Wednesday, January 28, 2009

ಉಟ್ಟು ಓರಾಟಗಾರರು ಇವರು

ಮಂಗಳೂರಲ್ಲಿ ನಡೆದ ಪಬ್ ಮೇಲಿನ ದಾಳಿಯನ್ನು ಖಂಡಿಸಿ ಬೆಂಗಳೂರಲ್ಲಿ ಇಂದು ನಡೆದ ಪ್ರತಿಭಟನೆಯ ಚಿತ್ರ ಇದು. ಇದು ಪ್ರಕತವಾಗಿರೋದು ಇಂದಿನ ಸಂಜೆವಾಣಿ ಪತ್ರಿಕೆಯಲ್ಲಿ.
ಈ ಪ್ರತಿಭಟನೆಯನ್ನು ನಡೆಸಿದವರು ಬೆಂಗಳೂರು ಯುವ ಕಾಂಗ್ರೆಸ್ ಸದಸ್ಯರು.
ಈ ಚಿತ್ರದಲ್ಲಿ ಪೋಸ್ಟರ್ ಮೇಲೆ ಏನು ಬರೆದಿದೆ ಅಂತಾ ಒಮ್ಮೆ ಓದಿ.
"ಶಾಂತಿಗೆ ಹೆಸರಾದ ಕರ್ನಾಟಕ ರಾಜ್ಯದಲ್ಲಿ
ಅಶಾಂತಿಯ ಕಿಚ್ಚನ್ನು ಬಿ.ಜೆ.ಪಿ ನಾಯಕರು ಅಚ್ಚುತ್ತಿದ್ದಾರೆ"















ಹಚ್ಚುತ್ತಿದ್ದಾರೆ ಅನ್ನೋದನ್ನ ಅಚ್ಚುತ್ತಿದ್ದಾರೆ ಅಂತಾ ಬರೆಸಿದ್ದಾರಲ್ಲ,
ಇವರು ನಮ್ಮ ಕನ್ನಡ ತಾಯಿಯ ಎಮ್ಮೆಯ ಮಕ್ಕಳು ಮತ್ತು ಉಟ್ಟು ಓರಾಟಗಾರರು.
ಜೊತೆಗೆ ಗೃಹಮಂತ್ರಿ ವಿ.ಎಸ್. ಆಚಾರ್ಯ ಅವರ ಖಾತೆಯನ್ನು ಏನಂತಾ ಬರೆದಿದ್ದರೆ ನೋಡಿ
"HOUSE MINISTER" ಅಂತೆ.
HOME MINISTER ಖಾತೆಗೆ ಇವರು ಕೊಟ್ಟಿರುವ ಹೆಸರು ಅನ್ಸುತ್ತೆ.
HOME ಮತ್ತು HOUSE ಅನ್ನೋದಕ್ಕೆ ಒಂದೇ ಅರ್ಥ ಆಲ್ವಾ ಇಂಗ್ಲಿಷ್ ನಲ್ಲಿ,
ಅದಕ್ಕೆ ಈ ಭೂಪರು ಈ ರೀತಿ ಕೂಡ ಬರೆಯಬಹುದು ಅಂತಾ ಅನ್ಕೊಂಡಿದಾರೆ.
ಕನ್ನಡಮ್ಮ ನೀನೆ ಧನ್ಯೆ.

ಇವರಿಗೆ ಬಿ.ಜೆ.ಪಿ ಯ ಮೇಲೆ ಪ್ರತಿಭಟನೆ ನಡೆಸಲು ಒಂದು ನೆಪ ಸಾಕು ಅಷ್ಟೆ.
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Sunday, January 25, 2009

ಸಖತ್ ಸಮಜಾಯಿಷಿಗಳು !!

ಇದು ನನ್ನ ವೃತ್ತಿ ಬದುಕಿನಲ್ಲಿ ನನ್ನ ಸಹೋದ್ಯೋಗಿಯೊಬ್ಬರು ಅವರ ಮನೆಯಲ್ಲಿ ಎರಡು ಬೇರೆ ಬೇರೆ ಸಂದರ್ಭದಲ್ಲಿ ಕೊಟ್ಟ ಸಮಜಾಯಿಷಿಗಳು. ಮೊದಲ ಬಾರಿ ನಾವುಗಳು ಇದನ್ನು ಅವರ ಬಾಯಿಂದಲೇ ಕೇಳಿದಾಗ ಯದ್ವಾ ತದ್ವಾ ನಕ್ಕಿದ್ವಿ.
ಈಗಲೂ ಕೂಡಾ ಹಳೆಯ ಕೊಲೀಗುಗಳು ಸಿಕ್ಕಾಗ ಇದನ್ನು ನೆನೆಸಿಕೊಂಡು ಸಖತ್ತಾಗಿ ನಗ್ತೀವಿ.

