday, December 15, 2009

ಆಟೋ ಅಣಿಮುತ್ತುಗಳು - ೮೨ - ಗರ್ಭದಿಂದಲೇ ಗರ್ಜಿಸು

ಇದು ಒಬ್ಬ ಸೋಮಾರಿ ಕಟ್ಟೆ ಮಿತ್ರರು ಕಳಿಸಿದ ಚಿತ್ರ. ಭಾಷಾಭಿಮಾನ ಚೆನ್ನಾಗಿದೆ ಅಣ್ಣನಿಗೆ.
ಅಂಬಿ ಟೀಮ್ ಅಂತೆ. ಎಲ್ಲಿದೆ ಗೊತ್ತಿಲ್ಲ ಇದು.


ತಾಯಿಯ ಗರ್ಭದಿಂದಲೇ ಗರ್ಜಿಸು ಕಂದ
ನಾನೊಬ್ಬ ಕನ್ನಡಿಗ ನೆಂದು - ಅಂಬಿ ಟೀಂ

--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Tuesday, December 8, 2009

ಆಟೋ ಅಣಿಮುತ್ತುಗಳು - ೮೧ - ಉಚಿತ, ಖಚಿತ, ಶಾಶ್ವತ

ಹೀಗೆ ಮನೆಯಿಂದ ಆಫೀಸಿಗೆ ಹೋಗೋವಾಗ ಇನ್ಫೆಂಟ್ರಿ ರಸ್ತೆಯಲ್ಲಿ ಕಂಡ ಆಟೋ ಇದು.
ಆ ದೇವರಿಗೂ ನನ್ನ ಆಟೋ ಫೋಟೋ ತೆಗೆಯೋದು ಇಷ್ಟ ಅನ್ಸುತ್ತೆ. ನನ್ನ ಕಣ್ಣಿಗೆ ಈ ಥರ ಇಂಟರೆಸ್ಟಿಂಗ್ ಆಟೋ ಅಣಿಮುತ್ತು ಕಂಡಾಗಲೆಲ್ಲ ಹತ್ತಿರದಲ್ಲೇ ಸಿಗ್ನಲ್ ಬೀಳುತ್ತೆ, ಆಟೋ ನಿಲ್ಲುತ್ತೆ, ನನ್ನ ಮೊಬೈಲು ಕ್ಯಾಮೆರ ಕ್ಲಿಕ್ ಅನ್ನುತ್ತೆ.
ನನ್ನ ಈ ಕೆಲಸ ದೈವ ಪ್ರೇರೇಪಿತವಾಗಿದೆ ಅನ್ಸುತ್ತೆ. ಅಲ್ವೇ ?



ಹುಟ್ಟು ಉಚಿತ, ಸಾವು ಖಚಿತ, ಪ್ರೀತಿಯೊಂದೇ ಶಾಶ್ವತ

ಹುಟ್ಟು ಉಚಿತ ಅಲ್ಲಾ ಅನ್ಸುತ್ತೆ. ಹುಟ್ಟಿದಾಗ ಆಸ್ಪತ್ರೆಗೆ ದುಡ್ಡು, ಸತ್ತಾಗ ಕೂಡ ಆಸ್ಪತ್ರೆಗೆ, ಸ್ಮಶಾನದಲ್ಲಿ ದುಡ್ಡು, ತಿಥಿಗೆ ದುಡ್ಡು ಇತ್ಯಾದಿ. ಪ್ರೀತಿ ಕೂಡಾ ಸಖತ್ ಕಾಸ್ಟ್ಲಿಕಣ್ರೀ. ಸೋ, ಈ ಅಣ್ಣನ ಅಣಿಮುತ್ತನ್ನು ನಾನು ತಪ್ಪು ಅಂತೀನಿ.
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Tuesday, December 1, 2009

ಆಟೋ ಅಣಿಮುತ್ತುಗಳು - ೮೦ - ಭೂಮಿ ತಾಯಾಣೆ

ಫುಲ್ ಪ್ರೀತಿ ತೋಡ್ಕೊತಾ ಇದಾನೆ ಈ ಅಣ್ಣ.
ಭೂಮಿ ತಾಯಿ ಮೇಲೆ ಆಣೆ ಹಾಕ್ತಾ ಇದಾನೆ.
ಈ ಫೋಟೋ ಎಲ್ಲಿ ತೆಗೆದಿದ್ದು ಅಂತಾ ಭೂಮಿ ತಾಯಾಣೆ, ಜ್ಞಾಪಕ ಇಲ್ಲ.

ಭೂಮಿ ತಾಯಾಣೆ,
ನೀ ನಂಗೆ ಇಷ್ಟ ಕಣೇ

--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Thursday, November 26, 2009

ಆಟೋ ಅಣಿಮುತ್ತುಗಳು - ೭೯ - ನನ್ನ ದೇವರು

ಕೆಲವು ದಿನಗಳ ಹಿಂದೆ ಬ್ರಿಗೇಡ್ ಹಾಗು ರಿಚ್ಮಂಡ್ ರಸ್ತೆಯ ಜಂಕ್ಷನ್ ನಲ್ಲಿ ತೆಗೆದ ಫೋಟೋ.
ಈ ಅಣ್ಣನೇನೋ ಪ್ರಯಾಣಿಕರನ್ನು ದೇವ್ರು ಅಂತಾ ಹೇಳ್ತಾ ಇದಾನೆ. ಎಷ್ಟರ ಮಟ್ಟಿಗೆ ನಿಜವೋ ಗೊತ್ತಿಲ್ಲ.

ಪ್ರಯಾಣಿಕರೇ ನನ್ನ ದೇವರು

ಇನ್ನೊಂದು ಸುದ್ಧಿ, 24 ನವೆಂಬರಿನ ಉದಯವಾಣಿಯ "ನಮ್ಮ ಬೆಂಗಳೂರು" ಪುರವಣಿಯಲ್ಲಿ ಸೋಮಾರಿ ಕಟ್ಟೆ ಬಗ್ಗೆ ಬರಹ ಬಂದಿದೆ. ನೋಡದವರಿಗಾಗಿ ಅದನ್ನು ಸ್ಕ್ಯಾನ್ ಮಾಡಿ ಹಾಕುತಿದ್ದೇನೆ.
ಸುಮ್ನೆ ಹಂಚಿಕೊಳ್ಳಬೇಕು ಎನ್ನಿಸಿತು, ಅದಕ್ಕೆ ಹಾಕ್ತಾ ಇದ್ದೀನಿ. ಪರಾಂಬರಿಸಿ.
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Monday, November 9, 2009

ಆಟೋ ಅಣಿಮುತ್ತುಗಳು - ೭೮ - ಅಲಂಕಾರ, ಅಹಂಕಾರ

ಈ ಫೋಟೋ ತೆಗೆದದ್ದು ಸುಮಾರು ೪ ತಿಂಗಳ ಹಿಂದೆ, ಎಂ.ಜಿ. ರೋಡಿನಲ್ಲಿ.
ಹಾರೋ ಹಕ್ಕಿಗೆ ಅದೇನು ಅಲಂಕಾರವೋ ಗೊತ್ತಿಲ್ಲ.. ಆದ್ರೆ ಈ ಅಣ್ಣ ಪ್ರೀತಿಸಿದ ಹುಡುಗಿಗೆ ದುರಹಂಕಾರ ಅನ್ಸುತ್ತೆ.
ಈ ಅಣಿಮುತ್ತನ್ನು ಬರೆಸಿದ ಮೊದಲ ಆಟೋ ಇದು ಇರಬೇಕು. ಏಕೆಂದರೆ ಇದಾದ ಸುಮಾರು ಒಂದು ತಿಂಗಳ ನಂತರ ಸುಮಾರು ಆಟೋಗಳ, ಟಾಟಾ ಇಂಡಿಕಾ ಕ್ಯಾಬುಗಳ, ಟೆಂಪೋ ಟ್ರಾವೆಲರುಗಳ ಹಿಂದೆ ಇದೆ ಹಾಗು ಇದೆ ರೀತಿಯ ಸ್ಲೋಗನ್ನುಗಳು ಕಾಣಿಸತೊಡಗಿದವು. ಬರೀ ಸಾಹಿತ್ಯದಲ್ಲಿ ಕೃತಿಚೌರ್ಯ ನಡೀತಾ ಇತ್ತು, ಇಲ್ಲಿ ಕೂಡಾ ಶುರುವಾಗಿದೆ.

ದುರಹಂಕಾರ ಅನ್ನೋದನ್ನ ಬರೆದಿರುವ ಪರಿ.. ಛೆ..ಮುದ್ರಾ ರಾಕ್ಷಸನ ಹಾವಳಿಯೋ, ಅಥವಾ ಬರೆದಿರೋ ರಾಕ್ಷಸನ ಹಾವಳಿಯೋ ?

ಹಾರುವ ಹಕ್ಕಿಗೆ ಅಲಂಕಾರ
ಪ್ರೀತಿಸೋ ಹುಡುಗಿಗೆ ದುರಂಕಾರ

--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Thursday, November 5, 2009

ಆಟೋ ಅಣಿಮುತ್ತುಗಳು - ೭೭ - ಪ್ರೀತ್ಸೋದು ಇಷ್ಟ ಹೇಳೋದು ಕಷ್ಟ

ಇತ್ತೀಚೆಗೆ ನಾನು ತೆಗೆದ ಚಿತ್ರ ಇದು.
ಬಹುಶಃ ಬಸವನಗುಡಿ ಬಳಿ ಕಂಡದ್ದು ಅನ್ನಿಸುತ್ತೆ.
ಬಹಳ ಸಂಕೋಚ ಅನ್ಸುತ್ತೆ ಈ ಅಣ್ಣನಿಗೆ. ಅದಕ್ಕೆ ಚಂದ್ರಣ್ಣ ಹೀಗೆ ಹೇಳಿರೋದು.

ಪ್ರೀತ್ಸೋದು ಇಷ್ಟ ಕಣೇ
ಹೇಳೋದು ಕಷ್ಟ ಕಣೇ
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Sunday, November 1, 2009

ಆಟೋ ಅಣಿಮುತ್ತುಗಳು - ೭೬ - ಗುದ್ದಬೇಡವೋ ಗುಲಾಮ

ಮಿತ್ರ ಗುರುದಾಸ ಭಟ್ರು ಕಳಿಸಿದ ಫೋಟೋ ಇದು.
ಮೂಡಲಪಾಳ್ಯ ರಸ್ತೆಯಲ್ಲಿ ನಮ್ಮ ಭಟ್ರು ಗಾಡಿ ಮೇಲೆ ಫುಲ್ ಸರ್ಕಸ್ ಮಾಡಿ ಐದನೇ ಯತ್ನದಲ್ಲಿ ಸಫಲರಾಗಿ ಈ ಚಿತ್ರ ತೆಗೆದಿದ್ದಾರೆ. ಇದನ್ನು ನನ್ನ ಮೊಬೈಲಿನಲ್ಲಿ ಸೇವ್ ಮಾಡಿದ್ದೆ. ಈಮೆಲಿಂದ ಡಿಲೀಟ್ ಮಾಡಿದ್ದೆ. ಹಾಗಾಗಿ ಭಟ್ರು ಕಳಿಸಿದ್ದು ಅನ್ನೋದು ನೆನಪಿನಿಂದ ಹೊರಟು ಹೋಗಿತ್ತು. ಆಟೋ ಹಿಂದೆ ಬರೆದಿರೋದನ್ನ ತೆಗೆಯೋದು ಸುಲಭ, ಆದ್ರೆ ಈ ಥರ ಕೆಳಾಗಡೆ ಬರೆದಿರೋದನ್ನು ಕ್ಲಿಕ್ಕಿಸುವುದು ಬಹಳ ಕಷ್ಟ. ತುಂಬಾ ಥ್ಯಾಂಕ್ಸ್ ಕಣ್ರೀ.

ಆದರೂ ಸರಿಯಾದ ಜಾಗದಲ್ಲಿ ಸರಿಯಾಗಿ ಬರೆದಿದ್ದಾನೆ ಈ ಅಣ್ಣ.
ಆದರೂ ಗುದ್ದೊಹಾಗೆ ಬರೋದು ಇವರೇ ಅಲ್ವೇ?



ಗುದ್ದಬೇಡವೋ ಗುಲಾಮ !!
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Friday, October 30, 2009

ಆಟೋ ಅಣಿಮುತ್ತುಗಳು - ೭೫ - ನೊಂದಿರೋ ಹೃದಯ ನೋಯಿಸಬೇಡ

ಇದನ್ನೂ ಕೂಡಾ ನಮ್ಮ ಗುರುದಾಸ ಭಟ್ರು ಕಳಿಸಿದ್ದು.
ಈ ಅಣ್ಣನ ಹೃದಯ ಬಹಳ ನೊಂದಿದೆ ಎಂದು ಕಾಣುತ್ತೆ. ಅದರ ಮೇಲೆ ಯಾರೋ ತುಂಬಾ ನೋವನ್ನು ಕೊಡ್ತಾ ಇದಾರೆ ಅನ್ಸುತ್ತೆ. ಅದಕ್ಕೆ ಹೀಗೆ ಹೇಳ್ತಾ ಇರೋದು. ಜೊತೆಗೆ ತನ್ನನ್ನು ತಾನೇ ಪಾಪಿ ಎಂದು ಕರೆದುಕೊಳ್ತಾ ಇದಾನೆ ಈ ಅಣ್ಣ.


ನೊಂದಿರೋ ಹೃದಯ
ನೋಯಿಸಬೇಡಾ ಗೆಳೆಯಾ
...ಪಾಪಿ

--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Thursday, October 29, 2009

ಡೇವಿಡ್ ಶೆಪರ್ಡ್ ಇನ್ನಿಲ್ಲ

ಕ್ರಿಕೆಟ್ ಎಂಬ ಸಭ್ಯರ ಕ್ರೀಡೆಯಲ್ಲಿ ಆಟಗಾರು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಅಂಪೈರುಗಳು.
ಈಗಿನ ಥರ್ಡ್ ಅಂಪೈರುಗಳು, ರೀಪ್ಲೇ, ಕಂಪ್ಯೂಟರ್ ವಿಶ್ಲೇಷಣೆಗಳ ಮುಂಚೆಯೇ ಸಮರ್ಪಕವಾಗಿ ನಿರ್ವಹಿಸಿ, ಆಟಗಾರರ, ಪ್ರೇಕ್ಷಕರ, ಕ್ರೀಡಾ ಪ್ರೇಮಿಗಳ ಹತ್ತಿರ ಬಂದವರು "ಡೇವಿಡ್ ರಾಬರ್ಟ್ ಶೆಪರ್ಡ್"
(ಜನನ : 27-12-1940, ಮರಣ : 27-10-2009)

ಇವರು ತಮ್ಮ ಅಂಪೈರಿಂಗ್ ಬದುಕಿನಲ್ಲಿ ಒಟ್ಟು 92 ಟೆಸ್ಟ್ ಹಾಗು 172 ಒನ್ ಡೇ ಗಳಲ್ಲಿ ನಿಂತಿದ್ದಾರೆ.
ಪ್ರಾಯಶಃ ಪ್ರಪಂಚದ ಎಲ್ಲಾ ಕ್ರಿಕೆಟ್ ತಂಡಗಳಿಂದ ಪ್ರಶಂಸೆಗೆ ಒಳಗಾದ ಅಂಪೈರು ಇವರು.
ಇಂಗ್ಲೆಂಡಿನ ಡೆವನ್ (DEVON) ನ ಬೈಡ್ಫೋರ್ಡ (Bideford) ಎನ್ನುವಲ್ಲಿ ಜನ್ಮ ತಾಳಿದ ಇವರು, ತಮ್ಮ ಜೀವನವನ್ನು ಕ್ರಿಕೆಟ್ಟಿನ ಮೈದಾನದಲ್ಲೇ ಕಳೆದವರು. ಮೊದಲು Gloucestershire ತಂಡದ ಪರವಾಗಿ ಮೊದಲ ದರ್ಜೆ ಕ್ರಿಕೆಟ್ ಆಡುತ್ತಿದ್ದ ಇವರು, ತರುವಾಯ ಟೆಸ್ಟ್ ಕ್ರಿಕೆಟ್ಟಿನ ಅಂಪೈರಾಗಿ ಬಂದರು. ನಂತರ ಒನ್ ಡೇ ಮ್ಯಾಚುಗಳಿಗೆ ಕೂಡ 1983 ರಿಂದ 2005 ವರೆಗೆ ಅಂಪೈರಿಂಗ್ ಮಾಡಿದರು. ಇವರನ್ನು SHEP ಎಂದು ಕರೆಯಲಾಗುತ್ತಿತ್ತು.
ಕ್ರಿಕೆಟ್ ಜಗತ್ತಿನ ಕೊಡುಗೆಗಾಗಿ ಇವರನ್ನು Order of the British Empire ಆಗಿ ಮಾಡಲಾಯಿತು.
27 ಅಕ್ಟೋಬರ್ 2009 ರಂದು ಕ್ಯಾನ್ಸರ್ ಜೊತೆಯ ಬಹುಕಾಲದ ಹೋರಾಟದಲ್ಲಿ ಸೋತಿ, ವಿಧಿವಶರಾದರು.
ಇದನ್ನೇ ವಿಪರ್ಯಾಸ ಎನ್ನೋದು, ಒಬ್ಬ ಹೊಸ ಆಟಗಾರ ಕೈ ಗಾಯ ಮಾಡಿಕೊಂಡರೆ ಸುದ್ಧಿ ಆಗುವಷ್ಟು ಇಂಥ ಜನರು ಆಗೋದಿಲ್ಲ.
ಕ್ರಿಕೆಟ್ ಲೋಕದ ಜೆಂಟಲ್ ಮನ್ ಅಂಪೈರ್ "ಡೇವಿಡ್ ಶೆಪರ್ಡ್"ಗೆ ನಮ್ಮ ಶ್ರದ್ಧಾಂಜಲಿ. We Miss You SHEP
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Tuesday, October 27, 2009

ಆಟೋ ಅಣಿಮುತ್ತುಗಳು - ೭೪ - ಬಣ್ಣದ ಚಿಟ್ಟೆ, ನೀ ಕೆಟ್ಟೆ

ನನ್ನ ಆಟೋ ಅಣಿಮುತ್ತುಗಳ ಹೊಸಾ ಇನಿಂಗ್ಸ್ ಶುರು ಆಗಿದೆ. ಪರಾಂಬರಿಸಿ.
ಈ ಫೋಟೋ ಎಲ್ಲಿ ತೆಗೆದಿದ್ದು ಸರಿಯಾಗಿ ಜ್ಞಾಪಕ ಇಲ್ಲ. ಆದರೂ ಮೊದಲ ಬಾರಿಗೆ ಈ ಅಣಿಮುತ್ತು ಕಂಡಿದ್ದು.
ಪಕ್ಕಾ ಆಡುಭಾಷೆಯಲ್ಲಿ ಬರೆದಿದ್ದಾನೆ ಈ ಅಣ್ಣ.


--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Monday, October 26, 2009

ಶಂಕ್ರ ಸೋಮಾರಿ ಅಲ್ಲಾ !!!

ಕಳೆದ ಬಾರಿ ಬ್ಲಾಗಿನಲ್ಲಿ ಆಟೋ ಚಿತ್ರ ಹಾಕಿದ್ದು, ಆಗಸ್ಟ್ 13 ರಂದು. ಇವತ್ತಿಗೆ ಬರೋಬ್ಬರಿ ಎರಡು ತಿಂಗಳ ಮೇಲೆ ಹದಿಮೂರು ದಿನ.
ಸುಮಾರು ಜನ ಬ್ಲಾಗರ್ ಮಿತ್ರರು ಫೋನ್ ಮಾಡಿ, ಈ-ಮೇಲ್ ಕಳ್ಸಿ "ಯಾಕೋ ಶಂಕರ, ಬ್ಲಾಗ್ ಹೆಸರಿಗೆ ತಕ್ಕನಾಗಿ ಸೋಮಾರಿ ಆಗಿದ್ಯಲ್ಲೋ" ಅಂತಾ ಬೈದ್ರು (ಉಗುದ್ರು)


ಏನ್ ಮಾಡ್ಲಿ ಹೇಳಿ ಸಾರ್. ಏನೇನೋ ತಲ್ನೋವು, ಕೆಲಸ, ಅದ್ರ ಮೇಲೆ ಇನ್ನೇನೋ ಹೇಳ್ಕೊಳಕ್ಕಾಗ್ದೆ ಇರೋಂಥಾ ತೊಂದರೆಗಳು. ನನ್ ಹತ್ರ ಇನ್ನೂ ೨ ತಿಂಗಳಿಗೆ ಆಗೋ ಅಷ್ಟು ಆಟೋ ಫೋಟೋಗಳಿವೆ.
ಈ ವಾರದಿಂದ ಮತ್ತೆ ಪೋಸ್ಟಿಂಗ್ ಶುರು ಹಚ್ಕೊತೀನಿ. ೨ ತಿಂಗಳಿಂದ ಸೋಮಾರಿ ಆಗಿದ್ದ ಅಂತಾ ನನ್ನನ್ನು ಮರೀಬೇಡಿ ಅಂತಾ ಹೇಳೋಕ್ಕೆ ಈ ಸಣ್ಣ ಅಪಾಲಜಿ ಪೋಸ್ಟಿಂಗು. ಇದಕ್ಕೆ ಮುಂಚೆ ತೋರಿದ ಪ್ರೀತಿ, ಪ್ರೋತ್ಸಾಹ ಈಗ್ಲೂ ಕಂಟಿನ್ಯೂ ಆಗ್ಲಿ :)

ಕ್ಷಮೆ ಇರ್ಲಿ ಮಿತ್ರರೇ.
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Thursday, August 13, 2009

ಆಟೋ ಅಣಿಮುತ್ತುಗಳು - ೭೩ - ಅವಳು ನಕ್ಕಳು

ಕೆಲವು ದಿನಗಳ ಮುಂಚೆ ಆಫೀಸಿನ ಮುಂದೆ ಕಂಡ ಆಟೋ ಇದು.
ಯಾಕೋ ಟ್ರ್ಯಾಕು ಎಲ್ಲಿಗೋ ಹೋಗಿದೆ ಈ ಅಣ್ಣನದು.



