Showing posts with label ಆಸ್ಕರ್ರು. Show all posts
Showing posts with label ಆಸ್ಕರ್ರು. Show all posts

Tuesday, February 24, 2009

ಸ್ಲಂ ಡಾಗು, ಆಸ್ಕರ್ರು ಹಾಗು ಇಲ್ಲಿ ಅದರ ಸಂಭ್ರಮ

ಸ್ಲಮ್ ಡಾಗ್ ಮಿಲಿಯನೇರ್ ಚಿತ್ರಕ್ಕೆ ಎಂಟು ಆಸ್ಕರ್ ಬಂದಿದ್ದೆ ತಡ, ಸಂಭ್ರಮ ಶುರು ಆಗಿದೆ.
ಭಾರತದ ಸ್ಲಮ್ಮು, ಮತೀಯ ಗಲಭೆಗಳು, ಮಕ್ಕಳ ಶೋಷಣೆ, ಭಿಕ್ಷಾಟನೆ, ವೈಶ್ಯಾವಾಟಿಕೆ, ಕ್ವಿಜ್ ನಲ್ಲಿ ನಡೆಯಬಹುದಾದ ಮೋಸ ಇವಲ್ಲವನ್ನು ತೋರಿಸಿ, ಇದೆಲ್ಲ ಬರೀ ಭಾರತದಲ್ಲೇ ನಡೆಯಲು ಸಾಧ್ಯ ಅಂತ ಬಿಂಬಿಸಿ, ಪ್ರಶಸ್ತಿ ದೋಚಿದ್ದಾರೆ.

ಇದೆ ಚಿತ್ರ ಮಾಡಿದ್ದು ಏನಾದರೂ ಒಬ್ಬ ಭಾರತೀಯ ನಿರ್ದೇಶಕ, ನಿರ್ಮಾಪಕ ಆಗಿದ್ದಲ್ಲಿ, ಒಂದಾದರೂ ಆಸ್ಕರ್ ಬಾರೋ ಛಾನ್ಸ್ ಇತ್ತೇ ? ಹಾಳಾಗ ಹೋಗ್ಲಿ, ಯಾವ ಭಾಷೆಯ ಡೈರೆಕ್ಟರ್ ಆದ್ರೇನು, ನಮ್ಮ ರೆಹಮಾನ್ ಹಾಗು ಪೂಕುಟ್ಟಿ ಗೆ ಆಸ್ಕರ್ ಬಂದಿದ್ಯಲ್ಲ ಅಂತ ಖುಷಿ ಪಡಬೇಕು.

ಆದ್ರೆ, ಈಗ ನಮ್ಮಲ್ಲಿ ಖುಷಿ ಪಡೋ ರೀತಿ ಸಖತ್ತಾಗಿ ಚೇಂಜ್ ಆಗಿದೆ. ಮುಂಚೆ, ಪಟಾಕಿ ಸಿಡಿಸಿ, ಮೆರವಣಿಗೆ ಹೊರತು ಆಚರಿಸ್ತಾ ಇದ್ರೂ, ಈಗ ನೋಡ್ತಾ ಇರೀ..
ಗಲ್ಲಿ ಪಲ್ಲಿ, ಹಾದಿ ಬೀದಿ, ಸಂದಿ ಗೊಂದಿ, ರಸ್ತೆ ಪಸ್ತೆ ಎಲ್ಲಾ ಕಡೆ, ಮಿನಿಮಮ್ ಹತ್ತು ಮುಖಗಳು ಇದ್ದು, ಅದ್ರಲ್ಲಿ ಮಧ್ಯದಲ್ಲಿ ದೊಡ್ಡದಾಗಿ ಆ ಜಾಗದ ಒಬ್ಬ ಸೊ ಕಾಲ್ಡ್ ಸಮಾಜ ಸೇವಕ, ಯುವಕರ ಆಶಾಕಿರಣ, ಬಡವರ ಬಂಧು ಆಗಿರುವ ಒಬ್ಬ ಮಹಾನುಭಾವ, ಸ್ಲಮ್ ಡಾಗ್ ಮಿಲಿಯನೇರ್ ಚಿತ್ರ ಎಂಟು ಆಸ್ಕರ್ ಬಾಚಿರೋದಕ್ಕೆ ಅಭಿನಂದಿಸುತ್ತಾರೆ ಎಂಬ ವಿನೈಲ್ ಪೋಸ್ಟರುಗಳು.

ಇಂಥ ಜನಗಳಿಗೆ ಸುಮ್ನೆ ಒಂದು ಕಾರಣ ಬೇಕು ತಮ್ಮ ಮುಖಗಳನ್ನು ಹೀಗೆ ಹಾಕಿ ಕೊಳ್ಳೋದಕ್ಕೆ. ಪ್ರಚಾರದ ಹಪಾಹಪಿತನ.
ಈ ಮುಂಡೇವು ಅಭಿನಂದನೆ ಮಾಡದೆ ಇದ್ರೆ, ರೆಹಮಾನ್, ಪೂಕುಟ್ಟಿ, ಡ್ಯಾನಿ ಬಾಯ್ಲ್ ಏನಾದರೂ ಆತ್ಮಹತ್ಯೆ ಮಾಡ್ಕೋತಾರ?

ಆಗ್ಲೇ ಇದು ಶುರು ಆಗಿದೆ. ಕನ್ನಡಪ್ರಭ ಪತ್ರಿಕೆಯ ಈ ದಿನದ ಪೇಪರ್ ನಲ್ಲಿ ಬಂದಿರುವ ಚಿತ್ರ, ನೋಡಿ. ಆದ್ರೆ ಈ ಚಿತ್ರದಲ್ಲಿ ಯಾವ ಬಡವರ ಬಂಧುವಿನ ಫೋಟೋ ಇಲ್ಲ, ಇನ್ನು ೨-೩ ದಿನ ತಡೆಯಿರಿ ಶುರು ಆಗುತ್ತೆ. ಪೋಸ್ಟರುಗಳು ಪ್ರಿಂಟ್ ಆಗ್ತಾ ಇವೆ.
------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