ಇದನ್ನು ಓದಿದಕ್ಕಿಂತಾ ಹೇಳುವುದನ್ನು ಕೇಳಿದರೆ ಇನ್ನೂ ಮಸ್ತ್ ಎಫೆಕ್ಟು ಗ್ಯಾರಂಟಿ, ಅದ್ರೂ ನಿಮ್ಮನ್ನು ಈ ಬರಹದ ಮೂಲಕ ನಗಿಸಲು ಶತಪ್ರಯತ್ನ ಮಾಡ್ತಾ ಇದೀನಿ.

ಇದನ್ನು ಸಂಭಾಷಣೆ ಮೂಲಕ ನಿಮ್ಮ ಮುಂದೆ ಇಡ್ತಾ ಇದೀನಿ.

ನಮ್ಮ Mr. X ಅಪರೂಪಕ್ಕೆ ಬಿಯರ್ ಹಾಕೋ ಅಭ್ಯಾಸ ಇಟ್ಕೊಂಡಿದ್ರು. ಆದ್ರೆ, ಮನೆಯವರಿಗೆ ಇದು ಗೊತ್ತಿರ್ಲಿಲ್ಲ.

ಸಂದರ್ಭ 1 -

ಅವರ ಸ್ನೇಹಿತ ಫ್ರಾನ್ಸಿನಿಂದ ಬಂದಾಗ, ಇವ್ರಿಗೆ ಒಂದು ಬಾಟಲ್ ಒಳ್ಳೇ ರೆಡ್ ಫ್ರೆಂಚ್ ವೈನ್ ತಂದು ಕೊಟ್ಟಿದ್ರು. ಇದನ್ನು ಇವರು ಪೇಪರಿನಲ್ಲಿ ಜತನವಾಗಿ ಸುತ್ತಿ, ಮನೆಯ ಕಪಾಟಿನಲ್ಲಿ ಇಟ್ಟಿದ್ರು. ಇದು ಅವರ ಮಡದಿಗೂ ಗೊತ್ತಾಯ್ತು. ಇವ್ರು ಏನ್ ಮಾಡ್ತಾ ಇದ್ರು ಅಂದ್ರೆ, ಅವಾಗವಾಗ ಆ ಬಾಟಲಿನಿಂದ ಸ್ವಲ್ಪ ಸ್ವಲ್ಪ ವೈನ್ ಕುಡಿತಾ ಇದ್ರು. ಸುಮಾರು ಎರಡು ತಿಂಗಳಾದ ಮೇಲೆ, ಅವರ ಮಡದಿ ಮುಕ್ಕಾಲು ಖಾಲಿಯಾಗಿದ್ದ ಬಾಟಲನ್ನು ನೋಡಿ
"ಏನ್ರೀ ಇದೂ, ಇದನ್ನು ನೀವು ತಂದಾಗ ನೋಡಿದ್ದೆ, ಫುಲ್ಲ್ ಬಾಟಲ್ ಇತ್ತು, ಈಗ ಮುಕ್ಕಾಲು ಖಾಲಿ ಆಗಿದೆ !! ನೀವೇನೇ ಕುಡ್ದಿರ್ತೀರಾ.. ನಂಗೆ ಗೊತ್ತು..." ಅಂತಾ ವರಾತ ತೆಗೆದ್ರು.
ಅದಕ್ಕೆ ನಮ್ಮ್ Mr. X, "ಇಲ್ಲಪ್ಪಾ, ನಾನ್ಯಾಕೆ ಕುಡೀಲಿ.. ಇದು ವೈನ್ ಅಲ್ವಾ? ಸ್ಪಿರಿಟ್ಟು, ನಾನು ಬಾಟಲ್ ತಂದಾಗ ಸ್ವಲ್ಪ ಟೇಸ್ಟ್ ನೋಡಿದ್ದೆ, ಮುಚ್ಚಳ ಸರಿಯಾಗಿ ಮುಚ್ಚಿರ್ಲಿಲ್ಲಾ, ಅದಕ್ಕೆ ಸ್ಪಿರಿಟ್ಟು EVAPORATE ಆಗಿದೆ, ಅಷ್ಟೇ..." ಅನ್ನೋದಾ ?