ಅವಳು ನಕ್ಕಳು
ನಾ ಸೋತೆ..
ಅವಳು ಸಿಕ್ಕಳು
ನಾ ಸತ್ತೆ
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Tuesday, August 11, 2009

ಆಟೋ ಅಣಿಮುತ್ತುಗಳು - ೭೨ - ಕಾಣದ ಲೋಕದಲ್ಲಿ ಮೋಸದ ಪ್ರೀತಿ

ಮಿತ್ರ ಗುರುದಾಸ ಭಟ್ಟರು ಕಳಿಸಿದ ಫೋಟೋ ಇದು.
ಈ ಅಣ್ಣ ಭಗ್ನಪ್ರೇಮಿ ಇರಬಹುದು ಅಥವಾ ಕುರುಡು ಪ್ರೀತಿಯನ್ನು ಬೆನ್ನು ಹತ್ತುವ ಎಲ್ಲರನ್ನೂ ಉದ್ದೇಶಿಸಿ ಹೇಳಿರುವ ಅಣಿಮುತ್ತು ಇದು ಅನ್ಸುತ್ತೆ. ಅಲ್ವೇ ?

ಕಾಣದ ಲೋಕದಲ್ಲಿ ಮೋಸದ ಪ್ರೀತಿಯನು
ಹುಡುಕುತ ಹೋರಾಡುತ್ತಿರುವ
ಕುರುಡು ಪ್ರೇಮಿಗಳು ನಾವೆಲ್ಲ
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Friday, August 7, 2009

ಆಟೋ ಅಣಿಮುತ್ತುಗಳು - ೭೧ - ಪ್ರಯಾಣಿಕರೇ ದೇವರೆಂದರು

ಈ ಆಟೋವನ್ನು ನಾನು ಜರ್ಮನಿಗೆ ಹೋಗೋಕ್ಕೆ ಮುಂಚೆ ವಿಲ್ಸನ್ ಗಾರ್ಡನ್ ಸ್ಮಶಾನದ ಮುಂದೆ ನೋಡಿದ್ದೆ. ಸಿಕ್ಕಾಪಟ್ಟೆ ಟ್ರಾಫಿಕ್ ಇತ್ತು ಅವತ್ತು. ಆದರೂ ಕಷ್ಟ ಪಟ್ಟು ಛೇಸ್ ಮಾಡಕ್ಕೆ ಪ್ರಯತ್ನಪಟ್ಟು ಸೋತು ಸುಮ್ಮನಾಗಿದ್ದೆ. ಮತ್ತೆ ಇದು ಎಲ್ಲಿ ಕಾಣುತ್ತೋ ಅಂತಾ ಕಾಯ್ತಾ ಇದ್ದೆ.

ಹೀಗೆ ೧ ವಾರದ ಮುಂಚೆ ಆಫೀಸಿಗೆ ಹೋಗೋವಾಗ, ಇನ್ಫೆಂಟ್ರಿ ರಸ್ತೆಯಲ್ಲಿ ಕಂಡಿತು. ಬೆಳಗಿನ ಸಮಯ, ಕಮ್ಮಿ ಟ್ರಾಫಿಕ್ಕು, ಜೊತೆಗೆ ಶಿವಾಜಿನಗರ ಜಂಕ್ಷನ್ ನಲ್ಲಿ ಕಾಯ್ತಾ ಇತ್ತು ಈ ಆಟೋ. ಲಬಕ್ ಅಂತ ಮೊಬೈಲ್ ಹೊರಗೆ ತೆಗೆದು, ಗಬಕ್ ಅಂತಾ ಫೋಟೋ ಹೊಡೆದೆ.


ಇದಕ್ಕೆ ಮುಂಚೆ ನೋಡಿದಾಗ ಬರಹ ಹೀಗೆ ಇತ್ತು -
ಅಭಿಮಾನಿಗಳೇ ದೇವರೆಂದರು ....ಡಾ ರಾಜಣ್ಣ
ಪ್ರಯಾಣಿಕರೇ ದೇವರೆಂದರು ..... ಮಿ ಕೆಂಪಣ್ಣ

ಆದ್ರೆ ಈಗ ಪಾಪ ಕೆಂಪಣ್ಣನವರ ಹೆಸರು, ಉಜ್ಜಿ ಉಜ್ಜಿ ಮಾಯವಾಗಿದೆ.
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Friday, July 31, 2009

ತರ್ಜುಮೆ ಎಂದರೆ ಇದು !!

ಇಂದು ಆಫೀಸಿನ ಈ ಮೇಲಿನಲ್ಲಿ ಬಂದದ್ದು ಇದು.
ಒಂದು ಭಾಷೆಯನ್ನೂ ಎಷ್ಟು ಕೊಲೆ ಮಾಡಬಹುದೋ ಅಷ್ಟೂ ಮಾಡಿದಾರೆ.
ಮಕ್ಕಿ ಕಾ ಮಕ್ಕಿ ತರ್ಜುಮೆ ಅಂದರೆ ಇದೇ ಅಂತಾ ಕಾಣುತ್ತೆ. ಪುಣ್ಯಾತ್ಮರು !!!

ಯಾವ ಜಾಗ, ಯಾರು ತೆಗೆದ ಫೋಟೋ ಅನ್ನೋದು ಗೊತ್ತಿಲ್ಲ.. ಆದರೂ ಕೂಡಾ ಹಾಕುತ್ತಾ ಇದ್ದೀನಿ.
ಏಕೆಂದರೆ ಬಹಳ ಸ್ವಾರಸ್ಯಕರವಾಗಿ ಕಾಣಿಸಿತು. ಈ ಫೋಟೋ ತೆಗೆದವರಿಗೆ ಇದರಿಂದ ಏನಾದರೂ ಅಭ್ಯಂತರವಿದ್ದಲ್ಲಿ ದಯವಿಟ್ಟು ತಿಳಿಸಿ, ತಕ್ಷಣ ತೆಗೆಯುವೆ.
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Tuesday, July 28, 2009

ಆಟೋ ಅಣಿಮುತ್ತುಗಳು - ೭೦ - ನಲ್ಲೆಯ ಕರೆಗಳು

ಮಿತ್ರ ಗುರುದಾಸ ಭಟ್ಟರು ಇದನ್ನು ಕಳ್ಸಿದಾರೆ.
ಇದರ ಬಗ್ಗೆ ಏನನ್ನೂ ಹೇಳೋಕ್ಕಿಲ್ಲ..
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Thursday, July 23, 2009

ಆಟೋ ಅಣಿಮುತ್ತುಗಳು - ೬೯ - ಹುಟ್ಟು ದರಿದ್ರವಾದರೂ

ಕೆಲವು ದಿನಗಳ ಮುಂಚೆ, ಬ್ರಿಗೇಡ್ ರಸ್ತೆಯ ಬಳಿ ಸಿಕ್ಕ ಆಟೋ ಫೋಟೋ ಇದು.
ಈ ಅಣ್ಣ ಕೂಡಾ ಮನುಷ್ಯನ ಗುರುತು ಆತನ ಹುಟ್ಟಿನಿಂದಲ್ಲಾ, ಆತನ ನಡತೆಯಿಂದ ಎನ್ನುವುದನ್ನು ಬಹಳ ಚೆನ್ನಾಗಿ ಹೇಳಿದ್ದಾನೆ.
ನೋಡಿ :

--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Thursday, July 16, 2009

ಬರವಣಿಗೆ ಅಧ್ವಾನ

ಕೆಲವು ವಾರಗಳ ಹಿಂದೆ ಪಿ.ವಿ.ಆರ ಚಿತ್ರಮಂದಿರಕ್ಕೆ "ಸವಾರಿ" ಚಿತ್ರ ನೋಡೋಕ್ಕೆ ಹೋಗಿದ್ದಾಗ ಕಂಡದ್ದು ಇದು.BODY CRAFT ಅನ್ನೋ ಸೌಂದರ್ಯ ಚಿಕಿತ್ಸಾಲಯದ ಬೋರ್ಡು. ಇದು ಫಾರಂ ಮಾಲಿನ ಎರಡನೇ ಮಹಡಿಯಲ್ಲಿ ಇದೆ. ಕನ್ನಡವನ್ನು ಹೇಗೆ ಅಧ್ವಾನಗೊಳಿಸಿದ್ದಾರೆ ನೋಡಿ. ಬಾಡಿ ಕ್ರಾಫ್ಟ್ ಬದಲಾಗಿ "ಬಾಡಿ ಕ್ರಾಷ್ಟ" ಎಂದು ಬರೆದಿದ್ದಾರೆ.

--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Saturday, July 11, 2009

ಆಟೋ ಅಣಿಮುತ್ತುಗಳು - ೬೮ - ಬಡವನಾಗಿ ಹುಟ್ಟಿದ್ದು

ಇತ್ತೀಚಿಗೆ ಸಖತ್ತಾಗಿ ಆಟೋ ಅಣಿಮುತ್ತುಗಳು ಸಿಗ್ತಾ ಇದೆ. ನನ್ನ ಬ್ಲಾಗಿನ ಓದುಗ ಮಿತ್ರರು ತಾವು ತೆಗೆದ ಅಣಿಮುತ್ತಿನ ಫೋಟೋಗಳನ್ನೆಲ್ಲಾ ಕಳಿಸುತ್ತಾ ಇದಾರೆ. ಹಾಗಾಗಿ ಯಾವುದನ್ನು ಮೊದಲು ಹಾಕಲಿ ಬಿಡಲಿ ಎಂದು ತಲೆಬಿಸಿ ಆಗ್ತಾ ಇದೆ.

ಈ ಅಣಿಮುತ್ತು ನಮ್ಮ ಅಫೀಸಿನ ಮುಂದೆ ಕಂಡಿದ್ದು. ಹೊರಗೆ ಸುಮ್ನೆ ಒಂದು ವಾಕಿಗೆ ಬಂದ್ವಿ, ಅಲ್ಲಿ ಈ ಆಟೋ ಕಂಡಿತು. ಇನ್ನೇನು ಹೊರಡಲಿದ್ದ ಈ ಆಟೋವನ್ನು ಓಡಿ ಹೋಗಿ ತಡೆದು, ಜೇಬಿನಿಂದ ಮೊಬೈಲ್ ತೆಗೆದು ಫೋಟೋ ಕ್ಲಿಕ್ಕಿಸಿದ್ದನ್ನು ಅಕ್ಕ ಪಕ್ಕದಲ್ಲಿದ್ದ ಜನರು ವಿಚಿತ್ರವಾಗಿ ನೋಡ್ತಾ ಇದ್ರು (ನಂಗೆ ಇದು ಅಭ್ಯಾಸ ಆಗಿ ಹೋಗಿದೆ).

ಈ ಆಟೋವಿನ ಮಾಲಿಕ ನಾಗರಾಜ್ ಎಂದು. ದುಡಿಮೆಯೇ ದೇವರು ಎನ್ನುವ ತತ್ವವನ್ನು ಎಷ್ಟು ಚೆನ್ನಾಗಿ ಹೇಳಿದಾರೆ ನೋಡಿ.
ನಿಜಕ್ಕೂ ಈ ಅಣಿಮುತ್ತನ್ನು ನೋಡಿ (ಓದಿ), ಸ್ವಲ್ಪ ಹೊತ್ತು ಯೋಚನೆ ಮಾಡುವ ಹಾಗಾಯ್ತು. ನೀವೇ ನೋಡಿ


ಬಡವನಾಗಿ ಹುಟ್ಟಿದ್ದು ಅದು ನಿನ್ನ ತಪ್ಪಲ್ಲ !!
ದುಡಿಯದೆ ಬಡವನಾದರೆ ಅದು ನಿನ್ನ ತಪ್ಪು...

ಜೊತೆಗೆ ತನ್ನ ಹೆಸರಾದ "ನಾಗರಾಜ" ಅನ್ನೋದನ್ನ ಹೇಗೆ ಹೇಳಿದಾರೆ ನೊಡಿ.
ಅಪ್ಪನ ಕೊರಳಿಗೆ ಮಗನ ಹೊಟ್ಟೆಗೆ
ಜನಗಳ ಪೂಜೆಗೆ ಬೇಕಾದವನು ಈ ನಿಮ್ಮ
ನಾಗರಾಜ
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Monday, July 6, 2009

ಬೆಂಗಳೂರನ್ನು ತೆಗಳೋದು ಇವ್ರಿಗೊಂಥರಾ ಶೋಕಿ

ಇವತ್ತಿನ BANGALORE MIRROR ಓದುತ್ತಾ ಇದ್ದಾಗ ಈ ಲೇಖನ ಕಣ್ಣಿಗೆ ಕಂಡಿತು.
ಜೂನ್ ಮೊದಲ ತಾರೀಕು ಅದೆಲ್ಲಿಂದಲೋ (???) ಬೆಂಗಳೂರಿಗೆ ಕಂಪೆನಿಯ ಟ್ರೈನಿಂಗಿಗೆ ಅಂಕುರ್ ವಿಜಯ್ ಅನ್ನೋ ವ್ಯಕ್ತಿ ಬಂದಿಳಿದಿದ್ದಾನೆ. ಬಂದ ದಿನದಿಂದ ಮಾರತ್ತಹಳ್ಳಿಯಲ್ಲಿ ಇರೋ ಈ ಭೂಪ, ಇಡೀ ಬೆಂಗಳೂರನ್ನೇ ಅರೆದು ಕುಡಿದ ಹಾಗೆ ತೆಗಳಲು ಶುರು ಮಾಡಿದ್ದಾನೆ. ಜೊತೆಗೆ ತನ್ನ ಬ್ಲಾಗಿನಲ್ಲಿ ಬರೆದಿದ್ದಾನೆ, ನೋಡಿ.
Beginners guide for survival in Bangalore ಅಂತೆ. ಒಮ್ಮೆ ಓದಿ ನೋಡಿ.
ಇಂಥವರಿಗೆ ಬೆಂಗಳೂರು ವಾಸಿಸಲು, ದುಡಿಯಲು ಬೇಕು, ಆದ್ರೂ ಕೂಡಾ ಅದರ ಬಗ್ಗೆ ತೆಗಳೋದು ಒಂಥರಾ ಶೋಕಿಯಾಗಿದೆ. ಜೊತೆಗೆ ಇವನಿಗೆ ಕನ್ನಡ ಅರ್ಥವಾಗದೇ ಇರೋ ಕಾರಣಕ್ಕೆ, ಈತನ ಜೊತೆ ಕನ್ನಡದಲ್ಲಿ ಯಾರಾದರೂ ಮಾತಾಡಿದ್ದಲ್ಲಿ ಅದು "WORST PART" ಆಂತೆ. ಈತ ಬರೆದಿರುವ ಬ್ಲಾಗಿನ ಒಂದೆರಡು ಪಾಯಿಂಟುಗಳನ್ನು ಇಲ್ಲಿ ಹಾಕ್ತಾ ಇದೀನಿ. ನೋಡಿ ನೀವೆ.
  • Be prepared to eat sambhar . No matter what dish it is, you are going to be served sambhar with it. Even if the guy at the restaurant is claiming it to be something else like an aloo ki sabzi or something, it IS sambhar.
  • Don’t get fooled by the promising name "City of lakes". The only lake I could find was the Agara lake and believe me that is NO tourist spot.
  • No matter how much you decide to pay him while boarding it, the auto driver will beg (yes- beg , or should I say cry !) for more when you reach your destination. And the worst part is - he will do that in Kannada !
ಇಂಥ ಲೇಖನವನ್ನು ಲಜ್ಜೆಗೆಟ್ಟು ಪ್ರಕಟಿಸುವ BANGALORE MIRROR ನಂಥಾ ಪತ್ರಿಕೆಗಳಿಗೆ ಏನೆನ್ನಬೇಕು ?

ಈ ಅಂಕುರ್ ವಿಜಯನ ಈ-ಮೇಲ್ ವಿಳಾಸ ಕೊಡ್ತಾ ಇದೀನಿ, ವಿಚಾರಿಸಿಕೊಳ್ಳಿ.
hercules.bravo@gmail.com

ನಮ್ಮ ಬೆಂಗಳೂರು :)
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Wednesday, July 1, 2009

ಸೋಮಾರಿ ಕಟ್ಟೆ ಟೀ ಶರ್ಟ್

ಟೀ ಶರ್ಟ್ ಮಾಡಿಸ್ತೀನಿ, ಯಾರು ಕೊಳ್ತೀರ ಅಂತ ಕೇಳಿದ್ದಕ್ಕೆ 38 ಮಂದಿ ಕೊಳ್ತೀವಿ ಅಂತಾ ಹೇಳಿದಾರೆ.

ದಯವಿಟ್ಟು ನಿಮ್ಮ ಟೀ ಶರ್ಟ್ ಸೈಜನ್ನು ನನಗೆ ಈಮೇಲ್ ಮುಖಾಂತರ ಕಳಿಸಬೇಕಾಗಿ ವಿನಂತಿ.

somari.shankra@gmail.com

ಒಂದಂತೂ ಗ್ಯಾರಂಟಿ, ರೌಂಡ್ ನೆಕ್ ಟೀ ಶರ್ಟ್ ಆದರೆ 175 ರೂ ಒಳಗೆ, ಪೋಲೋ ನೆಕ್ ಟೀ ಶರ್ಟ್ ಆದರೆ 250 ರೂ ಒಳಗೆ ಇರುತ್ತದೆ. ಟೀ ಶರ್ಟಿನ ಗುಣಮಟ್ಟದ ಬಗ್ಗೆ ಯಾವುದೇ ಸಂಶಯ ಬೇಡ. ನಾನು ಇದನ್ನು ಯಾವುದೇ ಲಾಭಕ್ಕಾಗಿ ಮಾಡುತ್ತಾ ಇಲ್ಲ. ಸಧ್ಯಕ್ಕೆ ಕಪ್ಪು ಅಥವಾ ಬೂದು (Grey) ಬಣ್ಣದಲ್ಲಿ ಮಾಡಿಸುತ್ತೇನೆ.

ನೀವು ಕಳಿಸುವ ಈ-ಮೇಲಿನಲ್ಲಿ ನಾನು ಕೇಳಿರುವ ಮಾಹಿತಿ ಹೀಗೆ ಇರಲಿ:

somari.shankra@gmail.com

ನಿಮ್ಮ ಹೆಸರು :

ಟೀ ಶರ್ಟ್ ಸೈಜು : S, M, L, XL

ಬಣ್ಣ : ಕಪ್ಪು (Black), ಬೂದು (Grey)

ದೃಢಪಟ್ಟ ಬೇಡಿಕೆಗಳ ಸಂಖ್ಯೆ ಮೇಲೆ ನಾನು ಇಲ್ಲಿ ಟೀ ಶರ್ಟ್ ಮಾಡಿಸಲು ಆರಂಭಿಸುತ್ತೇನೆ.

ವಿಶೇಷ ಸೂಚನೆ :

1. ಒಮ್ಮೆ ದೃಢಪಡಿಸಿದ ಬೇಡಿಕೆಯನ್ನು ಯಾವುದೇ ಕಾರಣಕ್ಕೆ ಹಿಂದಕ್ಕೆ ಪಡೆಯಲು ಸಾಧ್ಯವಿಲ್ಲ
2. ಟೀ ಶರ್ಟ್ ಪಡೆಯುವ ವೇಳೆ ಹಣವನ್ನು ಕೊಡತಕ್ಕದ್ದು
3. ಇಂಟರ್ನೆಟ್ ಟ್ರಾನ್ಸಫರ್ ಮುಖಾಂತರ ಕೂಡ ಹಣ ಕಳಿಸಬಹುದು. ಆಸಕ್ತಿ ಇದ್ದವರಿಗೆ ಈ ಮೇಲ್ ಮುಖಾಂತರ ಬ್ಯಾಂಕ್ ಖಾತೆ ಸಂಖ್ಯೆಯನ್ನು ಕಳಿಸಿ ಕೊಡಲಾಗುವುದು
4. ನೀವು ಮಾಹಿತಿಯನ್ನು ತುಂಬಿಸಿ ಕಳಿಸುವ ಈ-ಮೇಲನ್ನು ನಿಮ್ಮ ಒಪ್ಪಿಗೆ ಎಂದು ಪರಿಗಣಿಸಲಾಗುವುದು
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Sunday, June 28, 2009

ಉದ್ದಿನ ವಡೆ ಅಥವಾ ಮೆದು ವಡಾ ?

ಶನಿವಾರ (27 ಜೂನ್) ಮಧ್ಯಾಹ್ನ ಎಲ್ಲಾ ಮಿತ್ರರು ಸೌತ್ ಎಂಡ್ ಸರ್ಕಲ್ ಹತ್ರ ಮೀಟ್ ಮಾಡಿ, ಸಂಜೆ ತನಕ ಸುತ್ತಾಡಿ ಒಳ್ಳೆ ಮಜಾ ಇತ್ತು. ಸಂಜೆ ಹೊಟ್ಟೆ ಚುರ್ರ್ ಅಂದಾಗ ಶ್ರೇಯು "ಬನ್ರೋ, ಒಂದು ಹೊಸಾ ಹೋಟ್ಲು ಓಪನ್ ಆಗಿದೆ ಇಲ್ಲೇ, ಅಲ್ಲಿ ಹೋಗೋಣ...ಟೇಸ್ಟು ಚೆನ್ನಾಗಿದೆ" ಅಂದ. ಸರಿ ನಡಿ ಅಂತಾ ಹೊರಟ್ವಿ.
"ಸೌತ್ ತಿಂಡೀಸ್" ಅಂತಾ ಹೋಟ್ಲು. ಇದು ಇರೋದು ಕನಕಪುರ ರಸ್ತೆಯಲ್ಲಿ, ಕೃಷ್ಣರಾವ್ ಪಾರ್ಕಿನ ಬಳಿ (ಸೌತ್ ಎಂಡ್ ಸರ್ಕಲ್ಲಿನಿಂದ ನಾಗಸಂದ್ರ ಕಡೆ ಬಂದರೆ, ಮಧ್ಯದಲ್ಲಿ ಸಿಗೋ ಸರ್ಕಲ್ಲಿನಲ್ಲಿ ಬಲಕ್ಕೆ ತಿರುಗಿದರೆ ಈ ಹೋಟ್ಲು ಕಾಣುತ್ತೆ).
ಈ ಜಾಗದಲ್ಲಿ ಮುಂಚೆ "ವಿಜಯ ದರ್ಶಿನಿ" ಅನ್ನೋ ಒಂದು ದರ್ಶಿನಿ ಇತ್ತು. ತಿಂಡಿ ಅಷ್ಟಕ್ಕಷ್ಟೆ ಇದ್ದದ್ದು, ಆದ್ರೆ ಕಾಫಿ ಚೆನ್ನಾಗಿ ಮಾಡ್ತಾ ಇದ್ರು.

ಸರಿ, ವಿಷಯಕ್ಕೆ ಬರೋಣ. ನಿನ್ನೆ ಎಲ್ರೂ ಸೇರಿದ್ರೆ ಏಳು ಜನ.

