ಇವತ್ತಿನ ಪೇಪರಿನಲ್ಲಿ ತಮಿಳುನಾಡಿನ ಎಂ.ಡಿ.ಎಂ.ಕೆ ನಾಯಕ ವೈಕೋ ಹೇಳಿರೋದನ್ನು ಓದಿದಾಗ ಮೈಮೇಲೆ ಚೇಳು ಹರಿದ ಹಾಗಾಯ್ತು. LTTE ಯನ್ನು ನಮ್ಮಲ್ಲಿ ಪ್ರತ್ಯೇಕತಾವಾದಿಗಳು ಹಾಗು Risk to the National Security ಅಂತಾ ಗುರುತಿಸಿದ್ದರೂ ಕೂಡಾ, ಈ ಥರದ ನಾಯಕರು, ಸೊ ಕಾಲ್ಡ್ ಭಾಷಾ ಹೋರಾಟಗಾರರು, ಇಂಥಾ ಸಂಘಟನೆಯನ್ನು ಬಹಿರಂಗವಾಗಿ ಬೆಂಬಲಿಸುವುದರ ಜೊತೆಗೆ ಆ ಗುಂಪಿನ ನಾಯಕ ವೆಲ್ಲುಪಿಳ್ಳೈ ಪ್ರಭಾಕರನ್ ಗೆ ಅಪಾಯವಾದಲ್ಲಿ, ತಮಿಳುನಾಡಿನಲ್ಲಿ ರಕ್ತಪಾತವಾಗುತ್ತದೆ ಎಂದು ಹೇಳಿಕೆ ಕೊಟ್ಟಿದ್ದು, ನಮ್ಮ ಇಂದಿನ ಅದಃಪತನಕ್ಕೆ ಬಿದ್ದಿರುವ ಪ್ರಜಾಪ್ರಭುತ್ವ ಹಾಗು ಹೊಲಸು ರಾಜಕಾರಣಕ್ಕೆ ಕನ್ನಡಿ ಹಿಡಿದಂತಿದೆ.
ಇಂಥವರನ್ನು ಅನುಸರಿಸಿ, ನಮ್ಮ ಬೆಂಗಳೂರಿನಲ್ಲಿ ಕೂಡಾ "ಶ್ರೀಲಂಕಾದಲ್ಲಿ ತಮಿಳರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ" ಪ್ರತಿಭಟನೆ ಮಾಡ್ತಾರೆ. ಮನುಷ್ಯರ ಮೇಲೆ ದೌರ್ಜನ್ಯ ನಡೆದಲ್ಲಿ ಅದನ್ನು ಖಂಡಿಸಿ ಪ್ರತಿಭಟನೆ ಮಾಡೋದು ತಪ್ಪಲ್ಲ, ಆದ್ರೆ ಇವರು ಮಾಡೋ ಪ್ರತಿಭಟನೆ Pro LTTE ಆಗಿರುತ್ತೆ.
ಈ ಯಪ್ಪ ವೈಕೋ ಏನ್ ಹೇಳಿದಾನೆ ನೋಡಿ. ಜೊತೆಗೆ ಕೇಂದ್ರ ಸರ್ಕಾರ ಹಾಗು ಭಾರತೀಯ ರಕ್ಷಣಾ ಇಲಾಖೆಯವರು ಸೋನಿಯಾ ಗಾಂಧೀ ಜೀವಕ್ಕೆ LTTE ಯಿಂದ ಅಪಾಯವಿದೆ, ಹಾಗಾಗಿ ಆಕೆಗೆ ಭದ್ರತೆ ಹೆಚ್ಚಿಸಲಾಗಿದೆ. ಇದರ ನಡುವೆ ಈ ವೈಕೋ ಓಪನ್ ಆಗಿ LTTE ಗೆ ಸಪೋರ್ಟು ಕೊಡ್ತಾ ಇದಾನಲ್ಲ. ಇಂಥವರನ್ನೇ ಅಲ್ವೇ "ಬಗಲ್ ಕಾ ದುಶ್ಮನ್" ಅನ್ನೋದು ?
ಇನ್ನೂ ಈ ದೇಶ ಏನ್ ಏನ್ ನೋಡಬೇಕೋ, ನೋಡುತ್ತೋ ಗೊತ್ತಿಲ್ಲ !!
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
Showing posts with label ವೆಲ್ಲುಪಿಳ್ಳೈ ಪ್ರಭಾಕರನ್. Show all posts
Showing posts with label ವೆಲ್ಲುಪಿಳ್ಳೈ ಪ್ರಭಾಕರನ್. Show all posts
Thursday, April 9, 2009
Subscribe to:
Posts (Atom)