ಸಂದರ್ಭ 2 (ಇದಕ್ಕೇ ನಾವೆಲ್ಲಾ ಕೇಕೆ ಹಾಕಿ ನಗೋದು) -

ಇದು ದೀಪಾವಳಿಯ ಒಂದು ತಿಂಗಳ ಮುಂಚೆ ನಡೆದ ಘಟನೆ.
ಇವರ ಶ್ರೀಮತಿ ತವರಿಗೆ ಹೋಗಿದ್ದಾಗ, ಅಣ್ಣಾವ್ರು ಮನೆಗೆ ಒಂದು ಬಾಟಲ್ ಬಿಯರ್ ತಗೊಂಡು ಹೋಗಿ ಕುಡಿದಿದ್ರು. ಜಾಸ್ತಿ ಅಲ್ಲಾ, ಒಂದೇ ಒಂದು ಸಾರಿ ಒಂದೇ ಬಾಟಲ್ ಬಿಯರ್. ಅದನ್ನ ಬಿಸಾಡೋಕ್ಕೆ ಮರೆತು ಹೋದ್ರು. ಶ್ರೀಮತಿ ವಾಪಸ್ ಬಂದಾಗ ಮನೆ ಒಮ್ಮೆ ಕ್ಲೀನ್ ಮಾಡ್ತಾ ಇದ್ದಾಗ, ಖಾಲಿ ಬಿಯರ್ ಬಾಟ್ಲು ಕಂಡಿದೆ. ಸಂಜೆ ಪತಿದೇವ್ರು ಬಂದಾಗ, ಅವರ ಎದುರು ಬಾಟಲನ್ನು ಹಿಡಿದು "ಏನ್ರೀ ಇದು ಬಿಯರ್ ಬಾಟ್ಲು ಮನೇಲಿ? ನಾನಿಲ್ಲ ಅಂದ್ರೆ ಹೇಳೋರು ಕೇಳೋರು ಯಾರು ಇಲ್ವಾ? ಯಾಕೆ ಕುಡುದ್ರಿ ಬಿಯರ್ ನಾ?" ಅಂತಾ ಸ್ವಲ್ಪ ಬೇಜರ್ ಮಾಡ್ಕೊಂಡು ಕೇಳಿದಾರೆ.
ಅದಕ್ಕೆ ನಮ್ಮ Mr. X ಅವ್ರು "ಇಲ್ಲಾ ಕಣೇ, ಮೊನ್ನೆ ಮನೆ ಹತ್ರ ನಡ್ಕೊಂಡು ಬರ್ತಾ ಇದ್ದೆ, ದಾರಿಯಲ್ಲಿ ಈ ಬಿಯರ್ ಬಾಟ್ಲು ಬಿದ್ದಿತ್ತು. ಇನ್ನೇನು ದೀಪಾವಳಿ ಬರ್ತಾ ಇದ್ಯಲ್ಲಾ, ಅವಗ ರಾಕೆಟ್ ಹಾರಿಸೋಕ್ಕೆ ಆಗುತ್ತೆ ಅಂತಾ ಎತ್ಕೊಂಡು ಬಂದೆ" ಅನ್ನೋದಾ ?

ಇದನ್ನ ಕೇಳಿ ಯಾವ್ ರೀತಿ ನಕ್ಕಿದೀವಿ ಅಂದ್ರೆ, ಅವತ್ತು ಕಣ್ಣಲ್ಲಿ ಫುಲ್ಲ್ ನೀರು. ಇವತ್ತಿಗೂ ಇದನ್ನ ನೆನೆಸಿಕೊಂಡ್ರೆ, ಹೊಟ್ಟೆ ಹಿಡ್ಕೊಂಡು ನಗ್ತೀವಿ.

ನಿಮ್ಗೂ ಸರಿಯಾಗಿ ನಗು ಬಂದಿದೆ ಅನ್ಕೊತೀನಿ. ಇದಕ್ಕೆ ನಿಮ್ಮ ಅಂಬೋಣ ?

ವಿ.ಸೂ : ಈ ಬರಹವನ್ನು Mr. X ಓದಿದರೆ ದಯವಿಟ್ಟೂ ಬೇಜಾರು ಮಾಡ್ಕೋಬಾರದಾಗಿ ವಿನಂತಿ. ಬೇಜಾರು ಮಾಡ್ಕೊಂಡಿದ್ದಿದ್ರೆ ನೀವು ನಮ್ಮ ಹತ್ರ ಈ ವಿಷಯ ಹೇಳ್ತಾ ಇರ್ಲಿಲ್ಲಾ ಅಲ್ವಾ ?
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Tuesday, January 20, 2009