ನಾನು, ಹೇಮಂತ, ಶ್ರೇಯು, ಸುಬ್ಬು, ನವೀನ, ಜಗ್ಗ, ಶಶಿ...ಎಲ್ರೂ ಒಳ್ಳೇ ಗ್ರೈಂಡರ್ ನನ್ ಮಕ್ಳು. ಕ್ಯಾಶ್ ಕೌಂಟರಿನಲ್ಲಿ ನಿಂತು ಯಾರಿಗೆ ಏನು ಬೇಕು ಅಂತಾ ಡಿಸೈಡ್ ಮಾಡುವಾಗ ಅಲ್ಲಿ ಇದ್ದ ಮೆನ್ನು ಬೋರ್ಡಿನ ಮೇಲೆ ಕಣ್ಣು ಹೋಯ್ತು. ಮೈ ಎಲ್ಲಾ ಉರೀತು. ಇತ್ತೀಚಿಗೆ ಬೆಂಗಳೂರಿನ ಹೋಟೆಲಿಗರಿಗೆ ಶುರು ಆಗಿರೋ ಮತ್ತೊಂದು ರೋಗ ಅಂತ ಹೇಳ್ತೀನಿ.
"ಮೆದು ವಡಾ" ಅಂತಾ ಹಾಕಿದಾರೆ. ಉದ್ದಿನ ವಡೆಯನ್ನು ತಮಿಳುನಾಡಿನಲ್ಲಿ ಹೀಗೆ ಕರೆಯುತ್ತಾರೆ. ತಕ್ಷಣ ಕೌಂಟರಿನಲ್ಲಿ ಕೇಳಿದೆ,

ನಾನು :"ಯಾಕೆ ಸ್ವಾಮಿ ? ನೀವು ಕರ್ನಾಟಕದಲ್ಲಿ ಇದೀರೋ ಅಥವಾ ತಮಿಳುನಾಡಿನಲ್ಲಿ ಇದೀರೋ.. ಮೆದು ವಡಾ ಅಂತಾ ಯಾಕೆ ಹಾಕಿದೀರ? ಚೇಂಜ್ ಮಾಡ್ರೀ" ಅಂತಾ ದಬಾಯಿಸಿದೆ.

ಅದಕ್ಕೆ ಆತ :"ನಮಗೆ ಗೊತ್ತಿಲ್ಲ ಸಾರ್, ಓನರ್ ನ ಕೇಳಿ"

ಸರಿ, ಓನರ್ ಎಲ್ಲಿ ಅಂತಾ ವಿಚಾರಿಸಿದ್ದಕ್ಕೆ ಅಲ್ಲೇ ದೋಸೆ ಮಾಡೋ ಜಾಗದಲ್ಲಿ ಸಿಕ್ಕಿದ್ರು. ಅಲ್ಲಿ ಈ ನನ್ನ Objection ಹೇಳಿದ್ದಕ್ಕೆ, ಒಳಗೆ ಗಲಾಟೆ ಇದೆ, ಏನೂ ಸರಿಯಾಗಿ ಕೇಳುಸ್ತಾ ಇಲ್ಲಾ ಅಂತ ಹೊರಗೆ ಕರ್ಕೊಂಡು ಬಂದು ಮಾತಾಡೋಕ್ಕೆ ಶುರು ಮಾಡುದ್ರು.

ನಾನು : "ಅಲ್ಲಾ ಸಾರ್, ನೀವು ಇರೋದು, ನಿಮ್ಮ ಹೋಟ್ಲು ಇರೋದು ಎಲ್ಲಿ?"

ಓನರ್ : ಅಶ್ಚರ್ಯ ಪಟ್ಕೊಂಡು "ಬೆಂಗಳೂರಲ್ಲಿ... ಯಾಕೆ ಹಾಗೆ ಕೇಳ್ತೀರ?"

ನಾನು : "ಮತ್ತೆ, ಬೆಂಗಳೂರಲ್ಲಿ ಹೋಟ್ಲು ಮಾಡಿ ಮೆನು ನಲ್ಲಿ ತಮಿಳುನಾಡಿನ ಹಾಗೆ ಮೆದು ವಡಾ ಅಂತಾ ಯಾಕೆ ಹಾಕಿದೀರ? ಕನ್ನಡದಲ್ಲಿ ಇಷ್ಟು ವರ್ಷಗಳಿಂದ ಹಾಕೋ ಹಾಗೆ ಉದ್ದಿನ ವಡೆ ಅಂತಾ ಹಾಕೋಕ್ಕೆ ನಿಮಗೆ ಏನು ಪ್ರಾಬ್ಲಮ್ ?"

ಓನರ್ : "ನಮ್ಮ ಹೋಟ್ಲಿನ ಸ್ಪೆಶಾಲಿಟಿ ಅಂದ್ರೆ ದಕ್ಷಿಣ ಭಾರತದ ಎಲ್ಲಾ ನಾಲ್ಕು ರಾಜ್ಯಗಳ ತಿಂಡಿಗಳನ್ನೂ ಮಾಡ್ತೀವಿ, ಅದಕ್ಕೆ ಎಲ್ರಿಗೂ ಅರ್ಥ ಆಗ್ಲಿ ಅಂತಾ ಹೀಗೆ ಹೆಸ್ರು ಇಟ್ಟಿದ್ದು"

ನಾನು : "ರೀ ಸ್ವಾಮಿ, ನೀವು ಹೆಸ್ರು ಚೇಂಜ್ ಯಾಕೆ ಮಾಡ್ಬೇಕು ? ದಕ್ಷಿಣ ಭಾರತದ ಯಾವುದೇ ಮಂದಿ ಇಲ್ಲಿ ಬಂದು ತಿಂದ್ರೆ, ಅವ್ರಿಗೆ ಮೆದು ವಡಾ ಅಂದ್ರೆ ಮಾತ್ರ ಅರ್ಥ ಆಗುತ್ತಾ? ಇಲ್ಲಿಗೆ ಬಂದು ತಿನ್ನೋರು ಇಲ್ಲೇ ಬೆಂಗಳೂರಲ್ಲಿ ವಾಸವಾಗಿರೋ ಜನ. ಅವ್ರಿಗೆ ಉದ್ದಿನ ವಡೆ ಅಂದ್ರೆ ಏನ್ ಅರ್ಥ ಆಗ್ದೇ ಇರೋ ಐಟಮ್ಮಾ?"

ಓನರ್ : "ಇಲ್ಲಾ ಸಾರ್.. ನಾನು ಹೇಳಿದ್ದನ್ನ ನೀವು ಅರ್ಥ ಮಾಡ್ಕೊತಾ ಇಲ್ಲ"

ನಾನು : "ಸಾರ್, ಇವೆಲ್ಲಾ ಸುಮ್ನೆ ಬ್ಯಾಡ್ದೇ ಇರೋ ಆಟಗಳು ಇದು. ಕನ್ನಡನಾ, ಕನ್ನಡಿಗರನ್ನ ಕಡೆಗಾಣಿಸಿ ಬೇರೆ ಜನಕ್ಕೆ ಮಣೆ ಹಾಕ್ತೀರಲ್ಲಾ ನೀವು... ಅದ್ ಬಿಟ್ಟಾಕಿ, ನಾಳೆ ಮೀಲ್ಸ್ ಶುರು ಮಾಡಿದಾಗ ಮಜ್ಜಿಗೆ ಹುಳಿ ಮೆನು ನಲ್ಲಿ ಹಾಕ್ತೀರ. ಅವಾಗ ಅದನ್ನು
ತಮಿಳಿನಲ್ಲಿ ಮೋರ್ ಕೊಳಂಬು ಅಂತಾ ಹಾಕ್ತೀರಾ ಅಥ್ವಾ ತೆಲುಗಲ್ಲಿ ಮಜ್ಜಿಗ ಪುಲ್ಸು ಅಂತಾ ಕರೀತೀರಾ?? ಸುಮ್ನೆ ಈ ಥರ ಆಡೋದನ್ನ ಬಿಟ್ಟೂ ನಮ್ಮ ಭಾಷೆಗೆ Prominance ಕೊಡಿ"

ಓನರ್ : "ಹಂಗಲ್ಲಾ ಸಾರ್, ಹೋಟ್ಲು ಅಂದಮೇಲೆ ಎಲ್ಲಾ ರೀತಿ ಜನರನ್ನೂ ಗಮನದಲ್ಲಿ ಇಟ್ಕೋಬೇಕು ಸಾರ್"

ನಾನು : "ರೀ ಸ್ವಾಮಿ, ಇಷ್ಟು ಹೇಳಿದ ಮೇಲೂ ನೀವು ಹೀಗೆ ಮಾತಾಡ್ತೀರಲ್ಲಾ, ನಿಮ್ ಹೋಟ್ಲು ನಿಮ್ಮಿಷ್ಟ.. ಏನಾದ್ರೂ ಮಾಡ್ಕೊಳಿ. ನಾನಂತೂ ಇಲ್ಲಿಗೆ ಬರೊಲ್ಲಾ ಹಾಗು ನನಗೆ ಗೊತ್ತಿರೋ ಜನಕ್ಕೆ ಇಲ್ಲಿಗೆ ಬರಬೇಡಿ ಅಂತಾನೇ ಹೇಳ್ತೀನಿ"

ಓನರ್ : "ಹಂಗೆಲ್ಲಾ ಮಾಡೋಹಾಗಿಲ್ಲಾ ಸಾರ್ ನೀವು"

ಪಕ್ಕದಲ್ಲಿದ್ದ ಜನರು ಸುಮಾರು ಹೊತ್ತಿಂದ ನಮ್ಮ ಮಾತು ಕೇಳುಸ್ಕೋತಾ ಇದ್ರು.. ಓನರ್ ಯಾವಾಗ ಹೀಗೆ ಹೇಳುದ್ರೋ ಅವಾಗ ಸುಮಾರು ಜನ ಒಟ್ಟಿಗೆ "ಅದ್ಯಾಕೆ ಆಗಲ್ಲಾ ?? ಕನ್ನಡದವರಾಗಿ ಹೀಗೆ ಮಾಡಿ ಅಂತ Suggestion ಕೊಟ್ರೆ, ಹೀಗೆ ಆಡ್ತೀರಲ್ಲ ನೀವು.. " ಹಾಗೆ ಹೀಗೆ ಅಂತಾ ತಲೆಗೆ ಒಂದೊಂದು ಆವಾಜ್ ಹಾಕ್ತಾ ಇದಾರೆ.

ಏನಾದ್ರೂ ಮಾಡ್ಕೊಂದು ಹಾಳಾಗಿ ಅಂತ ವಾಪಸ್ ಬಂದೆ.

ನಮ್ಮ ಜನರೇ ಈ ರೀತಿ ಮಾಡುದ್ರೆ, ನಮ್ಮ ಭಾಷೆ ಬಗ್ಗೆ ಯಾರು ಅಭಿಮಾನ ತೋರುಸ್ತಾರೆ ? ನಮ್ಮ ಭಾಷೆ ಬೆಳೆಯೋದು ಹೆಂಗೆ ? ಅನ್ಯಾಭಾಷಿಕರಿಗೆ ಮಣೆ ಹಾಕಿ ಹಾಕಿ ನಮಗೆ ಚಾಪೆ ಕೂಡಾ ಸಿಗದ ಹಾಗೆ ಆಗ್ತಾ ಇದೆ.

ಮಾಸ್ಟರ್ ಹಿರಣ್ಣಯ್ಯ ಭಾಷಾಭಿಮಾನದ ಬಗ್ಗೆ ಹೇಳೋ ಹಾಗೆ "ತಮಿಳರು ಅಭಿಮಾನಿಗಳು, ತೆಲುಗರು ದುರಭಿಮಾನಿಗಳು, ಕನ್ನಡಿಗರು ನಿರಭಿಮಾನಿಗಳು" ಅನ್ನೋ ಮಾತು ಎಷ್ಟು ಸತ್ಯ ಅನ್ಸುತ್ತೆ ಅಲ್ವಾ?

ಈ ಮೆದು ವಡಾ ಹೆಸ್ರು ಬರೀ ಇಲ್ಲಲ್ಲಾ, ಡಿವಿಜಿ ರಸ್ತೆಯಲ್ಲಿ ಇರೋ "ಉಪಹಾರ ದರ್ಶಿನಿ"ಯಲ್ಲೂ ಕೂಡಾ ಹಾಕಿದಾರೆ.

ನಿಮ್ಮೆಲ್ಲರಲ್ಲಿ ಒಂದು ವಿನಂತಿ, ಮುಂದಿನ ಬಾರಿ ನೀವು "ಸೌತ್ ತಿಂಡೀಸ್" ಅಥವಾ "ಉಪಹಾರ ದರ್ಶಿನಿ" ಗೆ ಭೇಟಿ ಕೊಟ್ರೆ, ಈ ವಿಚಾರವಾಗಿ ನಿಮ್ಮ Objection ತಿಳಿಸಿ. Atleast ತುಂಬಾ ಜನ ವಿರೋಧ ವ್ಯಕ್ತಪಡಿಸ್ತಾ ಇದಾರೆ ಅನ್ನೋ ಕಾರಣಕ್ಕಾದ್ರೂ ಬದಲಾಯಿಸಲಿ.

ಕನ್ನಡ ಬಳಸಿ, ಕನ್ನಡ ಉಳಿಸಿ
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Wednesday, June 24, 2009

ಆಟೋ ಅಣಿಮುತ್ತುಗಳು - ೬೭ - ನೀವು ಹೆಂಗೆ ಹೋಗ್ತೀರಾ ?

ಮಿತ್ರ ಬಾಲ ಮುರಳಿ ಮೆಜೆಸ್ಟಿಕ್ ಹತ್ರ ಸಿಗ್ನಲ್ಲಲ್ಲಿ ನಿಂತಾಗ ಕಂಡ ಆಟೋ ಅಂತೆ ಇದು.
ತಕ್ಷಣ ಫೋಟೋ ತೆಗೆದು ಕಳ್ಸಿದಾನೆ ನನಗೆ. ಪ್ರಾಡಕ್ಟ್ ಸೆಲ್ ಮಾಡೋ ಟೆಕ್ನಿಕ್ ಸಖತ್ತಾಗಿ ಇದೆ ಅನ್ಸುತ್ತೆ ಈ ಅಣ್ಣನಿಗೆ.
ಕಂಫರ್ಟ್ ಅನ್ನೋ ಪಾಯಿಂಟ್ ತೋರಿಸಿ, ಆಟೋ ಹತ್ತಿ ಅಂತಾ ಇರೋದು.
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Monday, June 22, 2009

ಆಟೋ ಅಣಿಮುತ್ತುಗಳು - ೬೬ - ಹುಡ್ಗೀರೆಲ್ಲ ಹೀಗೇನಾ ?

ಶಿವಪ್ರಕಾಶ್ ಅವರು ಕಳಿಸಿದ ಆಟೋ ಫೋಟೋ ಇದು.
ಯಾಕೋ ಈ ಅಣ್ಣನಿಗೆ ತುಂಬಾ ಡೌಟ್ ಅನ್ಸುತ್ತೆ. ನೀವಾದ್ರೂ ಹೇಳಿ.



--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Thursday, June 18, 2009

ಆಟೋ ಅಣಿಮುತ್ತುಗಳು - ೬೫ - ಆಟೋ ಶಂಕ್ರಣ್ಣ

ಮಂಗಳವಾರ ಆಫೀಸಿಂದ ಮನೆಗೆ ಹೋಗಬೇಕಾದ್ರೆ, ಆಡುಗೋಡಿ ಬಾಷ್ ಮುಂದೆ ಈ ಆಟೋ ಕಂಡಿತು.
ಸುಮಾರು ಐದಾರು ಗಾಡಿಗಳ ಹಿಂದೆ ಇದ್ದೆ ನಾನು. ಹಂಗೆ ಹಿಂಗೆ ಕಷ್ಟ ಪಟ್ಟು ಈ ಆಟೋ ಪಕ್ಕಕ್ಕೆ ಹೋದೆ.
ಪಕ್ಕಕ್ಕೆ ಹೋಗಿ "ಸಾರ್ ನಿಮ್ಮ ಆಟೋ ಹಿಂದೆ ಬರ್ದಿದೀರಲ್ಲ, ಅದರ ಫೋಟೋ ತೆಕ್ಕೊತೀನಿ, ಒಂದು ನಿಮಿಷ ಆಟೋ ನಿಲ್ಲುಸ್ತೀರ?" ಅಂತ ಕೇಳಿದೆ. ಆಟೋ ಒಳಗಡೆ ಪ್ಯಾಸೆಂಜರ್ ಇದ್ರು... ಅವ್ರು "ಏಯ್, ಆಗಲ್ಲ ಕಣ್ರೀ, ಅರ್ಜೆಂಟ್ ಕೆಲಸ ಇದೆ" ಅಂತ ನಿಲ್ಲಿಸೋದಕ್ಕೆ ಅನುಮತಿ ಕೊಡ್ಲಿಲ್ಲ.

ಆದ್ರೆ ಈ ಆಟೋ ಅಣ್ಣ ಹಾಗೆ ಓಡಿಸುತ್ತಾ, ಆಡುಗೋಡಿ ಕ್ರಿಶ್ಚಿಯನ್ ಸೆಮಿಟರಿ ಸಿಗ್ನಲ್ಲಲ್ಲಿ ಬೇಕೂ ಅಂತ ನಿಲ್ಸಿದ್ರು. ನಾನು ಆರಾಮಾಗಿ ಫೋಟೋ ತೆಕ್ಕೊಂಡೆ. ಅಂದಹಾಗೆ ಆ ಆಟೋ ಅಣ್ಣನ ಹೆಸರು ಕೂಡಾ ಶಂಕರ್.

ಫೋಟೋ ತೆಗೆದು ಹೊರಟಾಗ "ಅಂದಹಾಗೆ, ನನ್ನ ಹೆಸರೂ ಶಂಕರ್ ಅಂತಾ" ಎಂದು ಹೇಳಿದೆ. ಅದಕ್ಕೆ ಆ ಆಟೋ ಶಂಕ್ರಣ್ಣ ಒಂದು ಮಸ್ತ್ ಸ್ಮೈಲ್ ಕೊಟ್ಟು "ಸರಿ ಸಾರ್, ಸಂತೋಷ..ಮತ್ತೆ ಸಿಗೋಣ" ಅಂದ್ರು.
ಆದ್ರೆ ಈ ನನ್ನ ದಡ್ಡ ತಲೆಗೆ ಆ ಆಟೋ ಶಂಕ್ರಣ್ಣನ ಫೋಟೋ ತೆಗೆಯೋಕ್ಕೆ ಹೊಳೀಲಿಲ್ಲ. ಆಮೇಲೆ ಬೇಜಾರ್ ಆಯ್ತು.
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Monday, June 15, 2009

ನಗು ತಡೆಯೋಕ್ಕಾಗದೆ ಪೇಚಾಡಿದ ಸಂದರ್ಭಗಳು

ನಿಮ್ಗೂ ಹಿಂಗೆ ಯಾವಾಗ್ಲಾದ್ರೂ ಆಗಿದ್ಯಾ? ಸಿಕ್ಕಾಪಟ್ಟೆ ನಗು ಬರುವಂಥ ಸೀನು, ಆದ್ರೂ ನಕ್ಕಿದ್ರೆ ನಾಯಿಪಾಡು ಅನ್ನೋಥರಾ? ನಾನು ಇವಾಗಂತೂ ಏನೇ ಆದ್ರೂ ನಗು ತಡೆಯೋದಿಲ್ಲಾ. ಬಾಯ್ತುಂಬಾ ಮತ್ತು ಮನಸ್ಸು ಹಗೂರಾಗೋಷ್ಟು ನಗ್ತೀನಿ.
ಅದೇನೋ ಹೇಳ್ತಾರಲ್ಲಾ "ನಗು ಮತ್ತು ಉಚ್ಛೆ ತಡೆಯೋದು ಪ್ರಕೃತಿಯ ನಿಯಮಕ್ಕೆ ವಿರುದ್ಧವಾದದ್ದು" ಅಂತಾ, ಹಾಗೆ.
ನಾನು ಹೇಳಕ್ಕೆ ಹೊರ್ಟಿರೋದು ಬಹಳ ಹಿಂದೆ, ಅಂದ್ರೆ ನಾನು ಪ್ರೈಮರಿ ಸ್ಕೂಲಿನಲ್ಲಿ ಇದ್ದಾಗ ನಡೆದ ಘಟನೆ.

೧. ಸತ್ತೆ ಪೆ ಸತ್ತಾ (ಶಂಕ್ರ ನಗು ತಡೆಯಕ್ಕಾಗ್ದೆ ಸತ್ತ) :

ನಾನು ಆರನೇ ಅಥವಾ ಏಳನೇ ಇಯತ್ತೆಯಲ್ಲಿ ಇದ್ದಾಗ ಅನ್ಸುತ್ತೆ (1991ನೇ ಇಸವಿ), ಒಮ್ಮೆ ದೂರದರ್ಶನದಲ್ಲಿ ಶುಕ್ರವಾರ ರಾತ್ರಿ "ಸತ್ತೆ ಪೆ ಸತ್ತಾ" (ಅಮಿತಾಬ್ ಬಚ್ಚನ್, ಹೇಮಾ ಮಾಲಿನಿ) ಚಿತ್ರವನ್ನು ಹಾಕಿದ್ರು.
ಆ ಫಿಲಮ್ಮು "ಸೆವೆನ್ ಬ್ರೈಡ್ಸ್ ಫಾರ್ ಸೆವೆನ್ ಬ್ರದರ್ಸ್" ಎಂಬ ಇಂಗ್ಲಿಷ್ ಚಿತ್ರದ ರಿಮೇಕು. ನಮ್ಮಪ್ಪ ಮತ್ತು ಅಮ್ಮ, ಫಿಲಂ ಚೆನ್ನಾಗಿದೆ ನೋಡು, ಒಳ್ಳೇ ಎಂಟರ್ಟೈನ್ಮೆಂಟು, ಒಳ್ಳೇ ಕಾಮಿಡಿ ಅಂತ ಹೇಳಿದ್ದಕ್ಕೆ ಎಲ್ರೂ ಒಟ್ಟಿಗೆ ನೋಡ್ತಾ ಇದ್ವಿ. ಅಪ್ಪ, ಅಮ್ಮ, ನಾನು ಹಾಗು ಮೂರನೇ ಇಯತ್ತೆಯಲ್ಲಿ ಓದುತ್ತಿದ್ದ ನನ್ನ ತಮ್ಮ.

ಆ ಚಿತ್ರದಲ್ಲಿ ಒಂದು ಸೀನ್ ಇದೆ. ಅಮಿತಾಬ್ ಬಚ್ಚನ್, ಹೇಮಾ ಮಾಲಿನಿಯನ್ನು ರಿಜಿಸ್ಟ್ರಾರ್ ಆಫೀಸಲ್ಲಿ ಮದ್ವೆ ಆಗ್ತಾನೆ. ಅವಾಗ, ರಿಜಿಸ್ಟ್ರಾರ್ ಇಬ್ಬರಿಗೂ ಕಂಗ್ರಾಟ್ಸ್ ಹೇಳಿ, ಅಮಿತಾಬ್ ಗೆ ಶೇಕ್ ಹ್ಯಾಂಡ್ ಕೊಡ್ತಾನೆ. ಇಬ್ರೂ ರಿಜಿಸ್ಟರ್ ನಲ್ಲಿ ಸೈನ್ ಮಾಡಿ ಹೊರಡ್ತಾರೆ, ಅಮಿತಾಬ್ ಬಾಗಿಲಿಂದ ಇನ್ನೇನು ಹೊರಡ್ಬೇಕು, ಆಫೀಸರ್ ಅವನನ್ನು ಕರೆದು ಮತ್ತೆ ಶೇಕ್ ಹ್ಯಾಂಡ್ ಕೊಟ್ಟು, ಹಾಗೆ ಅವನ ಕೈಯಲ್ಲಿ ಏನೋ ಇಡ್ತಾನೆ. ಏನು ಅಂತ ಅಮಿತಾಬ್ ನೋಡುದ್ರೆ "ನಿರೋಧ್" ಪ್ಯಾಕೆಟ್ಟು (ಫ್ಯಾಮಿಲಿ ಪ್ಲಾನಿಂಗನ್ನು ಉತ್ತೇಜಿಸುವುದಕ್ಕೆ ಹಾಗೆ ಮಾಡುತ್ತಿದ್ದರಂತೆ). ನಂಗೆ ಅವಾಗ "ನಿರೋಧ್" ಅಂದ್ರೆ ಏನು ಅಂತ ಗೊತ್ತಿತ್ತು (7ನೇ ಕ್ಲಾಸ್ನಲ್ಲೇ ಸ್ವಲ್ಪ ಕೆಟ್ಟಿದ್ವಿ !!!). ಪ್ಯಾಕೆಟ್ಟನು ನೋಡಿ ಅಮಿತಾಬ್ ಒಂದು ಹ್ಯಾಪ್ ನಗೆ ಬೀರಿ "ಥ್ಯಾಂಕ್ಸ್" ಹೇಳಿ ಹೊರಡ್ತಾನೆ. ಅವಾಗ ನನ್ನ ಮೂರನೆ ಇಯತ್ತೆಯ ತಮ್ಮ ಇದ್ದಕ್ಕಿದ್ದ ಹಾಗೆ "ಅಪ್ಪಾ, ಅಪ್ಪಾ, ಅಪ್ಪಾ.. ಅವನ್ ಕೈಲಿ ಕೊಟ್ಟಿದ್ದು ಏನಪ್ಪಾ ? ಹೇಳಪ್ಪಾ.." ಅಂತ ವರಾತ ತೆಗೆದ. ನಮ್ಮಪ್ಪಂಗೆ ಏನ್ ಮಾಡ್ಬೇಕು, ಏನ್ ಹೇಳ್ಬೇಕು ಅಂತ ತೋಚ್ತಾ ಇಲ್ಲಾ, ನನ್ ತಮ್ಮಾನೋ ಒಂದೇ ಸಮನೆ ಅಲಾರಂ ಥರ ಕಲ್ಯಾಣಿ ರಾಗದಲ್ಲಿ ಕೇಳ್ತಾ ಇದಾನೆ.. ಕೊನೆಗೆ ನಮ್ಮಪ್ಪ "ಅವ್ನು ಅಮಿತಾಬ್ ಗೆ ಏನೋ ಕೊಟ್ರೆ ನಿಂಗೇನೋ ? ಮುಚ್ಕೊಂಡು ನೋಡು, ಇಲ್ಲಾಂದ್ರೆ ಹೋಗಿ ಬಿದ್ಕೋ" ಅಂತ ಹೇಳಿ ಬಾಯಿಮುಚ್ಚಿಸಿದ್ರು. ಆ ಟೈಂನಲ್ಲಿ, ನಾನು ನಕ್ಕಿದ್ರೆ ಮಾತ್ರ ನನ್ ಪಾಡು ಏನ್ ಆಗ್ತಾ ಇತ್ತೋ ಗೊತ್ತಿಲ್ಲಾ, ಆದ್ರೆ ನನ್ ಲೈಫಲ್ಲಿ ಅತ್ಯಂತ ಕಷ್ಟ ಪಟ್ಟು ನಗು ತಡೆದ ಘಟನೆ ಅಂದ್ರೆ ಇದೇ.

೨. ಕ್ಲಾಸ್ ಮೇಟುಗಳ ಕೈಲಿ "ನಿರೋಧ"ನ್ನು ಬಲೂನ್ ಎಂದು ಕೊಟ್ಟು ಊದಿಸಿದ್ದು :

ಇದು ನಾವು ಏಳನೇ ಇಯತ್ತೆಯಲ್ಲಿ ಇದ್ದಾಗ (1992), ನಮ್ಮ ಸ್ಕೂಲಿನ ಒಂದು ಪಕ್ಕದಲ್ಲಿ ಒಂದು ಪಂಪ್ ಹೌಸ್ ಇತ್ತು. ಅದರ ಬೇಲಿಯಿಂದ ನಾವು 2-3 ಮಂದಿ ಹುಡುಗ್ರು, ಆಟದ ಪೀರಿಯಡ್ ಟೈಮಿನಲ್ಲಿ ಹೊರಗೆ ನುಗ್ಗಿ, ಎದುರು ಮನೆಯ ನೆಲ್ಲಿಕಾಯಿ ಮರದಿಂದ ಕಾಯಿ ಕೀಳ್ತಾ ಇದ್ವಿ. ಆ ಮನೆಯಲ್ಲಿ ಒಬ್ಬ ಸರ್ಕಾರಿ ಡಾಕ್ಟರು ಇದ್ರು. ಒಮ್ಮೆ, ಹಿಂಗೇ ಬೇಲಿಯಿಂದ ನುಗ್ಗಿ, ಅವರ ಮನೆ ಕಾಂಪೌಂಡ್ ಹಾರಬೇಕು ಅನ್ನೋಷ್ಟರಲ್ಲಿ, ಅವರ ಮನೆ ಪಕ್ಕದಲ್ಲಿ ಸುಮಾರು 20-30 ಕಿತ್ತಳೆ ಬಣ್ಣದ ಪ್ಯಾಕೆಟುಗಳು ಬಿಸಾಡಿದ್ರು. ಏನು ಅಂತ ನೋಡುದ್ರೆ "ನಿರೋಧ್". ಮೋಸ್ಟ್ಲಿ EXPIRY DATE ಆಗಿರೋದು ಅನ್ಸುತ್ತೆ. ನಮ್ಗೂ ಏನೋ ಕಡಿತ. ಅದ್ರಲ್ಲಿ ಸುಮಾರು 5-6 ಪ್ಯಾಕೆಟನ್ನ ನಾವು ತೆಗೆದುಕೊಂಡು ವಾಪಸ್ ಬೇಲಿಯಿಂದ ನುಗ್ಗಿ ಸ್ಕೂಲಿನ ಒಳಗೆ ಬಂದ್ವಿ.

ಎಲ್ಲಾ ಹುಡುಗ್ರು ಆ ಕಡೆ ಆಡ್ತಾ ಇದ್ರು. ಅವ್ರಲ್ಲಿ 8-10 ಹುಡುಗ್ರನ್ನ ಕರೆದು, "ತಗೊಳ್ರೋ ಇದನ್ನಾ, ಯಾರೋ ಬಲೂನನ್ನ ಬೀಳಿಸಿಕೊಂಡು ಹೋಗಿದಾರೆ, ಊದಿ, ಆಟಾಡ್ಕೊಳ್ಳಿ" ಅಂತ ಕೊಟ್ಟು "ಯಾರ್ ಕೊಟ್ಟಿದ್ದು ಅಂತಾ ಯಾರಾದ್ರೂ ಕೇಳುದ್ರೆ, ನಮ್ ಹೆಸ್ರನ್ನ ಮಾತ್ರಾ ಹೇಳ್ಬಾರ್ದು, ಸರಿ ಇರಲ್ಲ" ಅಂತ ಬೇರೆ ಸ್ಪೆಷಲ್ ವಾರ್ನಿಂಗ್ ಕೊಟ್ವಿ.

ಕೊಟ್ಟಿದ್ದೇ ತಡ, ಮಕ್ಳು ಊದಿದ್ದೇ ಊದಿದ್ದು. ಅದ್ರಲ್ಲಿ ಕೆಲವ್ರು, ಉತ್ಸಾಹ ತಡ್ಯಕ್ಕೆ ಆಗ್ದೆ ಜೋರಾಗಿ ಊದಿ "ಲೋ, ಏನ್ರೋ ಇದು ? ಫಾರಿನ್ ಬಲೂನು ಅನ್ಸುತ್ತೆ... ಎಷ್ಟು ಉದ್ದ ಆಗುತ್ತೆ ನೋಡ್ರೋ. ಮಾಮೂಲ್ ಬಲೂನಾಗಿದ್ರೆ, ಇಷ್ಟೊತ್ತಿಗೆ ಒಡೆದೋಗ್ತಾ ಇತ್ತು" ಅಂತಾ ಬೇರೆ ಸರ್ಟಿಫಿಕೇಟ್ ಕೊಡ್ತಾ ಇದಾನೆ ! ಎಲ್ರ ಕೈಲೂ ಸುಮಾರು 2-3 ಅಡಿ ಉದ್ದದ ಗಾಳಿ ತುಂಬಿದ ಬಲೂನು (???).
ಆಟ ಆಡ್ತಿದ್ದ ಹುಡುಗ್ರು ಎಲ್ಲಿ ಅಂತ ನಮ್ಮ ಪಿ.ಟಿ.ಮೇಷ್ಟ್ರು ನೋಡ್ತಾರೆ, ಎಲ್ರೂ ಬಲೂನನ್ನ (???) ಊದುತ್ತಾ ಇದಾರೆ. ಹತ್ರ ಬಂದು ನೋಡುದ್ರು, ಏನು ಅಂತಾ ಗೊತ್ತಾಯ್ತು ಅವ್ರಿಗೆ. ತಕ್ಷಣ "ಏಯ್, ಏನ್ ಮಾಡ್ತಾ ಇದೀರೋ ? ಇದು ಎಲ್ಲಿಂದ ಸಿಗ್ತೋ ನಿಮ್ಗೆ, ಯಾರ್ ತಂದು ಕೊಟ್ಟಿದ್ದು? ಬಿಸಾಕ್ರೊ ಮುಂಡೇವಾ ಇದನ್ನ" ಅಂತ ಬೈದು ಎಲ್ಲರನ್ನು ಕರ್ಕೊಂಡ್ ಹೋದ್ರು. ಅವರು ಬೈಬೇಕಾದ್ರೆ, ಅವರ ಪಕ್ಕ ನಿಂತ್ಕೊಂಡು ಸಖತ್ತಾಗಿ ಮಜಾ ತಗೊಂಡ್ವಿ, ಆದ್ರೆ ನಗೋ ಕಂಡೀಶನ್ನಲ್ಲಿ ಇರ್ಲಿಲ್ಲಾ.

ಇವತ್ತಿಗೂ ಇವೆರಡು ಘಟನೆಗಳನ್ನ ನೆನೆಸ್ಕೊಂಡ್ರೆ, ಯದ್ವಾ ತದ್ವಾ ನಗು ಬರುತ್ತೆ.. ಅಪ್ಪಿ ತಪ್ಪಿ ನಮ್ಮಪ್ಪ ಏನಾದ್ರೂ ನಾನು ಬರ್ದಿರೋದನ್ನ ಇವಾಗ ಓದುದ್ರೆ, ಒಂದ್ಸಲನಾದ್ರೂ ಉಗೀತಾರೆ, "ನಿರೋಧ"ನ್ನು ಕ್ಲಾಸ್ ಮೇಟುಗಳ ಕೈಲಿ ಕೊಟ್ಟು ಊದ್ಸಿದ್ದಕ್ಕೆ.
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Friday, June 12, 2009

ಆಟೋ ಅಣಿಮುತ್ತುಗಳು - ೬೪ - ಎಲ್ಲಿ ನಿಂತು ಕೂಗಲಿ ?

ಬೆಂಗಳೂರಿಗೆ ಬಂದ ಮೇಲೆ ನನ್ನ ಕೈಯ್ಯಾರೆ ತೆಗೆದ ಆಟೋ ಫೋಟೋ.
ಸೆಕೆಂಡ್ ಇನಿಂಗ್ಸ್ ಶುರುವಾಗಿದ್ದು ಇಂಥ ಮಸ್ತ್ ಡೈಲಾಗಿನಿಂದ. ಸಂಜೆ ಆಫೀಸಿನ ಹೊರಗೆ ಸುಮ್ನೆ ಒಂದು ಸಣ್ಣ Walk ಗೆ ಬಂದಾಗ, ಗೇಟಿನ ಹೊರಗೆ ನನಗಾಗಿಯೇ ಅನ್ನೋ ಥರ ಕಾದು ನಿಂತಿತ್ತು..ಎಂಥಾ ಲಕ್ಕು ಅಲ್ವ?
ಎಂಥಾ ಫೀಲಿಂಗ್ ಕೊಡ್ತು ಅಂದ್ರೆ..ಅಬ್ಬಬ್ಬಾ... ಅದೂ ಎಂಥ ಡೈಲಾಗ್ ಬರೆದಿದ್ದಾನೆ ನೋಡಿ ಈ ಅಣ್ಣ.
"ಆಕಾಶ ಬಿದ್ದರೆ ಭೂಮಿ ಬಿರಿದರೆ, ಎಲ್ಲಿ ನಿಂತು ಕೂಗಲಿ"
ಯಪ್ಪಾ.. ಇದಕ್ಕೆ ನಾನೇನು ಹೇಳಲಿ ?
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Wednesday, June 10, 2009

ಆಟೋ ಅಣಿಮುತ್ತುಗಳು - ೬೩ - ಪ್ರೀತಿ ಕೊಂದ ಕೊಲೆಗಾತಿ

ಸುಮಾರು ದಿನಗಳ ಹಿಂದೆ ಫಲಕೋತ್ಸವದ ಲಕ್ಷ್ಮಕ್ಕ ಕಳಿಸಿದ್ದ ಫೋಟೋ ಇದು.
ಈ ಅಣ್ಣ ಮತ್ತೊಬ್ಬ ಭಗ್ನ ಪ್ರೇಮಿಯಾಗಿ, ಸಿಕ್ಕಾಪಟ್ಟೆ ಫೀಲ್ ಮಾಡಿಕೊಂಡಿದಾನೆ ಅನ್ಸುತ್ತೆ.
ಥ್ಯಾಂಕ್ಸ್ ಲಕ್ಷ್ಮಕ್ಕ :)


--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Wednesday, June 3, 2009

ಮರಳಿ ತಾಯ್ನಾಡಿಗೆ

ನಮಸ್ಕಾರ ಮಿತ್ರರೆ,

ಮೇ 30 ರಂದು ಹ್ಯಾಂಬರ್ಗ್ ನಿಂದ ಹೊರಟು ಮಾರನೆಯ ದಿನ ಬೆಂಗಳೂರು ತಲುಪಿದೆ.
ಏರ್ಪೋರ್ಟಿಗೆ ನನ್ನಾಕೆ ಬಂದಿದ್ದಳು. ಏಳೂವರೆ ತಿಂಗಳು ಕುಟುಂಬದ ಎಲ್ಲರಿಂದ ದೂರವಿದ್ದೆ. ಇಷ್ಟು ದಿನ ಯೂರೋಪಿನಲ್ಲಿ ಇದ್ದು, ಅಲ್ಲಿನ ಜನರ ಅಭ್ಯಾಸಗಳು, ರೀತಿಯನ್ನು ನೋಡಿ ಅಡ್ಜಸ್ಟ್ ಆಗಿದೆ ನನಗೆ, ಇಲ್ಲಿ ಏರ್ಪೋರ್ಟಿನಿಂದ ಹೊರಗೆ ಬಂದ ನನ್ನನ್ನು ಕರೆದೊಯ್ಯಲು ನನ್ನಾಕೆ ಬಂದಿದ್ದಳು. ಕಂಡ ಕೂಡಲೇ ಬಂದು, ಯೂರೋಪಿನಲ್ಲಿ ಎಲ್ಲರೂ ಮಾಡೋ ಹಾಗಿ ತಬ್ಬಿ ಹಾಗೆ ಮುತ್ತಿಡಲು ಹೋಗಿದ್ದೆ. ಸಡನ್ನಾಗಿ ನಾನು ಎಲ್ಲಿದೀನಿ ಅಂತ ಜ್ಞಾನೋದಯ ಆಯ್ತು. ಆದ್ರೆ ನಾನು ಈಗ ಬಂದಿರೋದು ಭಾರತಕ್ಕೆ, ಇಲ್ಲಿ ಅದೆಲ್ಲ ಸರಿ ಇಲ್ಲ ಅಂದುಕೊಂಡು ಬರೀ ಒಮ್ಮೆ ಅಪ್ಪಿಕೊಂಡೆ ಅಷ್ಟೇ.

ಸಧ್ಯಕ್ಕೆ ಒಂದು ವಾರ ಆಫೀಸಿಗೆ ರಜೆ ಹಾಕಿರುವೆ. ಮೈಸೂರಲ್ಲಿ ಕಾಲ ಕಳೀತಾ ಇದ್ದೀನಿ. ಹಾಗಾಗಿ ಬ್ಲಾಗು ಅಪ್ಡೇಟ್ ಆಗಿಲ್ಲ..ಇನ್ನು ಕೆಲವು ದಿನಗಳಲ್ಲಿ ಮತ್ತೆ ಶುರು ಮಾಡ್ತೀನಿ. ಪುನಃ ಆಟೋ ಫೋಟೋಗಳು ಬರಲು ಶುರು ಆಗುತ್ತವೆ.
ಅಲ್ಲಿ ತನಕ...

--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Monday, May 25, 2009

ಟಾಯ್ಲೆಟ್ಟಲ್ಲಿ ಲೇಡಿ ಬಗ್ !

ಶುಕ್ರವಾರ ಇಲ್ಲೇ, ಹ್ಯಾಂಬರ್ಗಿನಲ್ಲಿ ಸುತ್ತಾಡುತ್ತಾ ಇದ್ದೆ. ಸೆಂಟ್ರಲ್ ಟ್ರೈನ್ ಸ್ಟೇಶನ್ ಇಂದ ಹೊರ ಬಂದು,
ಸಾಟರ್ನ್ (SATURN - Electronics Store Chain in Germany) ಗೆ ಹೋಗುವ ಹಾದಿಯಲ್ಲೇ ಬಾಧೆ ಶುರು ಆಯ್ತು. ಅದೃಷ್ಟವಶಾತ್ ಅಲ್ಲೇ ಒಂದು ಶುಚಾಲಯ ಕಂಡಿತು (ಸಿನಿಮಾದಲ್ಲಿ ನಮ್ಮ ಹೀರೋಗಳಿಗೆ ಬೇಕಾದ್ದ ವಸ್ತು ಅದ್ಹೇಗೋ ಸಿಗುತ್ತಲ್ಲ, ಹಾಗೆ). ಅಲ್ಲಿ ಒಳಗೆ ಹೋದಾಗ ಟಾಯ್ಲೆಟ್ಟಿನ ಕಮೋಡಿನಲ್ಲಿ ಲೇಡಿ ಬಗ್ ನ ಚಿತ್ರ ಪ್ರಿಂಟ್ ಮಾಡಿದ್ದಾರೆ.
ಇದನ್ನು ನೋಡಿದ ನನಗೆ ಕನ್ಫ್ಯೂಶನ್ ಶುರು ಆಯ್ತು.. ಏನಪ್ಪಾ ಅಂದ್ರೆ, ಮೊದಲು ಬಾಧೆ ತೀರಿಸ್ಲಾ ಅಥವ ಫೋಟೋ ತೆಗೀಲಾ ಅಂತಾ..

ಪ್ರಕೃತಿನೇ ಯಾವಾಗ್ಲೂ ಗೆಲ್ಲೋದು ಕಣ್ರೀ.. ಮೊದಲು ಬಾಧೆ ತೀರಿಸಿ ಆಮೇಲೆ ಫೋಟೋ ತೆಗೆದೆ.

ಜೊತೆಗೆ ಇನ್ನೊಂದು ವಿಚಾರ.. ಇವತ್ತಿನ ಯಾವುದೋ ಒಂದು ಹೊತ್ತಿನಲ್ಲಿ ನನ್ನ ಬ್ಲಾಗಿಗೆ ಇವತ್ತಿನವರೆಗೂ ಭೇಟಿ ಕೊಟ್ಟವರ ಸಂಖ್ಯೆ 30,000 ಮುಟ್ಟಿತು. ಏನೂ ದೊಡ್ಡ ವಿಚಾರ ಅಲ್ಲ.. ಆದರೂ ಸುಮ್ನೆ ಹೇಳಿಕೊಳ್ಳಬೇಕು ಅನ್ನುಸ್ತು.. ಅಷ್ಟೇ !
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Friday, May 22, 2009

ಮಾವಂದಿರ ಆಶೀರ್ವಾದ

ಇದಕ್ಕೆ ಮುನ್ನ ತಂದೆ ತಾಯಿಯ ಆಶೀರ್ವಾದ, ಅತ್ತೆ ಮಾವನ ಆಶೀರ್ವಾದ ಗಳನ್ನು ಆಟೋ ಅಣಿಮುತ್ತುಗಳಲ್ಲಿ ನೋಡಿದ್ದಿರಿ.
ಈ ಭೂಪನನ್ನು ನೋಡಿ.. ಮೋಸ್ಟ್ಲಿ ಈ ಗಾಡಿ ಕೊಳ್ಳೋಕ್ಕೆ ಈತನ ಮಾವಂದಿರು ಸಹಾಯ ಮಾಡಿದ್ದಾರೆ ಅಂತಾ ಕಾಣುತ್ತೆ. ಆದರಿಂದಲೇ ಈ ರೀತ್ಯಾಗಿ ಬರೆಸಿಕೊಂಡಿದ್ದಾನೆ ಈತ. ಮಿತ್ರ ಅರುಣ ಕಳಿಸಿದ ಫೋಟೋ.