ಮೊಬೈಲ್ ಸಂಸಾರ

ನಮ್ಮ ಬದುಕಿನ ಒಂದು ಮುಖ್ಯವಾದ ಘಟ್ಟವೆಂದರೆ ಪ್ರೀತಿ, ಪ್ರೇಮ, ಸಂಸಾರ.
ಪ್ರೀತಿ ಪ್ರೇಮ ಎಲ್ಲರಿಗೂ ಆಗಬೇಕೆಂದೇನಿಲ್ಲ, ಆದ್ರೆ ಆಲ್ಮೋಸ್ಟ್ ಎಲ್ರೂ ಸಂಸಾರಸ್ಥರಾಗ್ತಾರೆ.
ಈ ಗಂಡ ಹೆಂಡತಿಯ ನಡುವಿನ ಬದುಕು, ಸೊ ಕಾಲ್ಡ್ ಸಂಸಾರ ಅನ್ನೋದು ಒಂಥರಾ ಬೇವು ಬೆಲ್ಲದ ಆಟ.
ಕೆಲವೊಂದು ಸಂಸಾರಗಳಲ್ಲಿ ಬೇವು ಜಾಸ್ತಿ ಆಗಿರುತ್ತೆ, ಕೆಲವು ಕಡೆ ಬೆಲ್ಲ ಜಾಸ್ತಿ ಇರುತ್ತೆ.
ಸಮವಾಗಿ ಬೇವು ಬೆಲ್ಲ ಇರೋದು ಕೂಡಾ ಸುಮಾರು ನೋಡಿದೀವಿ. ಸರಿ, ಬೇವು ಬೆಲ್ಲವನ್ನು ಬಿಟ್ಟಾಕೋಣ, ಬಹಳ ಹಳೆ ಎಕ್ಸಾಂಪಲ್ ಆಯ್ತು ಇದು.
ನಮ್ಮ ಈಗಿನ ಕಾಲಕ್ಕೆ ಅನುಗುಣವಾಗಿ ಮೊಬೈಲ್ ಭಾಷೆಯಲ್ಲಿ ಹೇಳಬಹುದು.

ಗಂಡ – ಮೊಬೈಲು
ಹೆಂಡತಿ - ಬ್ಯಾಟರಿ ಚಾರ್ಜರ್
ಮದುವೆ ಅನ್ನೋದು - ಸಿಮ್ ಕಾರ್ಡು ವಿತ್ ಲೈಫ್ ಟೈಮ್ ವ್ಯಾಲಿಡಿಟಿ (ಏರ್ಟೆಲ್ 99ರೂ ಪ್ಯಾಕ್ ಥರ)

ಚಾರ್ಜರ್ ಇಲ್ದೆ ಮೊಬೈಲು ವೇಸ್ಟು, ಮೊಬೈಲ್ ಇಲ್ದೆ ಚಾರ್ಜರ್ ವೇಸ್ಟು.
ಮೊಬೈಲ್ ಗೆ ಬೇರೆ ಚಾರ್ಜರ್ ಉಪಯೋಗಿಸ್ತೀನಿ, ಅಥವಾ ಬೇರೆ ಮೊಬೈಲ್ ಗೆ ಚಾರ್ಜ್ ಕೊಡ್ತೀನಿ ಅನ್ನೋರು ಇದಾರೆ,
ಅವರ ಕಥೆ ಸಧ್ಯಕ್ಕೆ ಅಪ್ರಸ್ತುತ.

ಕರೆಕ್ಟಾಗಿ ಗಂಡ ಹೆಂಡತಿ ಮೊಬೈಲ್ ಹಾಗು ಚಾರ್ಜರ್ ಥರ ಇರಬೇಕು.
ಅವಳಿಲ್ದೆ ಇವ್ನು ವೇಸ್ಟು, ಇವ್ನಿಲ್ದೆ ಇವ್ಳು ವೇಸ್ಟು.
ಇನ್ನು ಮದ್ವೆ ಅನ್ನೋದು, ಲೈಫ್ ಟೈಮ್ ವ್ಯಾಲಿಡಿಟಿ ಇರೋ ಪ್ರೀಪೆಯ್ಡ್ ಸಿಮ್ ಕಾರ್ಡು.
ಮದ್ವೆ ಆಗೋದು ಸಿಮ್ ಕಾರ್ಡ್ ಆಕ್ಟಿವೇಶನ್.
ಮದುವೆಯನ್ನ ನಾನು ಪ್ರೀಪೆಯ್ಡ್ ಸಿಮ್ ಅಂತಾ ಯಾಕೆ ಹೇಳಿದೆ ಅಂದ್ರೆ, ಟೈಮ್ ಟು ಟೈಮ್ ಪ್ರೀತಿ, ವಿಶ್ವಾಸ, ನಂಬಿಕೆ, ಅಕ್ಕರೆಗಳನ್ನು ರೀಚಾರ್ಜ್ ಮಾಡದೆ ಇದ್ರೆ,
ಇನ್ ಕಮಿಂಗೂ ಇರಲ್ಲ, ಔಟ್ ಗೊಯಿಂಗಂತೂ ಮೊದ್ಲೇ ಇರಲ್ಲ. ಇದೆ ರೀತಿ ಜಾಸ್ತಿ ದಿನ ಬಿಟ್ರೆ ವ್ಯಾಲಿಡಿಟಿ ಹಾಳಾಗುತ್ತೆ.