ನೋಡಿ, ಮಾವಂದಿರ ಆಶೀರ್ವಾದ :

ಇನ್ನೊಂದು ಅಭಾಸವನ್ನೂ ಹಾಕಿದ್ದೆ ನಾನು ಸೋಮಾರಿ ಕಟ್ಟೆಯಲ್ಲಿ - "ಅಮ್ಮನ ಮಾತು, ತಮ್ಮನ ದುಡ್ಡು" ಎಂದು ಬರೆಸಿಕೊಂಡಿದ್ದ ಒಬ್ಬಾತ ಆಟೋರಾಜ.
ಆದ್ರೂ ಇತ್ತೀಚಿಗೆ ಈ ರೀತಿಯ ಅಭಾಸಗಳು ಜಾಸ್ತಿ ಆಗ್ತಾ ಇದೆ ಅಲ್ವಾ??
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Tuesday, May 19, 2009

ಆಟೋ ಅಣಿಮುತ್ತುಗಳು - ೬೨ - ಎಲ್ಲರಿಗಾಗಿ, ಒಬ್ಬರಿಗಾಗಿ, ನಿನಗಾಗಿ

ಫಲಕೊತ್ಸವದ ಲಕ್ಷ್ಮಕ್ಕ ಕಳಿಸಿದ ಫೋಟೋ ಇದು.
ರೋಮ್ಯಾಂಟಿಕ್ ಸ್ಟಾರ್ ಈ ಅಣ್ಣ.

ನಗು ಎಲ್ಲರಿಗಾಗಿ,
ಹೃದಯ ಒಬ್ಬರಿಗಾಗಿ
ನಿನಗಾಗಿ

ಇದೆ ಈ ಅಣ್ಣನ "ದಿಲ್ ಚಾಹತಾ ಹೈ"


--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Thursday, May 14, 2009

ಮ್ಯಾಗಿ ನೂಡಲ್ಸ್ ಹಾಗು ರಾಜಕಾರಣ

ನನ್ನ ಲೇಖನಗಳನ್ನು ಓದುವ ಎಲ್ಲರಿಗೂ ನಾನು ಪ್ರಸ್ತುತ ಜರ್ಮನಿಯಲ್ಲಿ ಇದೀನಿ ಅನ್ನೋದು ಗೊತ್ತು.
ಇವತ್ತು ರಾತ್ರಿ ಅಂದ್ರೆ ಮೇ 13, ಸಂಜೆ ಹ್ಯಾಂಬರ್ಗಿನ ಇಂಡಿಯನ್ ಅಂಗಡಿಯಲ್ಲಿ ಮ್ಯಾಗಿ ನೂಡಲ್ಸ್ ಕಂಡಿತು.
ತಡೆಯಲಾಗಲಿಲ್ಲ. ೫ ಪ್ಯಾಕೆಟ್ ತಗೊಂಡು ಬಂದೆ (ಈ ಲೇಖನವನ್ನು ನನ್ನ ಹೆಂಡ್ತಿ ಓದಿದ್ದಾದಲ್ಲಿ, ಜರ್ಮನಿಗೆ ಬಂದು ಮ್ಯಾಗಿ ಅಪರೂಪಕ್ಕೆ ತಿಂತೀನಿ...ಅನ್ನೋದನ್ನ ಹೇಳ್ತೀನಿ...ಇದಕ್ಕೆ ಮುಂಚೆ ಬೆಂಗಳೂರಲ್ಲಿ ಇದ್ದಾಗ ಮ್ಯಾಗಿಯ ಕಡು ವಿರೋಧಿ ನಾನು!!)

ಇವತ್ತು ಒಳ್ಳೇ ವಾಕಿಗೆ ಹೋಗಿ ಬಂದ ಮೇಲೆ ಫುಲ್ಲ್ ಸುಸ್ತಾಗಿತ್ತು, ಊಟಕ್ಕೆ ಏನೂ ಮಾಡೋ ಮೂಡು ಇರ್ಲಿಲ್ಲ. ಹಾಗಾಗಿ ರಾತ್ರಿ ಊಟಕ್ಕೆ ಮ್ಯಾಗಿ ಮಾಡೋಣ ಅಂತಾ ತೀರ್ಮಾನ ಮಾಡಿದೆ (ಹೆಂಡತಿ ಕ್ಷಮಿಸಿದ್ದಲ್ಲಿ) !!.
ನಾನು ಇಲ್ಲಿ ಮಾಡೋ ನೂಡಲ್ಸ್ ಬಹಳಾ ಸಿಂಪಲ್.. ನೀರನ್ನು ಕುದಿಸಿ, ಅದಕ್ಕೆ ಮ್ಯಾಗಿ ಟೇಸ್ಟ್ ಮೇಕರ್ ಹಾಕಿ, ನಂತರ ನೂಡಲ್ಸ್ ಹಾಕಿ...ಬೇಯಿಸಿ ತಿನ್ನೋದು..ಸುಸ್ತಾಗಿದ್ದಾಗ ಈರುಳ್ಳಿ, ಟ್ಯೊಮಾಟೋ ಹೆಚ್ಚಿ ನೂಡಲ್ಸ್ ಮಾಡೋ ವ್ಯವಧಾನ ಇರಲ್ಲ.

ಸರಿ, ಟಾಪಿಕ್ಕಿಗೆ ಬರ್ತೀನಿ (ಸುಮ್ನೆ ಕುಯ್ತಾ ಸಾಯಿಸ್ತಾ ಇದಾನೆ ಬಡ್ಡಿಮಗ ಅಂತಾ ಬಯ್ಕೋತಾ ಇದೀರಾ ?)
ನೀರು ಕುದಿಯೋಕ್ಕೆ ಇಟ್ಟು, ಅದಕ್ಕೆ ಮ್ಯಾಗಿ ಟೇಸ್ಟ್ ಮೇಕರ್ ಹಾಕಿ, 2 ನಿಮಿಷದ ನಂತರ ನೂಡಲ್ಸ್ ಹಾಕಿ ಮಿಕ್ಸ್ ಮಾಡಲು ಶುರು ಮಾಡಿದೆ (ಇಲ್ಲಿ ಇರೋದು ಎಲೆಕ್ಟ್ರಿಕ್ ಒಲೆ..ಹಾಗಾಗಿ ಸರಿಯಾದ ಬಿಸಿ ಎಂಥದ್ದು ಅಂತ ಗೊತ್ತಾಗಲ್ಲ). ತಳ ಹಿಡಿಯೋಕ್ಕೆ ಶುರು ಆಯ್ತು. ಹಾಗಾಗಿ, ಇನ್ನೂ ದೊಡ್ಡದಾದ ಪಾತ್ರೆಯಲ್ಲಿ ಕಾಲುಭಾಗ ನೀರು ಇಟ್ಟು ಆದರ ಮೇಲೆ ನೂಡಲ್ಸ್ ಬೇಯಿಸೋ ಪಾತ್ರೆ ಇಟ್ಟೆ.. ಹೀಗೆ ತಳ ಸೀದುತ್ತಾ ಇರೋ ಪಾತ್ರೆಯನ್ನು, ಸೀಯದೇ ಇರೋ ಹಾಗೆ ಮಾಡಲು, ನೀರನ್ನು ತುಂಬಿರೋ ಪಾತ್ರೆ ಮೇಲೆ ಇಟ್ಟೆನಲ್ಲಾ, ಅವಾಗ............

ಸಂದರ್ಭಕ್ಕೆ ತಕ್ಕುನಾಗಿ ತಮ್ಮ ನಿಷ್ಠೆ, ನೀಯತ್ತು, ನಿಯಮ ಬದಲಾಯಿಸೋ ರಾಜಕಾರಣಿಗಳು ಜ್ನಾಪಕಕ್ಕೆ ಬಂದರು.
ಇಷ್ಟನ್ನು ಹೇಳೋಕ್ಕೆ ಇಷ್ಟು ಉದ್ದದ ಲೇಖನ.

ಲೇಖನದ ಹೆಡಿಂಗು ನೋಡಿ, ತರುವಾಯ ಲೇಖನವನ್ನು ಓದಿ ನಿರಾಸೆಯಾಗಿದ್ದಲ್ಲಿ ನನಗೆ ಬಯ್ಯಲು ನಿಮಗೆ ಎಲ್ಲಾ ಅಧಿಕಾರ ಇದೆ. ಏಕೆಂದ್ರೆ, ನಿಮ್ಮ ಅಭಿಮಾನದಿಂದಲೇ ಇಂದಿನ ತನಕ ನನ್ನ ಬ್ಲಾಗು ಉಸಿರಾಡುತ್ತಾ ಇದೆ :-).

ಜಾಸ್ತಿ ಹೇಳಲ್ಲಾ...ನಿಮ್ಮ ಅಭಿಮಾನವೇ ನನ್ನ ಬ್ಲಾಗಿಗೆ ಅಕ್ಕಿ ಬೇಳೆ....ಜೊತೆಗೆ ಮ್ಯಾಗಿ ನೂಡಲ್ಸ್ :)
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Wednesday, May 13, 2009

ಸಂಜೆವಾಣಿ ಸಮಯ - ಇಂದಿನ ದಿನಾಂಕ ಹಿಂದಿನ ಸುದ್ದಿ

ಇಂದಿನ ಸಂಜೆವಾಣಿಯ ಆನ್ಲೈನ್ ಆವೃತ್ತಿಯಲ್ಲಿ ಕಂಡಿದ್ದು.
ವೆಬ್ ಪೇಜಿನಲ್ಲಿ ತೋರಿಸುತ್ತಾ ಇರೋದು May 13, 2009 ಅಂತಾ,
ಆದ್ರೆ ಒಳಗಿರೋ ಪೇಪರ್ ಇರೋದು ಮಂಗಳವಾರ 14-4-2009.ಏನಿದು ಮಾಯೆ ???
ನನ್ನ ಬ್ಲಾಗಿಗೊಸ್ಕರ ಈ ಥರ ಮಾಡ್ತಾರಾ ಇವ್ರು ?


--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Tuesday, May 12, 2009

ಆಟೋ ಅಣಿಮುತ್ತುಗಳು - ೬೧ - ಉಲೂಚಿ

ಈ ಫೋಟೋವನ್ನು ಮಿತ್ರ ಶ್ರೀಚರಣ ಕಳ್ಸಿದ್ದು.
ನೋಡಿದ ಕೂಡಲೇ "ಬಬ್ರುವಾಹನ" ಚಿತ್ರ ಜ್ಞಾಪಕಕ್ಕೆ ಬಂತು.
ಅರ್ಜುನ (ಅಣ್ಣಾವ್ರು), ಹಾಗು ಉಲೂಚಿ (ಕಾಂಚನ) ಇಬ್ರೂಹಾಡೋ ಹಾಡು " ನಿನ್ನ ಕಣ್ಣ ನೋಟದಲ್ಲಿ ನೂರು ಆಸೆ ಕಂಡೆನು" ಹಾಡೋಕ್ಕೆ ಶುರು ಮಾಡಿದೆ.
ಆದರೂ, ಉಲೂಚಿ ಅನ್ನೋ ಹೆಸರು ಇಡ್ತಾರಾ ? ಯಾರಿಗಾದ್ರೂ ಇಟ್ಟಿರೋದನ್ನ ಕೇಳಿದೀರಾ ಅಥವಾ ನೋಡಿದೀರಾ?

--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Tuesday, May 5, 2009

ಪ್ರವಾಸಕಥನ - WERFEN ಹಿಮ ಗುಹೆಗಳು

ಮೊದಲ ಸಲ ಪ್ರವಾಸಕಥನ ಬರೀತಾ ಇದೀನಿ. ಅಡ್ಜಸ್ಟ್ ಮಾಡ್ಕಳಿ.

ಕಳೆದ ಶುಕ್ರವಾರ ಆಫೀಸಿಗೆ ರಜೆ ಇತ್ತು. ಹಾಗಾಗಿ ನಾನು ಮತ್ತು ನಮ್ಮ ಸಹೋದ್ಯೋಗಿಗಳು ದಕ್ಷಿಣ ಜರ್ಮನಿ (Bavaria) ಕಡೆ ಒಂದು ಟೂರ್ ಹಾಕಿದ್ವಿ. ಮೊದಲು ಮ್ಯೂನಿಕ್, ಅಲ್ಲಿಂದ ಸಾಲ್ಸ್ ಬರ್ಗ್ (ಆಸ್ಟ್ರಿಯ), ಹಾಗು Neuschwanstein Castle ಗೆ ಹೋಗಿದ್ವಿ. ಮ್ಯೂನಿಕ್ಕಿನಲ್ಲಿ ನಗರ ಪ್ರದಕ್ಷಿಣೆ, ಒಲಂಪಿಕ್ ಪಾರ್ಕ್, ಟವರ್, BMW ಮ್ಯೂಸಿಯಂ ನೋಡಿ ಬಂದ್ವಿ.ಮಾರನೆಯ ದಿನ (ಮೇ 2), ಮ್ಯೂನಿಕ್ಕಿಂದ ಬೆಳಿಗ್ಗೆ ಬೇಗನೆ ಹೊರಟು ಸಾಲ್ಸ್ ಬರ್ಗ್ (Salzburg, Austria) ನಗರಕ್ಕೆ ಬೆಳಿಗ್ಗೆ 10 ಕ್ಕೆ ಬಂದ್ವಿ.ಅಲ್ಲಿಂದ ಮತ್ತೊಂದು ಟ್ರೈನ್ ಹಿಡಿದು ಸುಮಾರು 11:30 ಅಷ್ಟೊತ್ತಿಗೆ WERFEN ಅನ್ನೋ ಹಳ್ಳಿಗೆ ಬಂದ್ವಿ.

ಇಲ್ಲಿ ಇರೋದು ಪ್ರಪಂಚದ ಅತ್ಯಂತ ಹಳೆಯ ಹಾಗು ದೊಡ್ಡ ಹಿಮ ಗುಹೆಗಳು. ಈ ಗುಹೆಗಳು ಸರಿ ಸುಮಾರು 50 ರಿಂದ 60 ದಶಲಕ್ಷ ವರ್ಷ ಹಳೆಯದು.

WERFEN ಟ್ರೈನ್ ಸ್ಟೇಶನ್ ಇಂದ ಬಸ್ ಹಿಡಿದು EISRIESENWELT (Giant ICE World) ನ Entrance ಗೆ ಹೋದ್ವಿ. ಹೋಗೋ ದಾರಿ ಕೂಡ ಬೆಟ್ಟದಲ್ಲೇ, ಸುಮಾರು ೧೫ ನಿಮಿಷದ ಹಾದಿ. ಪ್ರವೇಶದಲ್ಲಿ ನಮ್ಮ ಎಕ್ಸಟ್ರಾ ಲಗೇಜನ್ನು ಕ್ಲಾಕ್ ರೂಮಿನಲ್ಲಿ ಭದ್ರ ಪಡಿಸಿ, ಗುಹೆಯ ಟೂರಿಗೆ ಟಿಕೇಟನ್ನು ಕೊಂಡು ಮೇಲೆ ಹತ್ತಲು ಶುರು ಮಾಡಿದೆವು.

ಗುಹೆ ಇರೋದು ಪರ್ವತದ ಆಲ್ಮೋಸ್ಟ್ ತುದಿಯಲ್ಲಿ. ಸಮುದ್ರ ಮಟ್ಟಕ್ಕಿಂತ ಸುಮಾರು 1775 ಮೀ ಮೇಲಿದೆ. ಮೊದಲು ೨ ಕಿಮೀ ನಡುಗೆ, ನಂತರ ೪ ನಿಮಿಷದಷ್ಟು ಕೇಬಲ್ ಕಾರಿನಲ್ಲಿ, ಮತ್ತೆ ಪುನಃ ಸುಮಾರ್ ೧.೫ ಕಿಮೀ ನಡೆದರೆ ಗುಹೆಯ ಪ್ರವೇಶ ಸಿಗುತ್ತದೆ. ಈ ಗುಹೆಯನ್ನು ಮೇ ೧ ರಿಂದ ಅಕ್ಟೋಬರ್ ತಿಂಗಳ ತನಕ ತೆರೆದಿರುತ್ತಾರೆ. ಅದಾದ ಮೇಲೆ ಪ್ರವಾಸಿಗರಿಗೆ ಬಂದ್ ಆಗಿರುತ್ತದೆ. ನಮ್ಮ ಟೈಮಿಂಗ್ ಸರಿ ಇತ್ತು, ಅಲ್ಲಿಗೆ ನಾವು ಹೋಗಿದ್ದು ಮೇ ೨ ರಂದು.

ಸರಿ, ಇನ್ನು ಈ ಗುಹೆಗಳ ಬಗ್ಗೆ ಸ್ವಲ್ಪ ಇನ್ಫೊ ಕೊಡ್ತೀನಿ.

ಈ ಗುಹೆಗಳು ಸುಮಾರು ೫೦ ರಿಂದ ೬೦ ಮಿಲಿಯನ್ ವರ್ಷ ಹಳೆಯವು. ಜೊತೆಗೆ ಈ ಗುಹೆಗಳು ಸುಮಾರು 42 ಕಿಮೀ ಉದ್ದ ಇದೆ. ಗುಹೆ ಇರುವ ಪರ್ವತವು ಸುಣ್ಣದಕಲ್ಲಿನದು (Limestone). ಹಾಗಾಗಿ ಈ ಕಲ್ಲುಗಳು ಸೂಕ್ಷ್ಮಾತಿಸೂಕ್ಷ್ಮ ರಂಧ್ರಗಳನ್ನು ಹೊಂದಿರುತ್ತದೆ ಹಾಗು ಇದರ ಮೂಲಕ ನೀರು ತೊಟ್ಟಿಕ್ಕುತ್ತದೆ. ಪರ್ವತದ ಮೇಲಿನ ನೀರು, ಹಾಗೆಯೇ ಈ ಬಂಡೆಗಳ ಮೂಲಕ ಇಳಿದು ಈ ಗುಹೆಯಲ್ಲಿ ಶೇಖರವಾಗುತ್ತದೆ. ಈ ಜಾಗ ಇರೋದು ಆಲ್ಪ್ಸ್ (ALPS) ಪರ್ವತ ಶ್ರೇಣಿಯಲ್ಲಿ, ಹಾಗಾಗಿ ಛಳಿಗೆ ಏನೂ ಕೊರತೆಯಿಲ್ಲ. ಛಳಿಗಾಲದಲ್ಲಿ ತಾಪಮಾನ ಸುಮಾರು -೧೦ ರಿಂದ -೨೦ ರ ತನಕ ಬೀಳುತ್ತದೆ. .

ಈ ಗುಹೆಯು ೪೨ ಕಿಮೀ ಅಷ್ಟು ಉದ್ದ ಇದ್ದರೂ ಕೂಡ, ಗಾಳಿಯ ಓಡಾಟ ಎಲ್ಲಾ ಕಡೆ ಚೆನ್ನಾಗಿದೆ. ನೈಸರ್ಗಿಕ ವಾತಾಯನ ಬಹಳ ಚೆನ್ನಾಗಿದೆ. ಚಳಿಗಾಲದಲ್ಲಿ ಇದೆ ವಾತಾಯನದಿಂದ, ಕಟು ಚಳಿಗಾಳಿಯು ಇಡೀ ಗುಹೆಯಲ್ಲಿ ಸಂಚರಿಸುತ್ತದೆ, ಹಾಗೆಯೇ ಶೇಖರಗೊಂಡ ನೀರು ಗಟ್ಟಿಯಾಗಿ ಐಸ್ ಆಗುತ್ತೆ. ಹಾಗು ಬೇಸಿಗೆಯಲ್ಲಿ ಸ್ವಲ್ಪ ಐಸ್ ಕರಗಿ ನೀರಾಗಿ ಕೆಳಗೆ ಹರಿಯುತ್ತದೆ. ಇದೆ ಪ್ರಕ್ರಿಯೆ ಲಕ್ಷಾಂತರ ವರ್ಷಗಳಿಂದ ನಡೆಯುತ್ತಾ ಬಂದಿದೆ. ಕೆಲವೊಂದು ಕಡೆ ಸುಮಾರು ೪೦ ರಿಂದ ೫೦ ಮೀಟರ್ ನಷ್ಟು ದಪ್ಪವಾಗಿ ಐಸ್ ಕಟ್ಟಿದೆ.

ಈ ಗುಹೆಗಳನ್ನು 1879 ನೆ ಇಸವಿಯಲ್ಲಿ Salzburg ಗಿನ ಓರ್ವ ನೈಸರ್ಗಿಕ ವಿಜ್ಞಾನಿ ಆಂಟನ್ ಪೊಸ್ಸೆಲ್ಟ (Anton Posselt) ಪತ್ತೆ ಹಚ್ಚಿದ್ದು. ಕಣ್ಣು ಕುಕ್ಕುವ ಕತ್ತಲೆಯಲ್ಲಿ ಸುಮಾರು ೨೦೦ ಮೀ ಒಳಗೆ ಹೋಗಿ ಅಫಿಶಿಯಲ್ ಆಗಿ ಪತ್ತೆ ಹಚ್ಚಿದ್ದು. ಇದರ ಬಗ್ಗೆ ಆಸ್ಟ್ರಿಯ ದಲ್ಲಿ ರಿಪೋರ್ಟನ್ನು ತಯಾರಿಸಿದ. ಇದಾದ ನಂತರ ಈ ರಿಪೋರ್ಟ್ ಅಷ್ಟೊಂದು ನೋಡಲ್ಪಡಲಿಲ್ಲ.

ನಂತರ 1920 ಆಸುಪಾಸಿನಲ್ಲಿ, ಮತ್ತೋರ್ವ Salzburg ಗಿನ ಅತ್ಯಂತ ಸಾಹಸಿ ಹಾಗು ನಿಸ್ಸೀಮ ಗುಹಾನ್ವೇಷಕ ನಾದ ಅಲೆಕ್ಸಾಂಡರ್ ಫೊನ್ ಮ್ಯೋರ್ಕ್ (Alexander von Mörk) ಆಂಟನ್ ಬರೆದ ರಿಪೋರ್ಟಿನ ಮಹತ್ವ ತಿಳಿದು, ಈ ಗುಹೆಗೆ ಭೇಟಿ ಕೊಟ್ಟ, ಹಾಗು ಇದರ ಬಗ್ಗೆ ಅಧ್ಯಯನ ನಡೆಸಿ, ಇದರ ಬಗ್ಗೆ ವ್ಯಾಪಕವಾದ ರಿಪೋರ್ಟನ್ನು ಬರೆದು ಜನರಿಗೆ ತಿಳಿಸಿದ.
ಈತನ ಭೇಟಿಯ ನಂತರ, ಸುಮಾರು ಮಂದಿ ಇಲ್ಲಿಗೆ ಅವನ ಜೊತೆ ಹಾಗು ನಂತರ ಬಂದು ಅನ್ವೇಷಿಸಿ ಹೋದರು. ಇವರುಗಳು ಈ ಗುಹೆಯ ಒಳಗೆ ಓಡಾಡಲು, ಹತ್ತಲು ಅನುಕೂಲವಾಗುವ ರೀತಿ Route ಗಳನ್ನು ಕಟ್ಟಿದರು.