ಇನ್ನೊಂದು ರೀತಿ ಹೇಳ್ಬೇಕು ಅಂದ್ರೆ ಗಂಡ ಹೆಂಡತಿ ೨ ಮೊಬೈಲ್ ಥರ ಇರುತ್ತಾರೆ.
ಇವರಿಬ್ಬರ ನಡುವಿನ ಪ್ರೀತಿ, ವಿಶ್ವಾಸ, ಅಕ್ಕರೆ, ಒಲವು - ಇವುಗಳು ಇನ್ಕಮಿಂಗ್ ಹಾಗು ಔಟ್ ಗೋಯಿಂಗ್ ಕಾಲ್ ಗಳಿದ್ದ ಹಾಗೆ.
ಒಂದೇ ಕಡೆಯಿಂದ ಕಾಲ್ ಬರಬಾರದು. ಒಮ್ಮೆ ಈ ಮೊಬೈಲಿಂದ ಕಾಲ್ ಬರಬೇಕು, ಮಗದೊಮ್ಮೆ ಆ ಮೊಬೈಲಿಂದ ಕಾಲ್ ಬರಬೇಕು. ಅವಾಗ್ಲೇ ಕನೆಕ್ಷನ್ ಸರಿಯಾಗಿ ಇರುತ್ತದೆ.
ಬರೀ ಒಂದೇ ಕಡೆಯಿಂದ ಕಾಲ್ ಬರ್ತಾ ಇದ್ದು, ಇನ್ನೊಂದು ಕಡೆಯಿಂದ ಏನೂ ಇಲ್ದೆ ಇದ್ರೆ, ಸದಾ ಕಾಲ್
ಮಾಡುತ್ತಿರುವವರ ಕರೆನ್ಸಿ (ಪ್ರೀತಿ, ಅಕ್ಕರೆ, ಒಲವು, ಎಲ್ಲಕಿಂತ ಹೆಚ್ಚಾಗಿ ವಿಶ್ವಾಸ) ಕಮ್ಮಿ ಆಗ್ತಾ ಹೋಗುತ್ತದೆ.
ಹೀಗೆಯೇ ಆಗ್ತಾ ಇದ್ರೆ, ಕೊನೆಗೆ ಈ ಕಡೆಯ ಮೊಬೈಲ್ ನಲ್ಲಿ ಕರೆನ್ಸಿ ಫುಲ್ ಕಮ್ಮಿ ಆಗುತ್ತೆ.
ಔಟ್ ಗೋಯಿಂಗ್ ಇರಲ್ಲ, ಕೊನೆಗೆ ಇನ್ಕಮಿಂಗ್ ಕೂಡಾ ಇರೋದಿಲ್ಲ.

ಆ ಕಡೆಯವರು ಇದನ್ನು ಬಹಳ ತಡವಾಗಿ ತಿಳಿದುಕೊಂಡು ಕಾಲ್ ಮಾಡಲು ಪ್ರಯತ್ನ ಪಟ್ಟರೂ, ಈ ಕಡೆಗೆ ಕನೆಕ್ಟ್ ಆಗಲ್ಲ.
ಕಾಲ್ ಮಾಡಿದಾಗ ಆ ಕಡೆಯಿಂದ ರಿಸೀವ್ ಮಾಡಿದರೆ ಓಕೆ, ರಿಸೀವ್ ಮಾಡ್ಲಿಲ್ಲ ಅಂದ್ರೆ ಬರೀ ಮಿಸ್ಡ್ ಕಾಲ್ ಆಗುತ್ತೆ.
ಬರೀ ಮಿಸ್ಡ್ ಕಾಲುಗಳು ಆದ್ರೆ ಸಖತ್ ಡೇಂಜರ್. ಸಂಬಂಧ ಕೆಡುತ್ತಾ ಹೋಗುತ್ತೆ. ಇಲ್ಲದ ಅನುಮಾನ, ಸಂಶಯಗಳಿಗೆ ಆಸ್ಪದ ಕೊಡುತ್ತೆ.
ಆದ್ದರಿಂದ, ಎರಡೂ ಮೊಬೈಲ್ಗಳ ನಡುವೆ ನಿರಂತರವಾಗಿ ಇನ್ಕಮಿಂಗ್ ಹಾಗು ಔಟ್ ಗೋಯಿಂಗ್ ನಡೀತಾ ಇರಬೇಕು.