ಮೊದಲನೆ ಜಾಗತಿಕ ಮಹಾಯುಧ್ಧದಲ್ಲಿ ಅಲೆಕ್ಸಾಂಡರ್ ಫೊನ್ ಮ್ಯೋರ್ಕ್ (Alexander von Mörk) ನಿಧನನಾದ. ಸತ್ತಾಗ ಈತನಿಗೆ ಕೇವಲ 27 ವರ್ಷ. ಈತನ ಆಸೆ ಏನಾಗಿತ್ತೆಂದರೆ, ಈ ಗುಹೆಯಲ್ಲೇ ತನ್ನ ಸಂಸ್ಕಾರ ನೆರವೆರಬೇಕೆಂದು. ಆಸೆಯ ಪ್ರಕಾರವಾಗಿ ಈತನ ಚಿತಾಭಸ್ಮವನ್ನು ಅಲ್ಲೇ ಒಂದು ದೊಡ್ಡ ಕುಂಡದಲ್ಲಿ ಇಡಲಾಗಿದೆ.

ಒಂದೇ ಒಂದು ಬೇಜಾರಿನ ವಿಷಯವೆಂದರೆ ಈ ಗುಹೆಯ ಒಳಗೆ ಫೋಟೋ ಹಾಗು ವಿಡಿಯೋ ತೆಗೆಯಲು ಅನುಮತಿ ಇಲ್ಲ. ಇಲ್ಲಿ ಗುಹೆಯ ಒಳಗೆ ಹೋಗುವುದು ಒಂದು ಸಣ್ಣ ಲೈನಿನಲ್ಲಿ. ಹಾಗಾಗಿ ಕ್ಯಾಮೆರಾ ಹಿಡಿದು ಅಡ್ಜಸ್ಟ್ ಮಾಡಿ, ಫ್ಲಾಶ್ ಹೊಡೆದು, ಬೇಕಾದವರನ್ನು ನಿಲ್ಲಿಸಿ ಫೋಟೋ ತೆಗೆದರೆ ಮಿಕ್ಕಿದ ಗುಂಪಿಗೆ ಕಷ್ಟ ಅನ್ನೋ ಕಾರಣಕ್ಕೆ, ಹಾಗು ಈ ಜಾಗ ಬಹಳ ಇಳಿಜಾರಿನಿಂದ ಕೂಡಿದೆ. ಮೆಟ್ಟಿಲಿನ ಅಕ್ಕ ಪಕ್ಕದಲ್ಲಿ ಹಿಮ ಕಟ್ಟಿರುತ್ತದೆ ಹಾಗು ತುಂಬಾ ಜಾರುತ್ತದೆ. ಫೋಟೋ ತೆಗೆಯುವ ಉತ್ಸಾಹದಲ್ಲಿ ಅದರ ಮೇಲೆ ಕಾಲಿಟ್ಟು, ಜಾರಿ ಬಿದ್ದು ಪ್ರಾಣ ಹೋಗುವ ಸಂಭವ ಕೂಡ ಇದೆ. ಹಾಗಾಗಿ ಫೋಟೋ ಹಾಗು ವಿಡಿಯೋ ತೆಗೆಯೋದು ನಿರ್ಬಂಧಿಸಲಾಗಿದೆ.

ಸಧ್ಯಕ್ಕೆ ಇಷ್ಟು ಸಾಕು ಅನ್ಕೋತೀನಿ. ಕೆಲವು ಫೋಟೋಗಳನ್ನು ಹಾಕ್ತ ಇದೀನಿ. ಮಿಕ್ಕಿದ ಫೋಟೋಗಳಿಗೆ PICASA ಆಲ್ಬಮ್ಮಿನ ಲಿಂಕ್ ಕೊಡ್ತೀನಿ. ಜೊತೆಗೆ ಗುಹೆಯ ಒಳಗೆ ಹೇಗಿದೆ ಅಂತ ನೋಡೋದಕ್ಕೆ ಈ ಜಗದ ಅಫಿಶಿಯಲ್ Website ಲಿಂಕನ್ನು ಕೊಡ್ತೀನಿ.

ಚಾರಣದ ಕೆಲವು ಫೋಟೋಗಳು ನೋಡಿ :

ಪ್ರವೇಶ -


ALPS ಪರ್ವತಶ್ರೇಣಿ -


ಪ್ರಪಾತ -


Cable Car -


ಹೆಂಗಿದಾನೆ ಕಟ್ಟೆ ಶಂಕ್ರ -


ಗುಹೆಯ ಪ್ರವೇಶದ್ವಾರ -


WERFEN ಇಂದ ಹೊರಟು ಗುಹೆಯ ಒಳಗೆ ಹೋಗುವ ತನಕದ ಚಿತ್ರಗಳಿಗೆ ನನ್ನ PICASA ಅಲ್ಬಂ ಲಿಂಕ್ :
http://picasaweb.google.com/mandagere.shankar/SalzburgIceCaves2009?authkey=Gv1sRgCJbUlc6O_bXhKw&feat=directlink

ಗುಹೆಯ ಒಳಗಿರುವ ರಮಣೀಯ ದೃಶ್ಯಕ್ಕಾಗಿ EISRIESEN WELT ನ ಅಧಿಕೃತ Website ನ ಚಿತ್ರಗಳಿರುವ ಲಿಂಕ್ :
http://www.eisriesenwelt.at/site/content/CB_ContentShow.php?coType=photos

ಹಿಮ ಗುಹೆಗಳ ಬಗ್ಗೆ ಇನ್ನೂ ಮಾಹಿತಿ ಬೇಕಾದ್ದಲ್ಲಿ, ಈ ತಾಣಕ್ಕೆ ಭೇಟಿ ನೀಡಬಹುದು :
http://www.eisriesenwelt.at/site/content/CB_ContentShow.php?coType=home&lang=EN

--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Tuesday, April 28, 2009

ಆಟೋ ಅಣಿಮುತ್ತುಗಳು - ೬೦ - ಸಿಕ್ಕಿದ್ಲು, ನಗ್ದಲು, ಮಕ್ಕಳು

ಫುಲ್ ಫಾಸ್ಟ್ ಸಂಸಾರ ಅನ್ಸುತ್ತೆ ಈ ಅಣ್ಣನದು.
ಜೊತೆಗೆ ಛೀ ಕಳ್ಳಿ ಅಂತ ಬೇರೆ.
ನನ್ನ ಮಿತ್ರ ಶ್ರೀಚರಣ ಕಳ್ಸಿದ್ದು ಈ ಫೋಟೋನಾ.
ಲಿರಿಕ್ಸ್ ಏನೋ ಚೆನ್ನಾಗಿದೆ (ಡುಂಡಿರಾಜ್ ಚುಟುಕು), ಆದ್ರೆ ಬರೆದ ಮಹಾನುಭಾವ ಯಾರಪ್ಪಾ?


--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Thursday, April 23, 2009

ಲಂಡನ್ ಪಬ್ಬಿನ ಜಗಳ ಹಾಗು ಸಹಾಯಕ್ಕೆ ಬಂದ PAN ಕಾರ್ಡು

ಇದು ಸುಮಾರು ಎರಡೂವರೆ ವರ್ಷದ ಹಿಂದೆ ನಡೆದ ಘಟನೆ, ಅಂದ್ರೆ November 2006. ಆ ವರ್ಷ ಸೆಪ್ಟೆಂಬರಿನಲ್ಲಿ ನಾನು ಮೊದಲ ಬಾರಿ ವಿದೇಶಕ್ಕೆ ಕಾಲಿಟ್ಟಿದ್ದು. ನಾನು ಭಾರತದಿಂದ ಹೊರಗೆ ಕಾಲಿಟ್ಟ ಮೊದಲ ದೇಶ England. ಲಂಡನ್ನಿನಿಂದ ಸುಮಾರು ೬೦ ಮೈಲಿ ದೂರ ಇದ್ದ BASILDON ಅನ್ನೋ ಊರಲ್ಲಿ ನನ್ನ ಕೆಲಸ ಇದ್ದದ್ದು. ಲಂಡನ್ನಲ್ಲಿ ಇಳಿದದ್ದು Heathrow ವಿಮಾನ ನಿಲ್ದಾಣದಲ್ಲಿ. ಅದು ಬಿಡಿ, ಮೊದಲ ಬಾರಿ ವಿದೇಶಿ ನಗರದಲ್ಲಿ ಇಳಿದದ್ದು, ಸುಮಾರು 5-10 ನಿಮಿಷ ಬೇಕಾಯ್ತು, ಲಂಡನ್ನಲ್ಲಿ ಇದ್ದೀನಿ ಅಂತಾ ಕನ್ಫರ್ಮ್ ಆಗಲು.

ನನ್ನ ಲಂಡನ್ನಿನ ಅನುಭವ ಕಥನ ಬಿಡಿ, ಇನ್ನು ಇದರ ಬಗ್ಗೆ ಬರೀತಾ ಕೂತರೆ ಮಹಾಕಾವ್ಯ ಆಗುತ್ತೆ..

ನನ್ನ ಇಬ್ರು ಮೈಸೂರಿನ ಸ್ನೇಹಿತರು ಅಭಿ ಮತ್ತು ಸಿಮ್ಮಿ (ವಿನಯ್), ಆ ವೇಳೆಯಲ್ಲಿ ಲಂಡನ್ನಿನ Middlesex University ಯಲ್ಲಿ MS in International Finance ಓದುತ್ತಾ ಇದ್ರು. ಹೊರದೇಶದ ಆ ನಗರದಲ್ಲಿ ನನ್ನವರು ಎನ್ನುವ ಜೀವ ಇವೆರಡೇ. ಹಾಗಾಗಿ ಪ್ರತಿ ವೀಕೆಂಡು ನನ್ನೂರಿನಿಂದ ಲಂಡನ್ನಿಗೆ ಪ್ರಯಾಣ. ಇವರಿಬ್ಬರು ಇದ್ದದ್ದು ಇವರ ಹಾಸ್ಟೆಲ್ಲಿನಲ್ಲಿ. ನಾನೂ ಇವರ ಹಾಸ್ಟೆಲಿನಲ್ಲೇ ತಂಗುತ್ತಿದ್ದೆ. ಶನಿವಾರ ಬೆಳಿಗ್ಗೆ ಅಲ್ಲಿ ತಲುಪಿ, ಭಾನುವಾರ ಸಂಜೆ ವಾಪಸ್ ನನ್ನೂರಿಗೆ.

ಶನಿವಾರದಂದು ಮೂವರೂ ಲಂಡನ್ನಿನ ಗಲ್ಲಿ ಗಲ್ಲಿ ಸುತ್ತಿ, ಸಂಜೆ ಅವರ ಹಾಸ್ಟೆಲಿನ ರೂಮಿಗೆ ಬಂದು, ನಾನ್ಸೆನ್ಸ್ ಮಾತಾಡ್ತಾ ರಾತ್ರಿ ಕಳೀತಾ ಇದ್ವಿ. ಹೀಗೆ ಒಮ್ಮೆ ನವೆಂಬರ್ 2006 ನ ಒಂದು ಶನಿವಾರ. ಅಭಿ ಮತ್ತು ಸಿಮ್ಮಿಯ ಹಾಸ್ಟೆಲ್ ಇದ್ದದ್ದು North London ನಲ್ಲಿ. ಶನಿವಾರ ನಮ್ಮ ಬೀದಿ ಸುತ್ತಾಟ ಮುಗಿಸಿ, ಅಲ್ಲೇ North London ನ Hendon Central ಅನ್ನೋ ಜಾಗಕ್ಕೆ ಹೋದ್ವಿ. ಅಲ್ಲಿ THE BODHRANS ಅನ್ನೋ ಪಬ್ ಇದೆ, ಹಾಗು ಅಲ್ಲಿ ಅಭಿಯ ಕ್ಲಾಸ್ಮೇಟ್ ಒಬ್ಬಾಕೆ ಕೆಲಸ ಮಾಡ್ತಾ ಇದ್ಳು. ಹಾಗಾಗಿ ಆ ಪಬ್ಬಿಗೆ ಕರ್ಕೊಂಡು ಹೋದ. ಮಾಮೂಲಾಗಿ ನಾನು ಅಭಿ ಹಾಗು ಸಿಮ್ಮಿ ಮಾತಾಡ್ತಾ, ಅಭಿ ತನ್ನ Guinness ಇಳುಸ್ತಾ ಇದ್ದ, ನಾನು Kronenbourg ಇಳುಸ್ತಾ ಇದ್ದೆ. ಪಕ್ಕದಲ್ಲಿ ಒಬ್ಬ ಫುಲ್ ಚಿತ್ತಾಗಿದ್ದ. ನೋಡಕ್ಕೆ ಬ್ರಿಟಿಷ್ ಥರ ಇರಲಿಲ್ಲ, ಆದ್ರೆ ಸ್ವಲ್ಪ ಫ್ರೆಂಚ್ ಥರ ಇದ್ದ. ನಮ್ಮನ್ನು ನೋಡಿ, ಸಡನ್ನಾಗಿ ನಮ್ಮನ್ನು ಟಾರ್ಗೆಟ್ ಮಾಡುತ್ತಾ ತನ್ನನ್ನು ತಾನೇ

"I am a terrorist.." ಅನ್ನೋಕ್ಕೆ ಶುರು ಮಾಡಿದ.

ನಾನು ಅದರ ಬಗ್ಗೆ ಗಮನ ಕೊಡದೆ ಸುಮ್ನೆ ಅಭಿ, ಸಿಮ್ಮಿ ಜೊತೆ ಮಾತಾಡ್ತಾ ಕೂತೆ. ಪದೇ ಪದೇ ಹೀಗೆ ಅನ್ನುತ್ತಾ ಇದ್ದ. ಸ್ವಲ್ಪ ಹೊತ್ತಾದ ಮೇಲೆ...

"You know, you people look like terrorists and are terrorists" ಅಂದ.

ನಮ್ಮ ಅಭಿ ಈ ವಿಚಾರದಲ್ಲಿ ಸಿಕ್ಕಾಪಟ್ಟೆ ಮೆಂಟ್ಲು ಹಾಗು ಧೈರ್ಯ ಜಾಸ್ತಿ. ಸಡನ್ನಾಗಿ ಅವನ ಕಡೆ ತಿರುಗಿ
"You know mate, you too look like a F***in Algerian Terrorist" ಅಂದ. ಅವ್ನು ಮೋಸ್ಟ್ಲಿಫ್ರೆಂಚ್ ಅನ್ಸುತ್ತೆ.ಈ ಫ್ರೆಂಚರಿಗೆ Algerians ಕಂಡ್ರೆ ಆಗಲ್ಲ. ಸಿಕ್ಕಾಪಟ್ಟೆ ಉರಿ ಶುರು ಆಯ್ತು ಅನ್ಸುತ್ತೆ. ಮೊದಲೇ ಕುಡಿದು ಚಿತ್ತಾಗಿದ್ದ, ಏನೇನೋ ಬಡಬಡಾಯಿಸೋಕ್ಕೆ ಶುರು ಮಾಡಿದ. ನಾನು ನೋಡೋಷ್ಟು ನೋಡಿದೆ.

ಅವ್ನು ಕೂಗಾಡೋದು ಜಾಸ್ತಿ ಆಯ್ತು. ಅಲ್ಲಿಯ ಪಬ್ಬು, ಬಾರ್, ಡಿಸ್ಕೋ ಗಳಲ್ಲಿ ಮಸ್ತ್ ಹೈಟ್, ಮಸ್ತ್ ತೂಕ ಇರೋ ಜನರನ್ನ Public Safety ಅಂತಾ ಇಟ್ಟಿರ್ತಾರೆ, ಅಂದ್ರೆ Nothing but Bouncers. ಪಬ್ಬು ಬಾರಿನಲ್ಲಿ ಕಿರಿಕ್ ಆದ್ರೆ ತಡೆಯೋಕ್ಕೆ ಅಷ್ಟೇ. ಅಲ್ಲಿನ Public Safety Man ಹತ್ರ ಹೋದೆ. ಆ ಕ್ಷಣದಲ್ಲಿ ಅದೇನ್ ಐಡಿಯಾ ಹೊಳೀತೋ ಏನೋ, ಪರ್ಸನ್ನು ತೆಗೆದು,
ಅದ್ರಲ್ಲಿ ಇದ್ದ ನನ್ನ PAN ಕಾರ್ಡನ್ನು ಅವನಿಗೆ ತೋರಿಸಿ...

"Look Mate, that drunkard is passing some real nonsense rasist abuses and comments.
I work for the Income Tax Department, Government of India. If that person doesn't stop his nonsense, I will be forced to call the police, lodge a complaint on the grounds of racial abuse and also I need to call my embassy" ಅಂದೆ.

ನನ್ನ PAN ಕಾರ್ಡನ್ನು ನೋಡಿದ. ಯಾವಾಗ ನಾನು Racial Abuse ಅಂತಾ ಕಂಪ್ಲೇಂಟ್ ಕೊಡ್ತೀನಿ ಅಂದೆನೋ, ಅವಾಗ ಆ ಕೂಗಾಡುತ್ತಿದ್ದವನ ಹತ್ರ ಹೋಗಿ, ಬಾಯಿ ಮುಚ್ಚಿಕೊಂಡು ಇರು ಅಂತ ಹೇಳಿ, ಅವನನ್ನು ಹೊರಗೆ ಹಾಕಿದ.

ಯಾಕೆ ಅಂದ್ರೆ ಇಂಗ್ಲೆಂಡಿನಲ್ಲಿ Racial Abuse, Racism ಅನ್ನೋದು ಒಂದು ತೀವ್ರ ಅಪರಾಧ. ಹಾಗಾಗಿ ಈ ಥರ ಘಟನೆ ನಡೆದರೆ, ಕಂಪ್ಲೇಂಟ್ ಕೊಡ್ತೀನಿ ಅಂದಾಗ ಅಲ್ಲಿನ ಬಿಳಿ ಜನ ಸಖತ್ ಹೆದ್ರುತಾರೆ. ಜೊತೆಗೆ ಪಬ್ಬಿನಲ್ಲಿ ಈ ಥರ ಘಟನೆ ನಡೆದು, ಆ ಪಬ್ಬಿನಲ್ಲಿ ಕೆಲಸ ಮಾಡೋರು ಏನೂ ಮಾಡಲಿಲ್ಲ ಅಂತ ಕಂಪ್ಲೇಂಟು ಹಾಕಿದರೆ, ಆ ಪಬ್ಬಿನ ಲೈಸೆನ್ಸ್ ಕ್ಯಾನ್ಸೆಲ್ ಆಗೋ ಸಾಧ್ಯತೆ ಇದೆ.


ಮೊನ್ನೆ ನನ್ನ ಕೊಲೀಗ್ ಹತ್ರ ಈ ಘಟನೆ ಹೇಳಿದೆ..
ಅವ್ರು, "ಸಖತ್ತಾಗಿದೆ ಶಂಕರ್ ಇದು, ಆದ್ರೆ ಬ್ಲಾಗಿನಲ್ಲಿ ಇನ್ನೂ ಯಾಕೆ ಇದನ್ನು ಹಾಕಿಲ್ಲಾ ?" ಅಂತ ಕೆಳುದ್ರು..
ಹಾಗಾಗಿ ಇವತ್ತು ಹಾಕಿದೆ.
ಅಂತೂ ಇಂತೂ ನನ್ನ PAN ಕಾರ್ಡು ಲಂಡನ್ನಲ್ಲಿ ಹೀಗೆ ಸಖತ್ತಾಗಿ ಉಪಯೋಗಕ್ಕೆ ಬಂತು.
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Monday, April 20, 2009

ಆಟೋ ಅಣಿಮುತ್ತುಗಳು - ೫೯ - ಹೊರಟ್ರೆ ನಿಂತ್ರೆ

ಲಕ್ಷ್ಮಕ್ಕ ಕಳ್ಸಿದ ಫೋಟೋ ಇದು.


ಫೋಟೋದಲ್ಲಿ ಸರಿಯಾಗಿ ಕಾಣದೆ ಇದ್ರೆ ಇಲ್ಲಿ ಓದಿ :
ಹೊರಟ್ರೆ ಜಾತ್ರೆ ನಿಂತ್ರೆ ಹಬ್ಬ
ಅಣ್ಣ ಫುಲ್ ಜಾತ್ರೆ ಹಾಗು ಹಬ್ಬಕ್ಕೆ ರೆಡಿ ಆಗಿದಾನೆ ಅನ್ಸುತ್ತೆ.
-----------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Friday, April 17, 2009

ದಿನಾಂಕವೇ ಚೇಂಜ್ ಆಗಿದೆ !!

ಇದು ಇವತ್ತಿನ ಸಂಜೆವಾಣಿಯ ಆನ್-ಲೈನ್ ಆವೃತಿಯಲ್ಲಿ ಕಂಡುಬಂದಿದ್ದು.
ಇನ್ಯಾವ ಮಟ್ಟಿಗೆ ಈ ಪತ್ರಿಕೆಯವರು ಕೆಲಸ ಮಾಡ್ತಾರೋ ಏನೋ. ವೆಬ್-ಸೈಟಿನಲ್ಲಿ ತೋರುಸ್ತಾ ಇರೋದು -
April 18, 2009, ಪತ್ರಿಕೆಯ PDF ಅವತರಣೆಯಲ್ಲಿ ಕಾಣುಸ್ತಾ ಇರೋದು ಶುಕ್ರವಾರ 17-4-2009 ಅಂತಾ.
ಇಷ್ಟು ಬೇಜವಾಬ್ದಾರಿತನ, ನಿರ್ಲಕ್ಷ್ಯ ಇರಬಾರದು ಅಲ್ವೇ ? ಇದರ ಜೊತೆಗೆ ದೊಡ್ಡದಾಗಿ ಹೇಳಿಕೊಳ್ಳೋದು


"The First Indian Newspaper to Podcast" ಅಂತ. ಯಾವ ಗ್ರಹಚಾರವಪ್ಪಾ ಇದು ?
ಇನ್ಮೇಲೆ ಪತ್ರಿಕೋದ್ಯಮ ಹೇಗಿರಬಾರದು ಅಂತ ತೋರಿಸೋಕ್ಕೆ "ಸಂಜೆವಾಣಿ" ಯನ್ನು ಮಾದರಿಯಾಗಿ ಇಟ್ಕೊಬೇಕು.
ವಿಶ್ವವಿದ್ಯಾನಿಲಯದ ಕುಲಪತಿಗಳಿಗೆ ಈ ವಿಚಾರವಾಗಿ ಲೆಟರ್ ಬರೀತೀನಿ.
ಪತ್ರಿಕೋದ್ಯಮ ಪದವಿ ಹಾಗು ಸ್ನಾತಕೊತ್ತರದ ಪಠ್ಯದಲ್ಲಿ ಇದನ್ನು ಅಳವಡಿಸಿ ಅಂತ. ಹೆಂಗೆ ?
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Thursday, April 9, 2009

ದೇಶದ ಶಾಂತಿ ಹಾಗು ಭದ್ರತೆಗೆ ಇದಕ್ಕಿಂತಾ ಅಪಾಯ ಬೇಕೇ ?