ಏನಂತೀರಾ ?
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Saturday, January 17, 2009

ಕೋಗಿಲೆ ಇನ್ಮೇಲೆ ಹಾಡೋದಿಲ್ಲ

ಬೆಳಿಗ್ಗೆ ಎದ್ದು ಇಂಟರ್ನೆಟ್ ಗೆ ಕನೆಕ್ಟ್ ಆದ ಕೂಡಲೆ ಮೊದಲು ಗೊತ್ತಾದ ವಿಷಯ -
ಕೋಗಿಲೆ ಸುಮ್ಮನಾಗಿದ್ದು ಅಂದ್ರೆ ರಾಜು ಅನಂತಸ್ವಾಮಿಯ ನಿಧನ ವಾರ್ತೆ.
ರಾಜು ನಮ್ಮನ್ನು ಅಗಲಿದ್ದು, ಜನವರಿ 17, 2009 - 12:15 PM (ಭಾರತೀಯ ಕಾಲಮಾನ)

ಕನ್ನಡ ಭಾವಗೀತೆಯನ್ನು ಜನಪ್ರಿಯ ಹಾಗು ಒಂದು ಉಚ್ಛ ಸ್ಥಾನಕ್ಕೆ ಏರಿಸಿದ್ದ ಮೈಸೂರು ಅನಂತಸ್ವಾಮಿ ಅವರ ಮಗನಾದ ರಾಜು ಕೂಡಾ ತಮ್ಮ ತಂದೆಯ ಹೆಜ್ಜೆ ತುಳಿದವರು. ತಂದೆಯಂಥದ್ದೇ ಶಾರೀರ ಹೊಂದಿದ್ದ ರಾಜು, ಹಾಡುತ್ತಿದ್ದರೆ ಅನಂತಸ್ವಾಮಿಯವರೇ ಹಾಡುತ್ತಿದ್ದಹಾಗಿದೆ ಎಂದು ಬಹಳ ಹಿರಿಕರು ಹೇಳಿರುವುದನ್ನು ಮೈಸೂರಿನಲ್ಲಿ ನಡೆದ ಒಂದು ಭಾವಗೀತೆ ಸಂಜೆಯಲ್ಲಿ ಕೇಳಿದ್ದೆ.

ಭಾವಗೀತೆಯಲ್ಲದೆ ರಾಜು ಅವರು ಚಿತ್ರರಂಗದಲ್ಲಿ ಹಿನ್ನಲೆ ಗಾಯನ, ಸಣ್ಣ ಪ್ರಮಾಣದ ನಟನೆ ಮಾಡುತ್ತಿದ್ದರು. ಇವರು ಮಾತಾಡೋ ಶೈಲಿ, ಮುಖದಲ್ಲಿನ ತುಂಟ ಕಳೆ ಬಹಳ ಅಪೀಲಿಂಗ್ ಆಗಿ ಇದ್ದವು. ಇವುಗಳಲ್ಲದೆ, ಕನ್ನಡ ಟಿ.ವಿ ವಾಹಿನಿಯಲ್ಲಿ ಸಂಗೀತ ಸ್ಪರ್ಧೆಯೊಂದಕ್ಕೆ ತೀರ್ಪುಗಾರರಾಗಿಯೂ ಇದ್ದರು.

ಬಹಳ ಚಿಕ್ಕ ವಯಸ್ಸಲ್ಲಿ ಬಹಳಷ್ಟು ಭರವಸೆ ಮೂಡಿಸಿ, ಕೋಗಿಲೆ ಮರೆಯಾಯಿತು.
ರಾಜು ಅನಂತಸ್ವಾಮಿಯವರಿಗೆ ನಮ್ಮ ಭಾವಪೂರ್ಣ ಶ್ರದ್ಧಾಂಜಲಿ.
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Friday, January 16, 2009

ಆಟೋ ಅಣಿಮುತ್ತುಗಳು - ೫೫ - ಬಿಂದಾಸ್

ಮಿತ್ರ ಅರುಣ ಕಳ್ಸಿದ್ದು.
ಈ ಆಟೋ ಅಣ್ಣ ಫುಲ್ ಬಿಂದಾಸ್, ಜೊತೆಗೆ ಪವರ್ ಸ್ಟಾರ್ ಪುನೀತ್ ಅಭಿಮಾನಿ ಅನ್ಸುತ್ತೆ.
ಬಿ ಹ್ಯಾಪಿ, ನೋ ಬೀಪಿ.


--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Monday, January 12, 2009

ಆಟೋ ಅಣಿಮುತ್ತುಗಳು - ೫೪ - ಕನ್ನಡಮ್ಮನ ಸುಪುತ್ರ

ಸುಮಾರು ಒಂದು ವರ್ಷದಿಂದ ನಾನು ಈ ಆಟೋ ಅಣಿಮುತ್ತುಗಳ ಗೀಳು ಹಚ್ಚಿಕೊಂಡು ಎಷ್ಟೆಲ್ಲಾ ರೀತಿಯ ಫೋಟೋಗಳನ್ನು ಹಾಕಿದೀನಿ. ಆದ್ರೆ, ಮಿತ್ರ ಎಂ.ಡಿ ಅವರು ಈ ಆಟೋ ಹಾಗು ಇದರ ಮಾಲೀಕರ ಫೋಟೋ ಕೂಲಂಕುಶವಾಗಿ ತೆಗೆದು ಕಳಿಸಿದ್ದಾರೆ. ಮೊದಲನೆ ನೋಟಕ್ಕೆ ಇವರು ತಮ್ಮ ಆಟೋಗೆ ಮಾಡಿರುವ ಅಲಂಕಾರ, ಬರೆಸಿರುವುದನ್ನು ನೋಡಿದರೆ ಕೆಲವರಿಗೆ ನಗು ಬರಬಹುದು, ಕೆಲವರು ತಿಕ್ಕಲು ಅನ್ನಬಹುದು. ನನಗೆ ಮಾತ್ರ ಬಹಳ ಖುಷಿ ಮತ್ತು ಫೀಲಿಂಗ್ ಕೊಟ್ಟಿತು.
ಸ್ವಲ್ಪ ಯೋಚನೆ ಮಾಡಿ, ಈ ರೀತಿಯಾದ ಅಲಂಕಾರ, ಕನ್ನಡ ಅಣಿಮುತ್ತುಗಳನ್ನು ಅಂಟಿಸಲು ಸ್ಟಿಕ್ಕರ್ ಕಟಿಂಗ್, ಪೇಂಟಿಂಗ್, ಹಾರ ಅದೂ, ಇದೂ ಅಂತ ಸುಮಾರು ಸಾವಿರ ಖರ್ಚು ಮಾಡಿದ್ದಾರೆ. ನಮ್ಮಲ್ಲಿ ಸುಮಾರು ಜನಕ್ಕೆ ಮೂರು ನಾಲ್ಕು ಸಾವಿರ ಅಂಥದ್ದೇನು ದೊಡ್ಡ ಅಮೌಂಟು ಅನ್ನಿಸೋದಿಲ್ಲಾ ಬಿಡಿ. ಆದ್ರೆ, ಆಟೋ ಚಾಲಕನಾಗಿ, ಲಿಮಿಟೆಡ್ ವರಮಾನ ಇಟ್ಟುಕೊಂಡು, ತನ್ನ ಕನ್ನಡಾಭಿಮಾನವನ್ನು ತೋರ್ಪಡಿಸಿಕೊಂಡಿರುವ ಈ ಅಣ್ಣನಿಗೆ, ನನ್ನ ನಮಸ್ಕಾರಗಳು.
ಈ ಡ್ರೈವರ್ ಅಣ್ಣನ ಹೆಸರು "ರಾಜು". ನಿಜವಾಗಿಯೂ ಇವರು "ಕನ್ನಡಮ್ಮನ ಸುಪುತ್ರ".
ಈ ಫೋಟೋ ಕಳಿಸಿದ ಮಿತ್ರ ಎಂ.ಡಿ ಅವರಿಗೂ ಕೂಡ ಬಹಳಾ ಬಹಳಾ ಥಾಂಕ್ಸ್.

















-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Monday, January 5, 2009

ನನ್ನ ಆರ್ಕುಟ್ ಪ್ರೊಫೈಲ್ ಬದಲಾಗಿದೆ !

ಪ್ರಿಯ ಸ್ನೇಹಿತರೆ.

ಬದಲಾವಣೆಯೇ ಜೀವನ ಅಂತಾ ಹಿರಿಯರು ಹೇಳಿದ್ದಾರೆ. ಆದ್ರೆ, ಯಕಃಶ್ಚಿತ್ ಒಂದು ಆರ್ಕುಟ್ ಪ್ರೊಫೈಲ್ ಬದಲಾಯಿಸೋದು ಇಷ್ಟು ಕಷ್ಟ ಅಂತಾ ಗೊತ್ತಿರ್ಲಿಲ್ಲಾ ಕಣ್ರೀ. ಬದಲಾಯಿಸೋಕ್ಕೆ ಇವನಿಗೇನು ಬಂತು ಅನ್ಕೋಬೇಡಿ. ಓದಿ....