ಇವತ್ತಿನ ಪೇಪರಿನಲ್ಲಿ ತಮಿಳುನಾಡಿನ ಎಂ.ಡಿ.ಎಂ.ಕೆ ನಾಯಕ ವೈಕೋ ಹೇಳಿರೋದನ್ನು ಓದಿದಾಗ ಮೈಮೇಲೆ ಚೇಳು ಹರಿದ ಹಾಗಾಯ್ತು. LTTE ಯನ್ನು ನಮ್ಮಲ್ಲಿ ಪ್ರತ್ಯೇಕತಾವಾದಿಗಳು ಹಾಗು Risk to the National Security ಅಂತಾ ಗುರುತಿಸಿದ್ದರೂ ಕೂಡಾ, ಈ ಥರದ ನಾಯಕರು, ಸೊ ಕಾಲ್ಡ್ ಭಾಷಾ ಹೋರಾಟಗಾರರು, ಇಂಥಾ ಸಂಘಟನೆಯನ್ನು ಬಹಿರಂಗವಾಗಿ ಬೆಂಬಲಿಸುವುದರ ಜೊತೆಗೆ ಆ ಗುಂಪಿನ ನಾಯಕ ವೆಲ್ಲುಪಿಳ್ಳೈ ಪ್ರಭಾಕರನ್ ಗೆ ಅಪಾಯವಾದಲ್ಲಿ, ತಮಿಳುನಾಡಿನಲ್ಲಿ ರಕ್ತಪಾತವಾಗುತ್ತದೆ ಎಂದು ಹೇಳಿಕೆ ಕೊಟ್ಟಿದ್ದು, ನಮ್ಮ ಇಂದಿನ ಅದಃಪತನಕ್ಕೆ ಬಿದ್ದಿರುವ ಪ್ರಜಾಪ್ರಭುತ್ವ ಹಾಗು ಹೊಲಸು ರಾಜಕಾರಣಕ್ಕೆ ಕನ್ನಡಿ ಹಿಡಿದಂತಿದೆ.

ಇಂಥವರನ್ನು ಅನುಸರಿಸಿ, ನಮ್ಮ ಬೆಂಗಳೂರಿನಲ್ಲಿ ಕೂಡಾ "ಶ್ರೀಲಂಕಾದಲ್ಲಿ ತಮಿಳರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ" ಪ್ರತಿಭಟನೆ ಮಾಡ್ತಾರೆ. ಮನುಷ್ಯರ ಮೇಲೆ ದೌರ್ಜನ್ಯ ನಡೆದಲ್ಲಿ ಅದನ್ನು ಖಂಡಿಸಿ ಪ್ರತಿಭಟನೆ ಮಾಡೋದು ತಪ್ಪಲ್ಲ, ಆದ್ರೆ ಇವರು ಮಾಡೋ ಪ್ರತಿಭಟನೆ Pro LTTE ಆಗಿರುತ್ತೆ.

ಈ ಯಪ್ಪ ವೈಕೋ ಏನ್ ಹೇಳಿದಾನೆ ನೋಡಿ. ಜೊತೆಗೆ ಕೇಂದ್ರ ಸರ್ಕಾರ ಹಾಗು ಭಾರತೀಯ ರಕ್ಷಣಾ ಇಲಾಖೆಯವರು ಸೋನಿಯಾ ಗಾಂಧೀ ಜೀವಕ್ಕೆ LTTE ಯಿಂದ ಅಪಾಯವಿದೆ, ಹಾಗಾಗಿ ಆಕೆಗೆ ಭದ್ರತೆ ಹೆಚ್ಚಿಸಲಾಗಿದೆ. ಇದರ ನಡುವೆ ಈ ವೈಕೋ ಓಪನ್ ಆಗಿ LTTE ಗೆ ಸಪೋರ್ಟು ಕೊಡ್ತಾ ಇದಾನಲ್ಲ. ಇಂಥವರನ್ನೇ ಅಲ್ವೇ "ಬಗಲ್ ಕಾ ದುಶ್ಮನ್" ಅನ್ನೋದು ?

ಇನ್ನೂ ಈ ದೇಶ ಏನ್ ಏನ್ ನೋಡಬೇಕೋ, ನೋಡುತ್ತೋ ಗೊತ್ತಿಲ್ಲ !!
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Sunday, April 5, 2009

ಟಾಯ್ಲೆಟ್ಟಲ್ಲಿ ಗಾಲ್ಫ್ !!

ನಿನ್ನೆ ಶನಿವಾರ (4 ಏಪ್ರಿಲ್) ನಾನು ಹಾಗು ನನ್ನ ಸಹೋದ್ಯೋಗಿಗಳು ಬರ್ಲಿನ್ ನಗರ ಪ್ರವಾಸಕ್ಕೆ ಹೋಗಿದ್ವಿ. ನಾವಿರುವ ಹ್ಯಾಂಬರ್ಗಿನಿಂದ ಸುಮಾರೊ 300 ಕಿ.ಮೀ ದೂರದಲ್ಲಿ ಇದೆ ಬರ್ಲಿನ್. ಜರ್ಮನಿಯ ರಾಜಧಾನಿ, ಒಳ್ಳೊಳ್ಳೇ ಬಿಲ್ಡಿಂಗುಗಳು, ಸುಮಾರು ದೇಶಗಳ ರಾಯಭಾರಿ ಕಛೇರಿಗಳು, ಸಂಸತ್ ಭವನ, ಮೃಗಾಲಯ ಇತ್ಯಾದಿ ಇತ್ಯಾದಿ, ನೋಡಲು ಬಹಳಷ್ಟು ಇದೆ.
ಪ್ರವಾಸದ ಫೋಟೋಗಳನ್ನು ಆರ್ಕುಟ್ಟಲ್ಲಿ (orkut) ಹಾಕ್ತೀನಿ, ಆದ್ರೆ ಇಂಟೆರೆಸ್ಟಿಂಗ್ ಸಂಗತಿಗಳನ್ನು ಮಾತ್ರ ಫೋಟೋ ಸಮೇತ ಬ್ಲಾಗಿನಲ್ಲಿ ಹಾಕೋದು.

ಬರ್ಲಿನ್ ನಗರ ಪ್ರವಾಸದ ಟಿಕೆಟ್ ತಗೊಂಡು ಸುಮಾರು 10:30 ಗೆ ಮೊದಲ ಸ್ಟಾಪಿನಲ್ಲಿ ಇಳಿದೆವು. ಸ್ವಲ್ಪ ಅಕ್ಕ ಪಕ್ಕ ನೋಡಿ, ಚುರುಗುಡುತ್ತಿದ್ದ ಹೊಟ್ಟೆಗೆ ಸ್ವಲ್ಪ ಹಾಕಿಕೊಂಡು, ಫೋಟೋ ತೆಕ್ಕೊಂಡು ಇದ್ದಾಗ ಮತ್ತೆ ಕಾಡಿದ್ದು "ಜಲಬಾಧೆ".
ಪುಣ್ಯಕ್ಕೆ ಪಕ್ಕದಲ್ಲೇ WC (Water Closet, ಟಾಯ್ಲೆಟ್ಟಿಗೆ ಇನ್ನೊಂದು ಹೆಸರು) ಬೋರ್ಡು ಕಂಡಿತು. ಉಪಯೋಗಿಸಬೇಕಾದರೆ €0.50 (50 Euro Cents) ಕೊಡಬೇಕು. ಇಲ್ಲಿ ಕೂಡಾ ಟಾಯ್ಲೆಟ್ಟಿನ ಯಾವುದದ್ರೂ ಒಂದು ಫೋಟೋ ಸಿಗಬಹುದೇ ಎಂದು ಆಶಾಭಾವನೆಯಿಂದ ಹೋದೆ, ನನಗೆ ನಿರಾಸೆ ಆಗಲಿಲ್ಲ. ಬಹಳ ಖುಷಿಯಿಂದ ಜಲಬಾಧೆ ತೀರಿಸಿ ಫೋಟೋ ತೆಕ್ಕೊಂಡೆ.

ಇದಕ್ಕೆ ಮುಂಚೆ ಟಾಯ್ಲೆಟ್ಟಲ್ಲಿ ನೊಣ, ಹುಳುವಿನ ಚಿತ್ರ ಹಾಕಿರುವ ಬಗ್ಗೆ ಹೇಳಿದ್ದೆ ಹಾಗು ಅದರ ಫೋಟೋ ಹಾಕಿದ್ದೆ. ಇದೇ ರೀತಿ ಬರ್ಲಿನ್ನಿನ ಈ ಟಾಯ್ಲೆಟ್ಟಲ್ಲಿ ಗಾಲ್ಫ್ ಆಟದ ರಂಧ್ರ ಹಾಗು ಅದರಲ್ಲಿ ನಿಲ್ಲಿಸಿರುವ ಬಾವುಟದ ಚಿತ್ರ ಪ್ರಿಂಟ್ ಮಾಡಿದಾರೆ. ಇದೂ ಅದೇ, ಸರಿಯಾಗಿ ಈ ಜಾಗಕ್ಕೆ ಗುರಿ ಇಟ್ಟರೆ ಹೊರಗೆ ಹಾರೋದಿಲ್ಲ / ಸಿಡಿಯೋದಿಲ್ಲ. ನೀವೇ ನೋಡಿ.




ಈ ಸಲದ ಟಾಯ್ಲೆಟ್ ಫೋಟೋ ನಂಗೆ ಸ್ವಲ್ಪ ಸ್ಪೆಷಲ್. ಪ್ರತಿ ಬಾರಿ ನನ್ನ ಮೊಬೈಲ್ ಕ್ಯಾಮೆರಾದಲ್ಲಿ ಟಾಯ್ಲೆಟ್ಟಿನ ಫೋಟೋ ಹಿಡೀತಿದ್ದೆ ಹಾಗು ಬೆಳಕು ಸರಿ ಇರದ ಕಾರಣ ಅಷ್ಟೊಂದು ಕ್ಲಾರಿಟಿ ಇರ್ತಾ ಇರಲಿಲ್ಲ. ಈ ಸಲ ನನ್ನ CANON EOS 1000D, ಡಿಜಿಟಲ್ SLR ಕ್ಯಾಮೆರಾದಲ್ಲಿ ತೆಗೆದಿರುವೆ. ಸ್ಪೆಷಲ್ ಅಲ್ವಾ?
----------------------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Friday, April 3, 2009

ಆಟೋ ಅಣಿಮುತ್ತುಗಳು - ೫೮ - ಗೊವಿಂದಾ ಗೋವಿಂದಾ

ಲಕ್ಷ್ಮಕ್ಕ ಕಳಿಸಿದ ಫೋಟೋಗಳು ಇವು.
ಬಹಳಾ ದಿನಗಳ ಹಿಂದೆ ಕಳ್ಸಿದ್ದು, ಆದ್ರೆ ಸ್ವಲ್ಪ ಬ್ಯುಸಿ ಆಗಿದ್ದೆ, ಆದ್ರಿಂದ ಬ್ಲಾಗಿನಲ್ಲಿ ಯಾವ ಹೊಸಾ ಪೋಸ್ಟ್ ಮಾಡಿರ್ಲಿಲ್ಲಾ.
ಛಾಯಾಪುತ್ರ ಇದಾನೆ ಅಂತಾ ಈ ಅಣ್ಣ ಗೋವಿಂದಾ ಗೋವಿಂದ ಅಂತಾ ಇರೊದಾ??

----------------------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Thursday, March 19, 2009

ಟಾಯ್ಲೆಟ್ಟಲ್ಲಿ ಸಾಸರ್ !!

ನಿನ್ನೆ (18th March 2009) ನಮ್ಮ ಕಂಪೆನಿಯ ಒಂದು Get-Together ಪಾರ್ಟಿ ಇತ್ತು ಅಂತಾ ಹ್ಯಾಂಬರ್ಗ್
ನಗರದ ಬಂದರು (Port) ಆಗಿರುವ Landungsbrucken ಅನ್ನೋ ಜಾಗಕ್ಕೆ ಹೋಗಿದ್ದೆ.
ಪಾರ್ಟಿ ಇದ್ದದ್ದು ಒಂದು De-Commissionned (Retired) Freighter ಹಡಗಿನಲ್ಲಿ.
ಹಡಗಿನ ಹೆಸರು CAP - SAN DIEGO. 1960ನೆ ಇಸವಿಯ ಆಸುಪಾಸಿನ ಸರಕು ಸಾಗಾಣಿಕೆಯ ಹಡಗು ಇದು. ಇವಾಗ ಪ್ರವಾಸಿ ಆಕರ್ಷಣೆಯಾಗಿದೆ.

ಬೈಕೋಬೇಡಿ, ಇದರ ಬಗ್ಗೆ ಪಿಟೀಲು ಕುಯ್ದು ಬೋರ್ ಮಾಡೋದಿಲ್ಲ. ಪಾರ್ಟಿ ನಡೆಯುವಾಗ ಜಲಬಾಧೆ ತೀರಿಸಲು ಟಾಯ್ಲೆಟ್ಟಿಗೆ ಹೋದೆ. ಇಲ್ಲಿ ಮತ್ತೊಂದು ಡಿಜೈನಿನದ್ದು ಕಂಡಿತು. ಮಧ್ಯಭಾಗದಲ್ಲಿ ಸಾಸರಿನ (SAUCER) ಥರ ಇದೆ. ಜೊತೆಗೆ ಇದರ ಗೋಡೆಯ ಮೇಲೂ ಕೂಡಾ ಒಂದು ಹುಳುವಿನ ಚಿತ್ರ ಪ್ರಿಂಟ್ ಮಾಡಿದಾರೆ. ಆದ್ರೆ ಅದು ಈ ಚಿತ್ರದಲ್ಲಿ ಅಷ್ಟೊಂದು ಕ್ಲಿಯರ್ ಆಗಿ ಕಾಣೋದಿಲ್ಲ (ಲೈಟಿಂಗ್ ಕಮ್ಮಿ ಇತ್ತು ಕಣ್ರೀ ಅಲ್ಲಿ).

ನೋಡಿ...


ಇನ್ನೂ ಅದೆಷ್ಟು ಡಿಜೈನ್ ಡಿಜೈನ್ ಟಾಯ್ಲೆಟ್ಟನ್ನು ಉಪಯೋಗಿಸುತ್ತೀನೋ, ನಿಮಗೆ ಅದರ ದರ್ಶನ ಮಾಡುಸ್ತೀನೋ ಗೊತ್ತಿಲ್ಲ.
------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Tuesday, March 17, 2009

ಆಟೋ ಅಣಿಮುತ್ತುಗಳು - ೫೭ - ಹಾರ್ಟಿದೆ

ಬಹಳಾ ದಿನಗಳಾದ ಮೇಲೆ ಇವತ್ತು ಮತ್ತೊಂದು ಆಟೋ ಅಣಿಮುತ್ತು ಹಾಕ್ತಾ ಇದ್ದೀನಿ.
ಇದನ್ನು ಕಳ್ಸಿದ್ದು ಮಿತ್ರ ಹೇಮಂತ.
ಹೀಗೆ ಬಹಳಷ್ಟು ಮಂದಿ, ನಂಗೆ "ಶಂಕ್ರ, ಈ ಆಟೋ ಫೋಟೋ ತೆಗ್ದಿದೀನಿ, ಬ್ಲಾಗಿನಲ್ಲಿ ಹಾಕು" ಅಂತಾ ಕಳುಸ್ತಾರೆ.
ನಿಮ್ಮೆಲರ ಅಭಿಮಾನಕ್ಕೆ ಬಹಳಾ ಥ್ಯಾಂಕ್ಸ್.

ಇದನ್ನ ನೋಡಿ, ಈ ಅಣ್ಣ ಹೇಳಿರೋದು "ಆಟೋದವರಿಗೂ ಹಾರ್ಟಿದೆ, ಪ್ರೀತ್ಸೆ"
ಯಾಕೆ ಈ ಥರ ಬರೆಸಿದ್ದಾನೆ ಈತ ?

------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Wednesday, March 11, 2009

ಕನ್ನಡಪ್ರಭ ಓದಿ ಅಂದವಾದ ಅಂಧ !!

ಇವತ್ತಿನ ಕನ್ನಡಪ್ರಭ ಆನಲೈನ್ ಆವೃತ್ತಿಯಲ್ಲಿ ಕಂಡಿದ್ದು.
ಕನ್ನಡಪ್ರಭ ಕೂಡಾ ಈ ರೀತಿಯಾದ ತಪ್ಪು ಮಾಡ್ತಾರ ಅಂತ ಆಶ್ಚರ್ಯ ಆಯ್ತು.
ಅಂದ ಹಾಗು ಅಂಧ ಗೂ ವ್ಯತ್ಯಾಸ ಗೊತ್ತಿಲ್ವಾ ಇವ್ರಿಗೆ ?


------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Friday, March 6, 2009

ನನ್ನ ಪುನರ್ಜನ್ಮ ಹಾಗು ಪೂರ್ವಜನ್ಮ ಸ್ಮರಣೆ

ಶಂಕ್ರಂಗೆ ಇದೇನಾಯ್ತಪ್ಪಾ ? ಸುಮ್ನೆ ಆಟೋ, ಟಾಯ್ಲೆಟ್ಟು ಫೋಟೋ ತೆಕ್ಕೊಂಡು ಇದ್ದೋನು ಸಡನ್ನಾಗಿ ಮರುಜನ್ಮ, ಪೂರ್ವಜನ್ಮ ಸ್ಮರಣೆ ಅಂತಾ ಏನೇನೋ ಮಾತಾಡ್ತಾ ಇದಾನಲ್ಲ ಅನ್ಕೊತಾ ಇದ್ದೀರಾ?

ಹಂಗಲ್ಲಾ ಕಣ್ರೀ ಕಟ್ಟೆ ಮಿತ್ರರೇ, ಅವತ್ತೊಂದು ಭಾನುವಾರ, (ಸುಮಾರು ಮೂರು ವಾರಗಳ ಹಿಂದೆ) ಹೊರಗೆ ಸಖತ್ ಸ್ನೋಫಾಲ್ ಜೊತೆಗೆ ಮಳೆ. ಹಾಗಾಗಿ ಎಲ್ಲೂ ಹೋಗದೆ ಮನೇಲಿ ಕೂತಿದ್ದೆ. ಅವಾಗ ಬಂದ ಯೋಚನೆ ಇದು.
ಸ್ವಲ್ಪ ದೊಡ್ಡದಿದೆ ಈ ಬರಹ, ದಯವಿಟ್ಟು ಹೊಟ್ಟೆಗಾಕ್ಕೊಬೇಕು ಬಾಂಧವರು

ಇಲ್ಲಿ ಜರ್ಮನಿಯಲ್ಲಿ ಇರುವ ಸವಲತ್ತುಗಳು, ಒಂದು ಜೀವಕ್ಕಿರುವ ಮರ್ಯಾದೆ / ಬೆಲೆ ಕಂಡು, ಮುಂದಿನ ಜನ್ಮ ಅಂತ ಏನಾದರೂ ಇದ್ದಲ್ಲಿ, ಈ ದೇಶದಲ್ಲೇ ಹುಟ್ಟಬಯಸ್ತೀನಿ, ಅಂತ ಹೇಳಿದ್ದು.
ಯಪ್ಪೋ.. ತಡೀರಿ ಸ್ವಲ್ಪ..ಏನು ಈ ನನ್ ಮಗಾ ಈ ಥರ ಹೇಳ್ತಾನಲ್ಲ ಅಂತಾ ಉಗ್ಯೋಕ್ಕೆ ಮುಂಚೆ ಸ್ವಲ್ಪ ಓದಿ.
ನಾನು ಈ ದೇಶದಲ್ಲಿ ಮುಂದಿನ ಜನ್ಮದಲ್ಲಿ ಹುಟ್ಟಬಯಸ್ತೀನಿ ಅಂತ ಹೇಳಿದ್ನಲ್ಲ, ಆ ಫ್ಯಾಂಟಸಿಯನ್ನು ಯಾವ ರೀತಿಯಲ್ಲಿ ಮುಂದಕ್ಕೆ ತಗೊಂಡು ಹೋದೆ ಅನ್ನೋದನ್ನ ಕೇಳಿ. ನನ್ನ ಮುಂದಿನ ಜನ್ಮ ಹೇಗಿರಬೇಕು ಅನ್ನೋದನ್ನ ನಾವೇ ಸೆಲೆಕ್ಟ್ ಮಾಡೋ ಹಾಗಿದ್ರೆ, ಯಾವ ರೀತಿ ಮಾಡ್ತಾ ಇದ್ದೆ ಅಂತ.

ಮೊದಲನೆಯದಾಗಿ ಇಲ್ಲಿ (ಜರ್ಮನಿಯಲ್ಲಿ) ಒಂದು ಒಳ್ಳೆ ವಿದ್ಯಾವಂತ ಫ್ಯಾಮಿಲಿಯಲ್ಲಿ ಹುಟ್ಟಬಯಸ್ತೀನಿ. ತಕ್ಕ ಮಟ್ಟಿಗೆ ಬುದ್ಧಿ ಬಂದ ಮೇಲೆ, ನನಗೆ ಪೂರ್ವಜನ್ಮದ ಸ್ಮರಣೆ ಬರಬೇಕು. ಫಿಲಂ ನಲ್ಲಿ ತೋರಿಸೋ ಹಾಗೆ ನೆಗೆಟಿವ್ ಇಮೇಜ್ ಅಲ್ಲಾ, ಫ್ರೇಂ ಟು ಫ್ರೇಂ ಜ್ಞಾಪಕ ಬರಬೇಕು. ನಾನು ಹಿಂದಿನ ಜನ್ಮದಲ್ಲಿ "ಮಂದಗೆರೆ ಶಂಕರ ಪ್ರಸಾದ" ಆಗಿದ್ದೆ. ಹುಟ್ಟಿದ್ದು ಮೈಸೂರು, ಮಾತೃಭಾಷೆ ಕನ್ನಡ.

ಶಂಕರನ ಬದುಕು ಜ್ಞಾಪಕ ಬರ್ತಾ ಇದ್ದ ಹಾಗೆ ನ್ಯಾಚುರಲಿ ಅವನ ಹಾಗೆ ಕನ್ನಡದ ಬಗ್ಗೆ ಒಲವು ಬಂದೆ ಬರುತ್ತೆ. ಹಾಗಾಗಿ ಎಲ್ಲೂ ಕನ್ನಡ ಕಲಿಯುವುದು ಬೇಕಿಲ್ಲ. ಆಟೋಮ್ಯಾಟಿಕ್ ಆಗಿ ಅದೂ ಕೂಡ ಬಂದಿರುತ್ತೆ. To The Core ಅಂತಾರಲ್ಲ ಹಾಗೆ. ಅದೇ, ಓದಲು, ಬರೆಯಲು ಚೆನ್ನಾಗಿ ಬರುತ್ತೆ. ಹಾಗೆಯೇ ನಮ್ಮ ಮೈಸೂರಿನ ಭಾಷೆ ನಿರರ್ಗಳವಾಗಿ ಬಂದಿರುತ್ತೆ. ಇಷ್ಟೆಲ್ಲಾ ಜ್ಞಾಪಕ ಬಂದ ಮೇಲೆ ನ್ಯಾಚುರಲಿ, ಸೋಮಾರಿ ಕಟ್ಟೆ ಬ್ಲಾಗಿನ Username ಮತ್ತು Password (Last saved) ಕೂಡ ಜ್ಞಾಪಕ ಬಂದೆ ಬರುತ್ತೆ ಅಲ್ವ?

ಹೀಗಾದ ಮೇಲೆ "ಶಂಕರ ಸತ್ತ ನಂತರ ನಿಂತಿದ್ದ ಸೋಮಾರಿ ಕಟ್ಟೆಯನ್ನ ಮತ್ತೆ ಮುಂದುವರಿಸ್ತೀನಿ" ಇಷ್ಟೆಲ್ಲಾ ಹೇಳಿದ ಮೇಲೆ, ವಯಸ್ಸಿನ ಬಗ್ಗೆ ಕೂಡಾ ಸ್ವಲ್ಪ ಹೇಳೋಣಾ. ಈಗಿರುವ ಶಂಕರ ಸುಮಾರು 70 ವರ್ಷ ಬದ್ಕಿರ್ತಾನೆ ಅನ್ಕೊಳೋಣ. ನನಗೀಗ 29 ವರ್ಷ. ಸೊ, 70ನೇ ವಯಸ್ಸಿಗೆ ಗೊಟಕ್ ಅಂದು, ಮತ್ತೆ ಜನ್ಮ ತಾಳಿ, ಆತ 24 ವರ್ಷದವನಗಿದ್ದಾನೆ ಅಂದುಕೊಂಡು ನಾನು ಯೋಚನೆ ಮಾಡಿದ ಕಥೆ / ಫ್ಯಾಂಟಸಿ ಇದು. ಅವಾಗ ಸರಿ ಸುಮಾರು 2083ನೆ ಇಸವಿ. ಜರ್ಮನಿಯಲ್ಲಿ ಹುಟ್ಟಿದ್ದರಿಂದ ನ್ಯಾಚುರಲಿ, ಬಿಳಿಯನಾಗಿ ಇರ್ತೀನಿ, ಜರ್ಮನ್ ಕೂಡ ಬರುತ್ತೆ. ಜೊತೆಗೆ ಪೂರ್ವಜನ್ಮದ ಸ್ಮರಣೆಯಿಂದ ಕನ್ನಡ ಕೂಡ ಸಖತ್ತಾಗಿ ಬರುತ್ತೆ. ಶಂಕರ ಮಾತಾಡ್ತಿದ್ದ ಹಾಗೆ ಅಪ್ಪಟ ಮೈಸೂರಿನ ಕನ್ನಡ (ಬಡ್ಡೆತ್ತದ್ದೆ, ಮುಂಡೇವಾ, ಐಕ್ಳು, ನಿನ್ನಜ್ಜಿ, ಸಿಸ್ಯಾ ಇತ್ಯಾದಿ). ಇಷ್ಟೆಲ್ಲಾ ಇದ್ದ ಮೇಲೆ, ನನ್ನ 24 ನೆ ವಯಸ್ಸಿಗೆ (ಮರುಜನ್ಮದ ಹೊಸ ಶಂಕರ) ಮೈಸೂರಿಗೆ ಒಮ್ಮೆ ಹೋಗುವ ಬಯಕೆ ಹುಟ್ಟುತ್ತೆ. ಹಾಗಾಗಿ, ಜರ್ಮನಿಯಿಂದ ಹೊರಟು ಮೊದಲು ಬೆಂಗಳೂರಿಗೆ ಬಂದಿಳಿಯುತ್ತಾನೆ, ಬಿಳಿ ಶಂಕ್ರ.

ಅಪ್ಪಟ ಬಿಳಿಯ, ಬೆಂಗಳೂರಿಗೆ ಮೊದಲು ಬಂದಿಳಿದು, ಏರ್ಪೋರ್ಟಿನಿಂದ ಹೊರಗೆ ಬರುತ್ತಿದ್ದ ಹಾಗೆ, ಒಬ್ಬನೇ ಬರ್ತಾ ಇದ್ದವನ್ನು ಕಂಡು ಟ್ಯಾಕ್ಸಿಯವರು ಮುತ್ತಿಕೊಳ್ತಾರೆ (ಜ್ಞಾಪಕ ಇರ್ಲಿ, ಬಂದಿಳಿದ ಬಿಳಿಯ ನೋಡಲು ಮಾತ್ರ ಫಾರಿನರ್ ಅಷ್ಟೆ...ಮಾತಡೋದು ಅಪ್ಪಟ ಕನ್ನಡ, ಯಾಕೆಂದ್ರೆ ಅವ್ನು ಶಂಕ್ರನ ಮರುಜನ್ಮ).

ನಾನು ಸ್ವಲ್ಪ ಮಜಾ ತಗೊಳಕ್ಕೆ "I want to go to Mysore..how much will it cost?" ಅಂತಾ ಕೇಳ್ತೀನಿ. ಈಗ ಅಂದ್ರೆ 2009ರಲ್ಲಿ, ದೇವನಹಳ್ಳಿಯಿಂದ ಟ್ಯಾಕ್ಸಿ ಮಾಡಿಕೊಂಡು ಮೈಸೂರಿಗೆ ಹೋದ್ರೆ, ಸುಮಾರು ರೂ 2000 ಆಗುತ್ತೆ. 2083ರಲ್ಲಿ ಸುಮಾರು 20,000ರೂ ಆಗಬಹುದು. 20,000 ಅನ್ಕೊಂಡಿರೋದು ಒಂದು Imaginary amount ಅಷ್ಟೇ. ಯಾರಿಗ್ಗೊತ್ತು, ಆ ಟೈಮಿಗೆ ನಮ್ಮ ರುಪಾಯಿಯ ಬೆಲೆ ಪೌಂಡ್, ಯೂರೋ, ಡಾಲರುಗಳಿಗಿಂತಾ ಜಾಸ್ತಿ ಆಗಿರಬಹುದಲ್ವಾ?

ಅವಾಗ ಒಬ್ಬ ಟ್ಯಾಕ್ಸಿಯವನು "Hello... you come from America? Mysore taxi is 40,000 Rs" ಅಂತಾನೆ. ಸಡನ್ನಾಗಿ ನಾನು ಮೈಸೂರು ಕನ್ನಡದಲ್ಲಿ "40,000 ನಾ? ಯಾಕೆ...ಜೊತೆಗೆ ನಾನ್ ಕೂಡಾ ಬಂದ್ಬಿಡ್ತೀನಿ" ಅಂದಾಗ, ಇದನ್ನ ಕೇಳಿದ ಟ್ಯಾಕ್ಸಿಯವನ ಮುಖ ಹೆಂಗಾಗಿರತ್ತೆ !!!??? ಆ ಸೀನನ್ನು ಎಂಜಾಯ್ ಮಾಡ್ಕೊಂಡು, ಅವರ ಹ್ಯಾಪ್ ಮೊರೆಯನ್ನು ನೆನೆಸಿಕೊಳ್ಳುತ್ತಾ, ಹೆಂಗೋ ಒಂದು ಟ್ಯಾಕ್ಸಿ ಬುಕ್ ಮಾಡಿಕೊಂಡು ಮೈಸೂರಿಗೆ ಬರ್ತೀನಿ. ಯಾರ ಮನೆಗೆ ಹೋಗೋದು?
2083 ಅಂದ್ರೆ, ಶಂಕರ ಟಿಕೆಟ್ ತಗೊಂಡೇ 24 ವರ್ಷ ಆಗಿದೆ. ಅದಕ್ಕೆ ಅಲ್ಲೇ ಸದರ್ನ್ ಸ್ಟಾರ್ ಹೋಟೆಲಲ್ಲಿ ರೂಮು ಬುಕ್ ಮಾಡಿಕೊಂಡೆ. ಅಲ್ಲಿ ಕೂಡ ರಿಸೆಪ್ಶನ್ ನಲ್ಲಿ "ಏನ್ ಸಾರ್? ಆರಾಮಾಗಿದೀರಾ" ಅಂತ ಕೇಳಿ ತಬ್ಬಿಬ್ಬು ಮಾಡಿದೆ.

ಮಾರನೆಯ ದಿನ ಹೋಟೆಲ್ಲಿನ ಹೊರಗೆ ಒಂದು ಆಟೋ ಹಿಡಿದು "ಕುವೆಂಪುನಗರ" ಅಂತ ಇಂಗ್ಲಿಶ್ ನಲ್ಲಿ ಹೇಳಿದೆ. ಹೊರಟ ಆಟೋ ರಾಜ. ಹಾಗೆ, ಸದರ್ನ್ ಸ್ಟಾರಿನಿಂದ ಮೆಟ್ರೋಪೋಲ್ ಸರ್ಕಲ್ ಕಡೆ ಬಂದು, ಬಲಕ್ಕೆ ತಿರುಗಿ, ಮಹಾರಾಣಿ ಕಾಲೇಜಿನ ಮುಂದೆ ಬಂದಾಗ, ಆಟೋ ರಾಜ "First time in Mysore?" ಅಂತಾ ಕೇಳಿದ.
ಅದಕ್ಕೆ ನಾನು "yes" ಅಂತಾ ಹೇಳಿದ್ದನ್ನು ಕೇಳಿ ಮನಸ್ಸಲ್ಲೇ ಸ್ಕೆಚ್ ಹಾಕ್ಕೊಂಡ ಅನ್ಸುತ್ತೆ.ಸರಿ, ಮಹಾರಾಣಿ ಕಾಲೇಜಿನ ಮುಂದೆ ಪಾಸ್ ಆಗಿ, ಹಾಗೆ ಮುಂದಕ್ಕೆ JLB ರಸ್ತೆಯಲ್ಲಿ ಸಾಗುತ್ತಾ, ರೋಟರಿ ಶಾಲೆಯ ಮುಂದೆ ಎಡಕ್ಕೆ ತಿರುಗಿಸಿ, ನಾರಾಯಣಶಾಸ್ತ್ರಿ ರಸ್ತೆಗೆ ಸೇರಿದ. ಕುವೆಂಪುನಗರಕ್ಕೆ ಹೋಗು ಅಂದ್ರೆ ಈ ರಾಜ ಸುಮ್ನೆ ಸಖತ್ತಾಗಿ ಸುತ್ತಾಡುಸ್ತಾ ಇದಾನೆ ಅಂತಾ ಗೊತ್ತಾದ್ರೂ ಕೂಡ ಸುಮ್ನೆ ಕೂತಿದ್ದೆ. ನಾರಾಯಣಶಾಸ್ತ್ರಿ ರಸ್ತೆಯಲ್ಲಿ ಸದ್ವಿದ್ಯಾ ಸ್ಕೂಲಿನ ಮುಂದೆ ಬಂದು, ಹಾಗೆ ಸೀದಾ ಹೊರಟು, ಶಾಂತಲಾ ಟಾಕೀಸಿನ ಮುಂದೆ ಸಿಗ್ನಲ್ ಕ್ಲಿಯರ್ ಮಾಡಿ ಸಿದ್ದಪ್ಪ ಸ್ಕ್ವೇರ್ ಕಡೆ ನಡೆದ.

ಮಜಾ ತಗೊಳಕ್ಕೆ ಇದೆ ಸಕಾಲ ಅಂತಾ ಯೋಚನೆ ಮಾಡಿ "Hey.. hey..you want to take more money from me? Hotel people told, Kuvempunagar is not far" ಅಂತಾ ವರಾತ ತೆಗ್ದೆ.ಅದಕ್ಕೆ ಆತ "No sir, this is correct. kuvempunagar just 5 minutes". ನಾನು "Stop, i will tell to police" ಅದಕ್ಕೆ ಅವನು ಸಿಟ್ಟಾಗಿ, ರಸ್ತೆಯ ಬದಿ ಆಟೋ ನಿಲ್ಸಿ "No Police.. you give money..Ok?" ಅಂದ.

ಸಡನ್ನಾಗಿ ನಾನು "ಆಯ್ತು ಕಂಡಿದೀನಿ ಮುಚ್ಚಲೇ ಮಗನೆ... ಅವಗ್ಲಿಂದಾ ನೋಡ್ತಾ ಇದ್ದೀನಿ, ಇಡೀ ಮೈಸೂರ್ ತೋರುಸ್ತಾ ಇದ್ದೀಯ ನಿನ್ನಜ್ಜಿನಾ ಬಡಿಯ. ಏನು ಯಾಂದಳ್ಳಿ ಥರ ಕಾಣ್ತೀನಾ ನಾನು? ಮುಚ್ಕಂಡ್ ಬಲ್ಲಾಳ್ ಸರ್ಕಲ್ ಗೆ ನಡಿ ಮಗನೆ. ಕಂಪ್ಲೇಂಟ್ ಕೊಡ್ತೀನಿ ಹುಷಾರು"ಅಂತಾ ಬೈದಾಗ ಅವನಿಗೆ ಹಾರ್ಟ್ ಅಟ್ಯಾಕ್ ಆಗೋದೊಂದು ಬಾಕಿ.

ಬಲ್ಲಾಳ್ ಸರ್ಕಲ್ಲಿಗೆ ಬಂದು ಹಂಗೆ ಕಣ್ಣಾಡಿಸಿದೆ. ಈಗ ಇರೋ ಹಾಗೆಯೇ ಪಾರ್ಕಿನ ಮುಂದೆ ಹಾಗು ಲಕ್ಷ್ಮಿಪುರಂ ಸ್ಕೂಲಿನ ಕಾಂಪೋಂಡ್ ಮುಂದೆ ೨ ಚುರುಮುರಿ ಗಾಡಿ. ಹಾಗೆ ಅಲ್ಲಿಗೆ ನಡ್ಕೊಂಡು ಹೋಗಿ, ಚುರುಮುರಿ ಗಾಡಿ ಪಕ್ಕ ನಿಂತೆ. ಗಾಡಿಯವನು ಹಾಗು ಅಲ್ಲಿ ತಿನ್ನುತ್ತಾ ನಿಂತಿದ್ದ ಶಾರದಾ ವಿಲಾಸ್ ಕಾಲೇಜಿನ ಹುಡುಗರಿಗೂ, SDM ಹುಡುಗಿಯರಿಗೂ ಒಬ್ಬ ಬಿಳಿಯ ಫಾರಿನರ್ ಚುರುಮುರಿ ಗಾಡಿಗೆ ಬಂದಿದಾನೆ ಅಂತಾ ಆಶ್ಚರ್ಯ. ಈ ಬಿಳೀ ಜನ ಖಾರ ತಿನ್ನೋಲ್ಲ, ಅಂತದ್ರಲ್ಲಿ ಚುರುಮುರಿ ಹ್ಯಾಗೆ ತಿಂತಾನೆ ಇವನು ಅಂತ ಕುತೂಹಲದಿಂದ ನೋಡ್ತಾ ಇದಾರೆ.

ಅಷ್ಟರಲ್ಲಿ ಗಾಡಿಯವನು ಕೈನಲ್ಲಿ "What?" ಅಂತಾ ಕೇಳಿದ. ನಾನು ಸುಮ್ನೆ ಗಾಡಿಯಲ್ಲಿ ಏನಿದೆ ಅಂತಾ ನೋಡ್ತಾ ಇದ್ದಾಗ, ಪಕ್ಕದಲ್ಲಿ ನಿಂತಿದ್ದ ಶಾರದಾ ವಿಲಾಸಿನ ಪೋರನೊಬ್ಬ
"Hello, excuse me...This is called Churumuri. Very spicy. Do you want to eat this?" ಅಂತಾ ಕೇಳಿದ.

ಅದಕ್ಕೆ ನಾನು ಕನ್ನಡದಲ್ಲಿ "ಹೂ ಕಣ್ರೀ ತಿಂತೀನಿ..ಆದ್ರೆ ಯಾವ್ದು ಮೊದ್ಲು ತಿನ್ನೋದು ಅಂತಾ ಯೋಚನೆ ಮಾಡ್ತಾ ಇದ್ದೀನಿ. ಚುರುಮುರೀನೋ, ಸೌತೆಕಾಯೋ, ಟೊಮ್ಯಾಟೋ ಮಸಾಲೇನೋ, ನಿಪ್ಪಿಟ್ಟು ಮಸಾಲೇನೋ ಏನೂಂತಾ..."
ಈ ಥರ ಅಂದಾಗ ಇದನ್ನು ಕೇಳಿದವನು ತಾನು ಬಾಯಿಗೆ ಹಾಕ್ಕೊಂಡಿದ್ದ ಚುರುಮುರಿನಾ ಪ್ಹುರ್ರ್ರ್ ಅಂತಾ ಹೊರಗೆ ಗಾಬರಿಯಿಂದ ಉಗಿದು, ಅದು ಸ್ವಲ್ಪ ಜಾಸ್ತಿಯಾಗಿ ಮೂಗಿನಿಂದೆಲ್ಲಾ ಹೊರಗೆ ಬಂದು ಸುಮಾರು ಹೊತ್ತು ಖಾರಬ್ ಸ್ಥಿತಿಯಲ್ಲಿ ಇದ್ದ.

ಇದೆ ರೀತಿ ಸುಮಾರು 15-20 ಘಟನೆಗಳನ್ನು ಹೆಣೆದಿದ್ದೀನಿ. ಅದೂ ಬೇರೆ ಬೇರೆ ಊರಲ್ಲಿ.
ಹೋಟ್ಲಿಗೆ ಹೋಗಿ ಊಟ ಮಾಡುವಾಗ, ಬಿಟಿಎಸ್ ಬಸ್ಸಿನಲ್ಲಿ, ಮೆಜೆಸ್ಟಿಕ್ಕಲ್ಲಿ, ತರಕಾರಿ ಮಾರ್ಕೆಟ್ಟಲ್ಲಿ ಇತ್ಯಾದಿ ಇತ್ಯಾದಿ.
ಅದೆಲ್ಲಾ ಬಿಡಿ, ಜರ್ಮನಿಯಲ್ಲಿ ಇರುವ ಕನ್ನಡದವರ ಹತ್ರ ಹೋಗಿ "ಏನ್ ಮಗಾ.. ಹೆಂಗಿದೀಯ?" ಅಂತಾ ಕೇಳುದ್ರೆ ಹೆಂಗೆ?
------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Tuesday, March 3, 2009

ಟಾಯ್ಲೆಟ್ಟಲ್ಲಿ ಉಬ್ಬು ಡುಬ್ಬ

ಕಳೆದ ವೀಕೆಂಡು ನಮ್ಮ ಬಾಯ್ಸನ್ನು ಮೀಟ್ ಮಾಡಿ ಬರೋಣ ಅಂತಾ ಹ್ಯಾಮ್ಬರ್ಗಿನಿಂದ ಲಂಡನ್ನಿಗೆ ಹೋಗಿದ್ದೆ.
ಅಲ್ಲಿ ನಮ್ಮ ಹುಡುಗ ಶ್ರೀಕಾಂತ London School of Economics ನಲ್ಲಿ Post Graduation ಮಾಡ್ತಾ ಇದಾನೆ.
ನಾವು ನಾಲ್ಕು ಜನ ಸರಿಯಾಗಿ ಸುತ್ತಾಡಿ, ಮಜಾ ಮಾಡುದ್ವಿ. ಶನಿವಾರ ಸಂಜೆ ಶ್ರೀಕಾಂತ ಅವರ ಕಾಲೇಜಿಗೆ ಕರೆದುಕೊಂಡು ಹೋದ. ಹಾಗೆಯೆ ಅಲ್ಲಿಯ ಲೈಬ್ರರಿ ಸಖತ್ ಫೇಮಸ್ಸು. ಅಲ್ಲಿಗೂ ಹೋದ್ವಿ. ಸಖತ್ತಾಗಿದೆ, ನಮ್ಮ ಮೈಸೂರಿನ ಕುವೆಂಪುನಗರ ಪಬ್ಲಿಕ್ ಲೈಬ್ರರಿಗಿಂತಾ ದೊಡ್ಡದಿದೆ :-)

ಅಲ್ಲಿಯ ಬಗ್ಗೆ ಏನೂ ಹೇಳ್ತಾ ಇಲ್ಲ..ಸಡನ್ನಾಗಿ ಜಲಭಾದೆ ಶುರು ಆಯ್ತು. ತೀರಿಸೋಕ್ಕೆ ಅಲ್ಲಿಯ ಟಾಯ್ಲೆಟ್ಟಿಗೆ ಹೋದಾಗ ಕಂಡಿದ್ದು ಇದು. ಡುಬ್ಬ... ಇದಕ್ಕೂ ಮುಂಚೆ ಟಾಯ್ಲೆಟ್ಟಲ್ಲಿ ನೊಣ, ಜಾಲರಿ ನೋಡಿದ್ರಿ ಅಲ್ವಾ? ಹಾಗೆಯೇ ಇಲ್ಲಿ ಡುಬ್ಬ ಫಿಕ್ಸ್ ಮಾಡಿದಾರೆ. ಇದರ ಮೇಲೆ ಹುಯ್ದರೆ, ಹೊರಗೆ ಹಾರೋದಿಲ್ಲ. ಬರೀ ಹೇಳ್ತಾ ಇಲ್ಲಾ ಕಣ್ರೀ, ಸ್ವಾನುಭವದ ಮಾತುಗಳು.



------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Wednesday, February 25, 2009

ಸಾಫ್ಟ್ ವೇರ್ ಮನೆಗೆ ನುಗ್ಗಿ ದರೋಡೆ !!!

ಇವತ್ತಿನ (25th Feb 2009) ಸಂಜೆವಾಣಿಯ ಮುಖಪುಟದಲ್ಲಿ ಬಂದಿರುವ ಸುದ್ದಿ.

ಸಾಫ್ಟ್ ವೇರ್ ಕಂಪೆನಿಯ ಉದ್ಯೋಗಿ ಮನೆಗೆ ನುಗ್ಗಿ ಅನ್ನುವ ಬದಲು,
ಸಾಫ್ಟ್ ವೇರಿನ ಮನೆಗೆ ನುಗ್ಗಿ ದರೋಡೆಯಂತೆ !!
ಸಖತ್ ಅಶ್ಕರ್ಯ ಅಲ್ವಾ ?
------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