ಇಲ್ಲೀ ತನಕ ಅವರ ಆರ್ಕುಟ್ ಪಾಸ್ವರ್ಡ್ ಯಾರೊ ಎತ್ತಿ ಅವರ ಪ್ರೊಫೈಲನ್ನೇ ಪೂರ್ತಿ ಹಾಳು ಮಾಡಿದರು ಅಂತ ಕೇಳಿದ್ದೆ.
ಆದ್ರೆ ಈಗ ನನಗೇ ಈ ರೀತಿ ಆಯ್ತು. ನಾನು ತಕ್ಷಣ ಗೂಗಲ್ ಟೀಮಿಗೆ ಹೇಳಿದೆ. ಅದಕ್ಕೆ ಅವರು, ನನ್ನ ಪ್ರೊಫೈಲನ್ನೇ ಡಿಲೀಟ್ ಮಾಡಿದರು. ಯಾಕೆ ಏನು ಅಂತಾ ನಂಗೂ ಗೊತ್ತಿಲ್ಲಾ, ಆದ್ರೆ ಬಹಳ ವ್ಯಥೆ ಪಡ್ತಾ ಇದೀನಿ :(
3500+ Scraps, 227 Friends, 40+ Communities, 500 Photos, ಎಲ್ಲಕಿಂತಾ ದುಖ ಆಗ್ತಾ ಇರೋ ಸಂಗತಿ ಅಂದ್ರೆ, ನನ್ನ ಮೂತಿಗೂ 30 ಜನ FANS ಇದ್ರು ಕಣ್ರೀ. ಈ Scrap ಗಳ ಮೂಲಕ ಎಷ್ಟೊಂದು ಹೊಸಾ ಮಿತ್ರರು ಸಿಕ್ಕಿದ್ರು, ಎಷ್ಟು ಜನ ಹುಡುಗಿಯರ ಜೊತೆ ಫ್ಲರ್ಟ್ ಮಾಡಿದ್ದು, ಎಷ್ಟು ಜನರ ಜೊತೆ ನಾಯಿಗಳ ಥರ ಕಿತ್ತಾಡಿದ್ದು ಇತ್ತು ಗೊತ್ತಾ ?
ಸಿಕ್ಕಾಪಟ್ಟೆ ಬೇಜಾರ್ ಆಗ್ತಾ ಇದೆ.

ಆದ್ರೆ ಯಾಕೋ ಕಳೆದ ೩ ವರ್ಷಗಳಿಂದ ಈ ಆರ್ಕುಟ್ ಅನ್ನೋದು ಅಂಥರಾ ಚಟ ಆಗಿತ್ತು. ಬಿಟ್ಟಿರೋಕ್ಕೆ ಆಗ್ತಾ ಇಲ್ಲ.
ಅದಕ್ಕೆ ಆಗ್ಲೇ ಹೊಸಾ ಪ್ರೊಫೈಲ್ ಕ್ರಿಯೇಟ್ ಮಾಡಿಕೊಂಡೆ.
ದಯವಿಟ್ಟು : mandagere.shankar@gmail.com ನ ಆರ್ಕುಟ್ ನಲ್ಲಿ ಹುಡುಕಿ ಮಿತ್ರರಾಗಿ, ಅಥವಾ ಈ ಪ್ರೊಫೈಲ್ ಲಿಂಕಿಗೆ ಭೇಟಿ ಕೊಟ್ಟು ಮಿತ್ರರಾಗಿ :
http://www.orkut.com/Main#Profile.aspx?rl=mp&uid=15284715633000869506

ಹಾಗೆ, ಈಗಾಗ್ಲೇ ನನ್ನ ಫ್ಯಾನ್ಸ್ ಆಗಿದ್ದೋರು, ಮತ್ತೆ ಆಗಿ ಅಂತಾ ನಾಚ್ಕೆ, ಮಾನ, ಮರ್ಯಾದೆ ಬಿಟ್ಟು ಕೇಳ್ಕೊತಾ ಇದೀನಿ.
ಏನೂ ಪರ್ವಾಗಿಲ್ಲಾ ಅಲ್ವ ?
-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Sunday, January 4, 2009

ಆಟೋ ಅಣಿಮುತ್ತುಗಳು - ೫೩ - ಕನ್ನಡಿಗನ ತೇರು

"ಕೈ ಮುಗಿದು ಏರು, ಇದು ಕನ್ನಡಿಗನ ತೇರು"
ಈ ಅಣ್ಣನ ಕನ್ನಡಾಭಿಮಾನವನ್ನು ಮೆಚ್ಚತಕ್ಕದ್ದು. ನಿರಾಭಿಮಾನಿಗಳು ಇವನನ್ನು ನೋಡಿ ಕಲಿಯಲಿ.
ಇದೇ ರೀತಿಯ ಇನ್ನೊಂದು ತೇರಿನ ಫೋಟೋ ಮುಂಚೆ ಹಾಕಿದ್ದೆ. ಅದು ಕಾಲಭೈರವನ ತೇರು, ಇದು "ಕನ್ನಡಿಗನ ತೇರು.


-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Friday, January 2, 2009

ನನಗೇ ಗೌಡ್ರು !!

ಇದರ ಅರ್ಥ ಏನು ಅಂತಾ ಗೊತ್ತಾಗ್ತಾ ಇಲ್ಲ.
ನನಗೇ ಗೌಡ್ರು ಅಂದ್ರೆ ಏನು ಅಂತಾ ನೀವಾದ್ರೂ ಹೇಳಬಲ್ಲಿರಾ ?
ಮಿತ್ರ ಅರುಣ ಕಳ್ಸಿದ್ದು.

--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